Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚ ಸುದೀಪ್ ಈಗ ಆಧಾರ್ ರಾಯಭಾರಿ
ಪಾಸ್ ಪೋರ್ಟ್ ಮಾಡಿಸಬೇಕಾ...ಎಲ್.ಪಿ.ಜಿಗೆ ಸಬ್ಸಿಡಿ ಬೇಕಾ...ಬ್ಯಾಂಕ್ ಅಕೌಂಟ್ ಓಪನ್ ಮಾಡಬೇಕಾ...ಎಲ್ಲೇ ಹೋದರೂ ನೀವು ನಿಮ್ಮ ಆಧಾರ್ ಕಾರ್ಡ್ ತೋರಿಸಲೇಬೇಕು! ಹೀಗಿದ್ದರೂ, ಬಹುತೇಕ ಮಂದಿಯ ಬಳಿ ಆಧಾರ್ ಕಾರ್ಡ್ ಇಲ್ಲ. ಆಧಾರ್ ಕಾರ್ಡ್ ನಿಂದಾಗುವ ಉಪಯೋಗಗಳೂ ಅನೇಕರಿಗೆ ಗೊತ್ತಿಲ್ಲ.
ಅದಕ್ಕಾಗಿ ಆಧಾರ್ ಇ-ಆಡಳಿತ ಕೇಂದ್ರ ಒಂದು ಪ್ಲಾನ್ ಮಾಡಿದೆ. ಆಧಾರ್ ಯೋಜನೆಯ ಉದ್ದೇಶ, ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಚಿತ್ರನಟ ಸುದೀಪ್ ಅವರನ್ನು ರಾಯಭಾರಿಯಾಗಿ ನೇಮಿಸಿದೆ.
ಇದರೊಂದಿಗೆ, ಆಧಾರ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಬೆಂಗಳೂರು ಒನ್, ಕರ್ನಾಟದ ಒನ್ ಮತ್ತು ನಾಡಕಚೇರಿಗಳಲ್ಲಿ ಶಾಶ್ವತ ಆಧಾರ್ ನೋಂದಣಿ ಕೇಂದ್ರಗಳನ್ನ ಕೂಡ ಇ-ಆಡಳಿತ ಕೇಂದ್ರ ಆರಂಭಿಸುತ್ತಿದೆ. [ಬೆಂಗಳೂರು ಟ್ರಾಫಿಕ್ ರಾಯಭಾರಿ ಕಿಚ್ಚ ಸುದೀಪ್]
ಸುದೀಪ್ ಹೀಗೆ ರಾಯಭಾರಿಯಾಗಿರುವುದು ಇದೇ ಮೊದಲೇನಲ್ಲ. ಆಟೋ ಡ್ರೈವರ್ ಗಳು ಅಡ್ಡಾದಿಡ್ಡಿಯಾಗಿ ಓಡಿಸಬಾರದು ಅನ್ನುವ ಸಂದೇಶ ಸಾರೋಕೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಕಿಚ್ಚ ಸುದೀಪ್ ಬ್ರ್ಯಾಂಡ್ ಅಂಬಾಸಿಡರ್ ಅಗಿದ್ದರು.
ಇನ್ನು ಕಮರ್ಶಿಯಲ್ ಬಗ್ಗೆ ಹೇಳ್ಬೇಕು ಅಂದ್ರೆ, ಇಂಟೆಕ್ಸ್ ಮೊಬೈಲ್, ಪಾರಾಗಾನ್ ಪಾದರಕ್ಷೆ ಮತ್ತು ಜಾಯ್ ಅಲುಕ್ಕಾಸ್ ಆಭರಣಗಳಿಗೆ ಸುದೀಪ್ ಪ್ರಚಾರ ರಾಯಭಾರಿ. (ಏಜೆನ್ಸೀಸ್)