Don't Miss!
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- News ಮತದಾನದ ದಿನ ಬೆಳಗ್ಗೆ ಸಿಗಲ್ಲ ಬಾಡಿಗೆ ವಾಹನಗಳು!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು ಯಶ್ ಹೇಳಿದ್ದ ಒಂದೊಂದು ಮಾತು ಇಂದು ನಿಜ ಆಗ್ತಿದೆ.!
Recommended Video
ರಾಕಿಂಗ್ ಸ್ಟಾರ್ ಯಶ್ ಇಂದು ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಕೆಜಿಎಫ್ ಎಂಬ ದೊಡ್ಡ ಸಿನಿಮಾ ಮಾಡಿ, ಇಡೀ ಭಾರತವೇ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ್ದಾರೆ.
ಯಶ್ ಅಭಿನಯದ ಕೆಜಿಎಫ್ ಚಿತ್ರದ ಬರಿ ಟ್ರೈಲರ್ ನೋಡಿಯೇ ಪರಭಾಷಿಗರು ವಾವ್ ಎಂದು ನೋಡುವಂತಾಗಿದೆ. 'ಯಾರು ಇದು ಯಶ್' ಎಂದು ಗೂಗಲ್ ನಲ್ಲಿ ಹುಡುಕುತ್ತಿದ್ದಾರೆ. ಅಂತವರಿಗೆಲ್ಲಾ ಸ್ವತ ಯಶ್ ಅವರೇ 'ದಿ ನೇಮ್ ಈಸ್ ಯಶ್, ಐ ಯಾಮ್ ಫ್ರಮ್ ಕರ್ನಾಟಕ' ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ.
ಟ್ವಿಟ್ಟರ್ ನಲ್ಲಿ ಯಶ್ ಹೆಸರು ಬದಲಾವಣೆ: ಕೆಲವರು ಟೀಕೆ, ಕೆಲವರು ಬೆಂಬಲ
ಚಿತ್ರರಂಗಕ್ಕೆ ಬಂದಾಗನಿಂದಲೂ ಯಶ್ ಅವರಲ್ಲಿ ಒಂದು ಛಲ, ಒಂದು ಗುರಿ. ಇಡೀ ಭಾರತ ಮಾತ್ರವಲ್ಲ ಜಗತ್ತು ನಮ್ಮ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಬೇಕು. 'ಇದು ಜಸ್ಟ್ ಬಿಗಿನಿಂಗ್' ಎಂದು 2015ರ ಸೈಮಾ ಅವಾರ್ಡ್ ಸಮಾರಂಭದಲ್ಲಿ ಪ್ರಶಸ್ತಿ ಪಡೆದಾಗ ಹೇಳಿದ್ದರು. ಹೀಗೆ, ಯಶ್ ಹೇಳಿದ ಒಂದೊಂದು ಡೈಲಾಗ್ ಗಳು ಕೂಡ ಇಂದಿನ ಸಂದರ್ಭಕ್ಕೆ ಸೂಕ್ತವಾಗಿದೆ. ಅದರಲ್ಲಿ ಕೆಲವನ್ನ ನೋಡೋಣ. ಮುಂದೆ ಓದಿ.....
ಹವಾ ಅಂದ್ರೆ ಇದೇ ಇರ್ಬೇಕು
''ನಾನು ಬರೋವರ್ಗು ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೆ ಹವಾ''. ಈ ಡೈಲಾಗ್ ಯಶ್ ವೃತ್ತಿ ಜೀವನವನ್ನೇ ಬದಲಿಸಿತು ಅಂದ್ರೆ ತಪ್ಪಾಗಲಾರದು. ಅಂದು ಈ ಡೈಲಾಗ್ ವಿರುದ್ಧ ಅನೇಕರು ಕಿಡಿಕಾರಿದ್ದರು. ಆದ್ರೆ, ಇಂದು ಈ ಡೈಲಾಗ್ ಆಗ ಹೇಳಿದ್ದು ಈಗ ಸಾರ್ಥಕವಾಗಿದೆ ಎನ್ನುವಂತಾಗಿದೆ. ಹೌದು, ಕನ್ನಡ ಸಿನಿಮಾದ ತಾಕತ್ತನ್ನ ಬೇರೆ ಇಂಡಸ್ಟ್ರಿಗೆ ಪರಿಚಯ ಮಾಡಿಸೋಕೆ ಯಶ್ ಮತ್ತು ಕೆಜಿಎಫ್ ಒಂದು ರೀತಿ ಮೆಟ್ಟಿಲಾದರು.
ಅಂದು ಬಂದಿದ್ದು ಸುಳ್ಳು, ಇಂದು ಹೇಳ್ತಿರೋದು ನಿಜ: ರಾಜಮೌಳಿ ಜೊತೆ ಯಶ್.!
