ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು
Recommended Video

ರಣಮಳೆಗೆ ಇಡೀ ಕೊಡಗು ತತ್ತರಿಸಿದೆ. ಕೊಡಗಿನವರ ಬದುಕನ್ನೇ ಪ್ರವಾಹ ಕಿತ್ತುಕೊಂಡಿದೆ. ಕೊಡಗಿನಲ್ಲಿ ಎಷ್ಟೋ ಮನೆಗಳು ನೀರಿನಲ್ಲಿ ಮುಳುಗಿದೆ. ಜನರು ಮನೆ ಬಿಟ್ಟು ಗಂಜಿ ಕೇಂದ್ರ ಸೇರಿದ್ದಾರೆ.
ಪ್ರವಾಹ ಪೀಡಿತರಿಗೆ ರಾಕಿಂಗ್ ಸ್ಟಾರ್ ಯಶ್ ಸಹಾಯ ಹಸ್ತ ಚಾಚಿದ್ದಾರೆ. 'ಯಶೋಮಾರ್ಗ' ಮೂಲಕ ಕೊಡಗಿನ ಸುಂಟಿಕೊಪ್ಪದಲ್ಲಿರುವ ಸಂತ್ರಸ್ತರಿಗೆ ನಟ ಯಶ್ ನೆರವು ನೀಡಿದ್ದಾರೆ.
ಅಕ್ಕಿ, ಬಿಸ್ಕತ್ತು, ಔಷಧಿ, ಹೊದಿಕೆ, ಜರ್ಕಿನ್ ಸೇರಿದಂತೆ ಅಗತ್ಯ ವಸ್ತುಗಳನ್ನ ಸಂತ್ರಸ್ತರಿಗೆ ನಟ ಯಶ್ ಕಳುಹಿಸಿಕೊಟ್ಟಿದ್ದಾರೆ. ''ಕೊಡಗಿನ ಜನರ ಸಹಾಯಕ್ಕೆ ಎಲ್ಲರೂ ಮುಂದೆ ಬಂದಿದ್ದಾರೆ. ಪ್ರವಾಹ ಪೀಡಿತರಿಗೆ ಏನು ಅವಶ್ಯಕತೆ ಇದೆಯೋ, ಅದನ್ನೆಲ್ಲಾ ಕಳುಹಿಸಿಕೊಟ್ಟಿದ್ದೇನೆ. ಆದ್ರೆ, ಅಲ್ಲಿ ತಲುಪಲು ರಸ್ತೆಗಳಿಲ್ಲ. ದಾರಿ ಮಧ್ಯೆ ಗುಡ್ಡ ಕುಸಿಯುತ್ತಿದೆ. ಹಾಗೂ ಹೀಗೂ ರೀಚ್ ಮಾಡಿದ್ದಾರೆ'' ಎನ್ನುತ್ತಾರೆ ನಟ ಯಶ್.

ನೊಂದ ಜನರಿಗೆ ಸಹಾಯ ಹಸ್ತ ನಿಮ್ಮದಾಗಲಿ ಎಂದು ನಿರ್ದೇಶಕ ಎ.ಪಿ.ಅರ್ಜುನ್ ಕೂಡ ಫೇಸ್ ಬುಕ್ ನಲ್ಲಿ ಕೇಳಿಕೊಂಡಿದ್ದಾರೆ.
ನಟ ಜಗ್ಗೇಶ್ ಕೂಡ ಅಗತ್ಯ ವಸ್ತುಗಳನ್ನೆಲ್ಲಾ ಕೊಡಗಿನ ಜನರಿಗೆ ಕಳುಹಿಸಿಕೊಡುತ್ತಿದ್ದಾರೆ.
ಇನ್ನೂ ನಟಿ ಸಂಯುಕ್ತ ಹೊರನಾಡು ಕೂಡ ಟ್ರಕ್ ಗಳ ಮೂಲಕ ಅತ್ಯಗತ್ಯ ವಸ್ತುಗಳನ್ನು ಕೊಡಗಿಗೆ ಕಳುಹಿಸುತ್ತಿದ್ದಾರೆ.
ಒಟ್ನಲ್ಲಿ, ಸ್ಯಾಂಡಲ್ ವುಡ್ ನ ನಟ-ನಟಿಯರು ಕೊಡಗಿನ ಜನತೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆದಷ್ಟು ಬೇಗ ಕೊಡಗು ಜನ ಜೀವನ ಸಹಜ ಸ್ಥಿತಿಗೆ ಮರಳಲಿ ಅನ್ನೋದು ಹಲವರ ಪ್ರಾರ್ಥನೆ.


Click it and Unblock the Notifications











