Don't Miss!
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ಕುಟುಂಬದ ಮನೆ ಮೂರಾದರೇನಾಯ್ತು, ಪ್ರೀತಿಗೆ ಒಂದೇ ಬಾಗಿಲು
ಅಣ್ಣ ತಮ್ಮಂದಿರು ಹೇಗಿರಬೇಕು ಎಂದರೆ ಅಣ್ಣಾವ್ರ ಮಕ್ಕಳನ್ನು ತೋರಿಸಬೇಕು. ಅಣ್ಣ ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ರಾಜ್ ಮಕ್ಕಳು ಸ್ನೇಹಿತರಂತೆ ಇದ್ದಾರೆ. ಅದಕ್ಕೆ ತಾಜಾ ಉದಾಹರಣೆ ಅಂದರೆ 'ಗ್ರಾಮಾಯಣ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದ ವೇದಿಕೆ.
ಅಣ್ಣ - ತಮ್ಮ ಎಂದ ಮೇಲೆ ಸಣ್ಣ ಪುಟ್ಟ ಮಾತುಗಳು ಬಂದು ಹೋಗುವುದು ಸಾಮಾನ್ಯ. ಆದರೆ, ಅಣ್ಣಾವ್ರ ಮಕ್ಕಳ ಮಧ್ಯೆಯೂ ಈ ರೀತಿ ಆಗಿತ್ತಾ? ಗೊತ್ತಿಲ್ಲ. ಆದರೆ, ಕೆಲವರು ಮಾತ್ರ ರಾಜ್ ಪುತ್ರರು ಯಾಕೆ ಬೇರೆ ಬೇರೆ ಮನೆಯಲ್ಲಿ ಇದ್ದಾರೆ ಎಂದು ಪದೇ ಪದೇ ಕೊಂಕು ತೆಗೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ, ಮನೆ ದೂರ ಇದ್ದರೂ ಅಣ್ಣಾವ್ರ ಮಕ್ಕಳ ಮನಸ್ಸು ಹತ್ತಿರದಲ್ಲಿ ಇದೆ.
ಡಾ.ರಾಜ್ ಕುಟುಂಬವನ್ನ ಪರಿಚಯ ಮಾಡಿದ ಅಪರೂಪದ ವಿಡಿಯೋ
ಅಂದಹಾಗೆ, ಸದ್ಯ ತಮ್ಮ ಕುಟುಂಬದ ಬಗ್ಗೆ ಮಾತನಾಡಿರುವ ಶಿವಣ್ಣ ''ನಮ್ಮ ಕುಟುಂಬದಲ್ಲೂ ಸಣ್ಣ ಪುಟ್ಟ ಮನಸ್ತಾಪ ಇದೆ. ಆದರೆ, ಯಾವತ್ತೂ ಬೇರೆ ಆಗಲ್ಲ'' ಎಂದಿದ್ದಾರೆ. ಮುಂದೆ ಓದಿ...
'ಗ್ರಾಮಾಯಣ' ಚಿತ್ರದ ಕಾರ್ಯಕ್ರಮ
'ಗ್ರಾಮಾಯಣ' ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನಟನೆಯ ನಾಲ್ಕನೇ ಸಿನಿಮಾ. ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆಯಿತು. ಈ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಮೂವರು ಆಗಮಿಸಿದ್ದರು. ಮೂವರನ್ನ ಒಂದೇ ವೇದಿಕೆಯಲ್ಲಿ ನೋಡುವುದೇ ಚಂದವಾಗಿತ್ತು.
ನಾವು ಯಾವತ್ತೂ ಬೇರೆ ಆಗಲ್ಲ
ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್ ''ನಾನು ಅಪ್ಪು, ರಾಘು ಮೂರು ಜನ ಬೇರೆ ಬೇರೆ ಮನೆಯಲ್ಲಿದ್ದರೂ ನಮ್ಮ ಮನಸ್ಸು ಒಂದೇ. ನಮ್ಮಲ್ಲಿ ಏನೋ ಸಣ್ಣ ಪುಟ್ಟ ಮನಸ್ತಾಪ ಬಂದರೂ ಯಾವತ್ತೂ ಬೇರೆ ಆಗಲ್ಲ.'' ಎಂದಿದ್ದಾರೆ.
ರಾಜ್ ಕುಮಾರ್ ಮಕ್ಕಳು ಯಾವತ್ತೂ ಒಂದೇ
''ಸಮಾಜದಲ್ಲಿ ಇರುವಂತೆ ನಮ್ಮ ಕುಟುಂಬದಲ್ಲೂ ಸಣ್ಣ ಪುಟ್ಟ ಮನಸ್ತಾಪ ಇದೆ. ಆದರೆ ನಾವು ಮೂರು ಜನ ಯಾವತ್ತು ಯಾವ ಆಸ್ತಿಗೂ ಆಸೆ ಪಟ್ಟವರಲ್ಲ. ರಾಜ್ ಕುಮಾರ್ ಮಕ್ಕಳು ಯಾವತ್ತೂ ಒಂದೇ.'' ಎಂದು ಅಣ್ಣ ತಮ್ಮಂದಿರ ಬಾಂದವ್ಯವನ್ನು ಇನ್ನು ಗಟ್ಟಿಕೊಳ್ಳಿಸಿದ್ದಾರೆ.
ಎಲ್ಲ ಮಾತುಗಳಿಗೆ ತೆರೆ ಎಳೆದ ದೊಡ್ಮಗ
ಅಣ್ಣಾವ್ರ ಮಕ್ಕಳು ಒಂದೇ ಮನೆಯಲ್ಲಿ ವಾಸವಾಗಿಲ್ಲ ಎಂಬ ಕಾರಣಕ್ಕೆ ಕೆಲವರು ರಾಜ್ ಮಕ್ಕಳ ನಡುವೆ ಮನಸ್ತಾಪ ಇದೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಆದರೆ, ಅಣ್ಣಾವ್ರ ದೊಡ್ಮಗ ಶಿವರಾಜ್ ಕುಮಾರ್ ಈ ಬಗ್ಗೆ ನೇರವಾಗಿ ಉತ್ತರ ನೀಡಿದ್ದಾರೆ.
{document1}