ಹೀರೋಗಳನ್ನ ಯಾರೂ ಹುಟ್ಟಾಕಲ್ಲ
'ಅಣ್ತಮ್ಮ ಇಲ್ಲಿ ಹೀರೋಗಳನ್ನ ಯಾರೂ ಹುಟ್ಟಾಕಲ್ಲ. ನಮಗೆ ನಾವೇ ಹೀರೋ ಆಗ್ಬೇಕು'...ರಾಜಾಹುಲಿ ಚಿತ್ರದ ಫೇಮಸ್ ಡೈಲಾಗ್ ಇದು. ಈ ಡೈಲಾಗ್ ಈಗ ಬಾಲಿವುಡ್ ಗೆ ಸೂಕ್ತವಾಗುತ್ತೆ. ತಾನು ಪಟ್ಟ ಕಷ್ಟ, ಪರಿಶ್ರಮ ಈಗ ಬಾಲಿವುಡ್ ಗೆ ಕರೆದುಕೊಂಡು ಹೋಗಿದೆ. ತಮಗೆ ತಾವೇ 'ಹೀರೋ' ಆಗಲು ಹೊರಟಿದ್ದಾರೆ. ಅದಕ್ಕೆ ಜಯ ಸಿಗಲಿ ಎಂದಷ್ಟೇ ಹಾರೈಸಿಬೇಕಿದೆ.
ನಿಜವಾದ 'ಹವಾ' ಅಂದ್ರೆ ಇದು: ಆಡಿಯೋದಿಂದಲೇ 'ಕೋಟಿ' ಬಾಚಿದ ಅಣ್ತಮ್ಮ.!
ಸಲಾಂ ರಾಕಿ ಭಾಯ್
''ಕಾಟನ್ ಪೇಟೆ ಹುಡುಗ್ರು ಕಿಲಾಡಿ ಅಂತಾರೆ, ಕತ್ರಿಗುಪ್ಪೆ ಹುಡುಗ್ರು ಕಿಂಗ್ ಅಂತಾರೆ, ಶಿವಾಜಿನಗರ ಹುಡುಗ್ರು ಭಾಯ್ ಅಂತಾರೆ, ಬಸವೇಶ್ವರನಗರದ ಹುಡುಗ್ರು ಬಾಸು ಅಂತಾರೆ'' ಎಂದು ಮಾಸ್ಟರ್ ಪೀಸ್ ನಲ್ಲಿ ಯಶ್ ಡೈಲಾಗ್ ಹೊಡೆದಿದ್ದರು. ಇದೀಗ, ಇಡೀ ಸೌತ್ ಇಂಡಸ್ಟ್ರಿ 'ಸಲಾಂ ರಾಕಿ ಭಾಯ್' ಎನ್ನುತ್ತಿದೆ.
'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?
ನಮ್ಮನ್ನ ಕಂಡು ಉರ್ಕೋಳ್ರೋ ಒಬ್ರಾ ಇಬ್ರಾ?
''ನಮ್ಮನ್ನ ಕಂಡು ಉರ್ಕೋಳ್ರೋ ಒಬ್ರಾ ಇಬ್ರಾ? ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ'' ಮಾಸ್ಟರ್ ಪೀಸ್ ಚಿತ್ರದ ಇನ್ನೊಂದು ಡೈಲಾಗ್ ಇದು. ಈ ಡೈಲಾಗ್ ನಂತೆ ಯಶ್ ಹಾಗೂ ಅವರ ಸಿನಿಮಾಗಳನ್ನ ಕಾಲೆಳೆಯುವ ವರ್ಗ ಇದ್ದೇ ಇರುತ್ತೆ. ಈಗಲೂ ಕೆಜಿಎಫ್ ಎಂಬ ಕನ್ನಡ ಸಿನಿಮಾ ಭಾರತದಲ್ಲಿ ಸದ್ದು ಮಾಡುತ್ತಿದೆ. ಹೀಗಿದ್ದರೂ ಸಣ್ಣ ಪುಟ್ಟ ವಿಷ್ಯಗಳಿಗೆ ಕೆಲವರು ವಿರೋಧ ವ್ಯಕ್ತಪಡಿಸ್ತಾರೆ.
ಕೆಜಿಎಫ್ ಟ್ರೈಲರ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಬಾಲಿವುಡ್ ನಟಿ.!
ಇನ್ನೊಂದು ಲವೆಲ್ ಗೆ ಕರೆಕೊಂಡು ಹೋಗ್ಬೇಕು
ಇಷ್ಟೆಲ್ಲಾ ಡೈಲಾಗ್ ಗಳ ಜೊತೆ 2015ರಲ್ಲಿ ಸೈಮಾ ಸಮಾರಂಭದಲ್ಲಿ ಯಶ್ ಹೇಳುತ್ತಿದ್ದ ಮಾತು ಒಂದೇ. 'ಕನ್ನಡ ಇಂಡಸ್ಟ್ರಿಯನ್ನ ಇನ್ನೊಂದು ಲವೆಲ್ ಗೆ ಕರೆದುಕೊಂಡು ಹೋಗ್ಬೇಕು, ಹೋಗ್ತೀನಿ. ಇದು ಜಸ್ಟ್ ಬಿಗಿನಿಂಗ್' ಎಂದಿದ್ದರು. ಅಂದು ಯಶ್ ಹೇಳಿದ ಮಾತು ಈಗ ಆಲ್ ಮೋಸ್ಟ್ ನೆರವೇರಿದೆ. ಕೆಜಿಎಫ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಭಾವುಟವನ್ನ ಗಡಿಯಾಚೆ ಹಾರಿಸುತ್ತಿದ್ದಾರೆ.
ಶಾರೂಖ್, ರಜನಿಯನ್ನ ಹಿಂದಿಕ್ಕಿದ 'ಕೆಜಿಎಫ್' ಭಾರತದ ನಂ.1 ಸಿನಿಮಾ