ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು

By Harshitha

Recommended Video

ಕೊಡಗಿನ ಜನತೆಗೆ ಸಹಾಯ ಹಸ್ತ ಚಾಚಿದ ಸ್ಯಾಂಡಲ್‌ವುಡ್ ಸ್ಟಾರ್ಸ್..! | Filmibeat Kannada

ರಣಮಳೆಗೆ ಇಡೀ ಕೊಡಗು ತತ್ತರಿಸಿದೆ. ಕೊಡಗಿನವರ ಬದುಕನ್ನೇ ಪ್ರವಾಹ ಕಿತ್ತುಕೊಂಡಿದೆ. ಕೊಡಗಿನಲ್ಲಿ ಎಷ್ಟೋ ಮನೆಗಳು ನೀರಿನಲ್ಲಿ ಮುಳುಗಿದೆ. ಜನರು ಮನೆ ಬಿಟ್ಟು ಗಂಜಿ ಕೇಂದ್ರ ಸೇರಿದ್ದಾರೆ.

ಪ್ರವಾಹ ಪೀಡಿತರಿಗೆ ರಾಕಿಂಗ್ ಸ್ಟಾರ್ ಯಶ್ ಸಹಾಯ ಹಸ್ತ ಚಾಚಿದ್ದಾರೆ. 'ಯಶೋಮಾರ್ಗ' ಮೂಲಕ ಕೊಡಗಿನ ಸುಂಟಿಕೊಪ್ಪದಲ್ಲಿರುವ ಸಂತ್ರಸ್ತರಿಗೆ ನಟ ಯಶ್ ನೆರವು ನೀಡಿದ್ದಾರೆ.

ಅಕ್ಕಿ, ಬಿಸ್ಕತ್ತು, ಔಷಧಿ, ಹೊದಿಕೆ, ಜರ್ಕಿನ್ ಸೇರಿದಂತೆ ಅಗತ್ಯ ವಸ್ತುಗಳನ್ನ ಸಂತ್ರಸ್ತರಿಗೆ ನಟ ಯಶ್ ಕಳುಹಿಸಿಕೊಟ್ಟಿದ್ದಾರೆ. ''ಕೊಡಗಿನ ಜನರ ಸಹಾಯಕ್ಕೆ ಎಲ್ಲರೂ ಮುಂದೆ ಬಂದಿದ್ದಾರೆ. ಪ್ರವಾಹ ಪೀಡಿತರಿಗೆ ಏನು ಅವಶ್ಯಕತೆ ಇದೆಯೋ, ಅದನ್ನೆಲ್ಲಾ ಕಳುಹಿಸಿಕೊಟ್ಟಿದ್ದೇನೆ. ಆದ್ರೆ, ಅಲ್ಲಿ ತಲುಪಲು ರಸ್ತೆಗಳಿಲ್ಲ. ದಾರಿ ಮಧ್ಯೆ ಗುಡ್ಡ ಕುಸಿಯುತ್ತಿದೆ. ಹಾಗೂ ಹೀಗೂ ರೀಚ್ ಮಾಡಿದ್ದಾರೆ'' ಎನ್ನುತ್ತಾರೆ ನಟ ಯಶ್.

Kannada Actor Yash, Jaggesh and Samyuktha Hornad donates to flood victims of Kodagu District

ನೊಂದ ಜನರಿಗೆ ಸಹಾಯ ಹಸ್ತ ನಿಮ್ಮದಾಗಲಿ ಎಂದು ನಿರ್ದೇಶಕ ಎ.ಪಿ.ಅರ್ಜುನ್ ಕೂಡ ಫೇಸ್ ಬುಕ್ ನಲ್ಲಿ ಕೇಳಿಕೊಂಡಿದ್ದಾರೆ.

ನಟ ಜಗ್ಗೇಶ್ ಕೂಡ ಅಗತ್ಯ ವಸ್ತುಗಳನ್ನೆಲ್ಲಾ ಕೊಡಗಿನ ಜನರಿಗೆ ಕಳುಹಿಸಿಕೊಡುತ್ತಿದ್ದಾರೆ.

ಇನ್ನೂ ನಟಿ ಸಂಯುಕ್ತ ಹೊರನಾಡು ಕೂಡ ಟ್ರಕ್ ಗಳ ಮೂಲಕ ಅತ್ಯಗತ್ಯ ವಸ್ತುಗಳನ್ನು ಕೊಡಗಿಗೆ ಕಳುಹಿಸುತ್ತಿದ್ದಾರೆ.

ಒಟ್ನಲ್ಲಿ, ಸ್ಯಾಂಡಲ್ ವುಡ್ ನ ನಟ-ನಟಿಯರು ಕೊಡಗಿನ ಜನತೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆದಷ್ಟು ಬೇಗ ಕೊಡಗು ಜನ ಜೀವನ ಸಹಜ ಸ್ಥಿತಿಗೆ ಮರಳಲಿ ಅನ್ನೋದು ಹಲವರ ಪ್ರಾರ್ಥನೆ.

More from Filmibeat

English summary
Kannada Actor Yash, Jaggesh and Samyuktha Hornad donates to flood victims of Kodagu District.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X