Don't Miss!
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಾಳ ನೆನಪು : ಆ ಭೀಕರ ಘಟನೆ ನಡೆದು ಇಂದಿಗೆ 25 ವರ್ಷಗಳು
Recommended Video
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೆಲವು ಘಟನೆಗಳು ಕರಾಳ ನೆನಪುಗಳಾಗಿ ಉಳಿದುಕೊಂಡಿವೆ. ಅ ರೀತಿ ಜುಲೈ 25, 1994 ರಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಕನ್ನಡದ ಪ್ರತಿಭಾವಂತ ನಟ ಸುನೀಲ್ ಮರೆಯಾದರು.
ನಟ ಸುನೀಲ್ ವಿಧಿವಶರಾಗಿ ಇಂದಿಗೆ 25 ವರ್ಷಗಳು ಕಳೆದಿವೆ. 25 ವರ್ಷಗಳ ಹಿಂದೆ ಇದೇ ದಿನ ಚಿತ್ರದುರ್ಗದ ಬಳಿ ಕಾರಿನಲ್ಲಿ ನಟ ಸುನೀಲ್, ನಟಿ ಮಾಲಾಶ್ರೀ ಹಾಗೂ ಸುನೀಲ್ ಸಹೋದರ ಸಚ್ಚಿನ್ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅವರ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು.
ದುರಂತದಲ್ಲಿ ಕೊನೆಯಾದ ಕನ್ನಡ ಚಿತ್ರರಂಗದ ನಟ ನಟಿಯರ ಬದುಕು
ಚಿತ್ರದುರ್ಗದಿಂದ 13 ಕಿಲೋ ಮೀಟರ್ ದೂರದಲ್ಲಿ ಇರುವ ಮಾದನಾಯಕನ ಹಳ್ಳಿಯಲ್ಲಿ ಈ ಅವಘಾತ ನಡೆದಿತ್ತು. ಘಟನೆಯಲ್ಲಿ ಕಾರಿನ ಚಾಲಕ ಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟರು. ಎರಡು ಕಾಲುಗಳನ್ನು ಬಲವಾದ ಹೊಡೆತ ಬಿದ್ದಿತ್ತು, ಸುನೀಲ್ ಚಿತ್ರದುರ್ಗದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಟಿ ಮಾಲಾಶ್ರೀ ತಲೆಗೆ ಪೆಟ್ಟು ಬಿದ್ದು, ಅವರು ಹಾಗೂ ಸುನೀಲ್ ಸಹೋದರ ಅಪಾಯದಿಂದ ಪಾರಾದರು. ಇಂತಹ ಕರಾಳ ಘಟನೆ ನಡೆದು ಈಗ 25 ವರ್ಷಗಳು ಕಳೆದಿವೆ.
ನಟ ಸುನೀಲ್ ಕನ್ನಡದ ಸುಂದರ ನಟರಾಗಿದ್ದರು. 'ದ್ರಾಕ್ಷಾಯಿಣಿ' 'ಬೆಳ್ಳಿ ಕಾಲುಂಗುರ, 'ಮೆಚ್ಚಿದ ಮದುಮಗ', 'ಶೃತಿ', 'ಶಾಂಭವಿ', 'ನಗರದಲ್ಲಿ ನಾಯಕರು' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.
ಮೂಲತಃ ಉಡುಪಿಯವರಾಗಿದ್ದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ಬಂದಿದ್ದರು. ಬರೀ ಮೂರೇ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದರು. ಇಂತಹ ಒಳ್ಳೆಯ ನಟ ಕೇವಲ 30 ವರ್ಷಕ್ಕೆ ತಮ್ಮ ಬದುಕಿನ ವಿದಾಯ ಹೇಳಿದರು.