ಗೆಳೆಯ ದರ್ಶನ್ ದಾರಿಯನ್ನು ಹಿಂಬಾಲಿಸಿದ ಸೃಜನ್
Recommended Video

ಎಂಥಾ ಕೆಲಸ ಮಾಡಿದ್ದಾರೆ ನೋಡಿ ಸೃಜನ್ ಲೋಕೇಶ್..! | Filmibeat Kannada
ನಟ ದರ್ಶನ್ ಪ್ರಾಣಿ ಪ್ರಿಯ ಎಂಬುದು ಎಲ್ಲರಿಗೆ ತಿಳಿದಿರುವ ವಿಷಯ. ಈಗಾಗಲೇ ದರ್ಶನ್ ಅನೇಕ ಪ್ರಾಣಿಗಳನ್ನು ದತ್ತು ಪಡೆದುಕೊಂಡು ವನ್ಯ ಜೀವಿಗಳಿಗೆ ಆಸರೆ ಆಗಿದ್ದಾರೆ. ಅದೇ ರೀತಿ ಇದೀಗ ಅವರ ದಾರಿಯನ್ನೆ ಗೆಳೆಯ ಸೃಜನ್ ಲೋಕೇಶ್ ಕೂಡ ಪಾಲಿಸುತ್ತಿದ್ದಾರೆ.
ನಟ ಸೃಜನ್ ಸಹ ಈಗ ಮೈಸೂರು ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

''ಮೈಸೂರು ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿರುವ ನನ್ನ ಗೆಳೆಯ ಸೃಜನ್ ಗೆ ಅಭಿನಂದನೆಗಳು. ವನಜೀವಿ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕೆ ಅನುಗುಣವಾಗಿ ನಮ್ಮ ಕೈಲಾದ ಸೇವೆಯನ್ನು ಮಾಡೋಣ'' ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.
ದರ್ಶನ್ ರೀತಿ ಸೃಜನ್ ಕೂಡ ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಇದು ದರ್ಶನ್ ಗೆ ತುಂಬ ಖುಷಿ ಕೊಟ್ಟಿದೆ. ನಮ್ಮ ದೇಶದ ರಾಷ್ಟ್ರ ಪ್ರಾಣಿ ಹುಲಿಯ ಆರೈಕೆಯನ್ನು ಸೃಜ ಮಾಡುತ್ತಿದ್ದಾರೆ.
More from Filmibeat
English summary
Kannada actor Srujan Lokesh adopted a tiger.


Click it and Unblock the Notifications











