Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖ್ಯಾತ ಖಳ ನಟ ಸುಧೀರ್ ಅಗಲಿ ಇಂದಿಗೆ 20 ವರ್ಷ
ಕನ್ನಡ ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಅಭಿಮಾನಿಗಳನ್ನು ಬಿಟ್ಟು ಹೋಗಿ ಇಂದಿಗೆ 20 ವರ್ಷ ಕಳೆದಿದೆ. ಜೂನ್ 13, 1999 ರಲ್ಲಿ ಸುಧೀರ್ ಇಹಲೋಕ ತ್ಯಜಿಸಿದ್ದರು.
ಅಪ್ಪ ಅಗಲಿದ ದಿನ ತಮ್ಮ ನೋವನ್ನು ನಿರ್ದೇಶಕ ತರುಣ್ ಸುಧೀರ್ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನೀನು ಇರುವ ಧೈರ್ಯದಲ್ಲಿ ಯಾರೊಂದಿಗೂ ನಾ ಸೋಲಲ್ಲ.. ನಿನ್ನ ಪ್ರೀತಿ ಮುಂದೆ ಏನಿಲ್ಲ.. ಅಪ್ಪ I love u pa..." ಎಂದು 'ಚೌಕ' ಚಿತ್ರದ ಹಾಡಿನ ಮೂಲಕ ಅವರಿಗೆ ನಮಿಸಿದ್ದಾರೆ.
Exclusive : ಸುದೀಪ್, ರಕ್ಷಿತ್ ವಿವಾದದ ಬಗ್ಗೆ ಕ್ಲಾರಿಟಿ ನೀಡಿದ ತರುಣ್
''ಅಪ್ಪ ನೀನು ನಮ್ಮನ್ನು ಬಿಟ್ಟು ಹೋಗಿ ಇಂದಿಗೆ 20 ವರ್ಷ. ನಾನು ಇಂದು ಏನೇ ಆಗಿದ್ದರು ಅದು ನಿನ್ನ ಆಶೀರ್ವಾದದಿಂದ ಮಾತ್ರ.'' ಎಂದು ತನ್ನ ಸಾಧನೆಯನ್ನು ತಂದೆಗೆ ಅರ್ಪಿಸಿದ್ದಾರೆ.
ಸುಧೀರ್ 200ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿ ಕನ್ನಡದ ಜನಪ್ರಿಯ ಖಳನಟರಾಗಿದ್ದರು. ಅವರ ಇಬ್ಬರು ಪುತ್ರರು ಇಂದು ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ಸ್ ಆಗಿದ್ದಾರೆ. ತರುಣ್ ಸುಧೀರ್ 'ಚೌಕ' ಸಿನಿಮಾದ ಬಳಿಕ 'ರಾಬರ್ಟ್' ಸಿನಿಮಾ ಶುರು ಮಾಡಿದ್ದಾರೆ.
ಮತ್ತೊಬ್ಬ ಮಗ ನಂದ ಕಿಶೋರ್ ಈಗಾಗಲೇ ಆರು ಚಿತ್ರದ ನಿರ್ದೇಶನ ಮಾಡಿ ಈಗ ಏಳನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ. 'ಪೊಗರು' ಅವರ ಮುಂದಿನ ಸಿನಿಮಾವಾಗಿದೆ.