Don't Miss!
- News Hevay Rain: ಬಿರುಗಾಳಿ ಮಳೆಗೆ ನೆಲ ಕಚ್ಚಿದ ಬಾಳೆ, ಟೊಮೆಟೊ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು
Recommended Video
ರಣಮಳೆಗೆ ಇಡೀ ಕೊಡಗು ತತ್ತರಿಸಿದೆ. ಕೊಡಗಿನವರ ಬದುಕನ್ನೇ ಪ್ರವಾಹ ಕಿತ್ತುಕೊಂಡಿದೆ. ಕೊಡಗಿನಲ್ಲಿ ಎಷ್ಟೋ ಮನೆಗಳು ನೀರಿನಲ್ಲಿ ಮುಳುಗಿದೆ. ಜನರು ಮನೆ ಬಿಟ್ಟು ಗಂಜಿ ಕೇಂದ್ರ ಸೇರಿದ್ದಾರೆ.
ಪ್ರವಾಹ ಪೀಡಿತರಿಗೆ ರಾಕಿಂಗ್ ಸ್ಟಾರ್ ಯಶ್ ಸಹಾಯ ಹಸ್ತ ಚಾಚಿದ್ದಾರೆ. 'ಯಶೋಮಾರ್ಗ' ಮೂಲಕ ಕೊಡಗಿನ ಸುಂಟಿಕೊಪ್ಪದಲ್ಲಿರುವ ಸಂತ್ರಸ್ತರಿಗೆ ನಟ ಯಶ್ ನೆರವು ನೀಡಿದ್ದಾರೆ.
ಅಕ್ಕಿ, ಬಿಸ್ಕತ್ತು, ಔಷಧಿ, ಹೊದಿಕೆ, ಜರ್ಕಿನ್ ಸೇರಿದಂತೆ ಅಗತ್ಯ ವಸ್ತುಗಳನ್ನ ಸಂತ್ರಸ್ತರಿಗೆ ನಟ ಯಶ್ ಕಳುಹಿಸಿಕೊಟ್ಟಿದ್ದಾರೆ. ''ಕೊಡಗಿನ ಜನರ ಸಹಾಯಕ್ಕೆ ಎಲ್ಲರೂ ಮುಂದೆ ಬಂದಿದ್ದಾರೆ. ಪ್ರವಾಹ ಪೀಡಿತರಿಗೆ ಏನು ಅವಶ್ಯಕತೆ ಇದೆಯೋ, ಅದನ್ನೆಲ್ಲಾ ಕಳುಹಿಸಿಕೊಟ್ಟಿದ್ದೇನೆ. ಆದ್ರೆ, ಅಲ್ಲಿ ತಲುಪಲು ರಸ್ತೆಗಳಿಲ್ಲ. ದಾರಿ ಮಧ್ಯೆ ಗುಡ್ಡ ಕುಸಿಯುತ್ತಿದೆ. ಹಾಗೂ ಹೀಗೂ ರೀಚ್ ಮಾಡಿದ್ದಾರೆ'' ಎನ್ನುತ್ತಾರೆ ನಟ ಯಶ್.
ಕೊಡಗು ಜಿಲ್ಲೆಯ ಪ್ರವಾಹ ಪೀಡಿತರ ನೆರವಿಗೆ ಮುಂದಾದ ಚಂದನ್ ಶೆಟ್ಟಿ
ನೊಂದ ಜನರಿಗೆ ಸಹಾಯ ಹಸ್ತ ನಿಮ್ಮದಾಗಲಿ ಎಂದು ನಿರ್ದೇಶಕ ಎ.ಪಿ.ಅರ್ಜುನ್ ಕೂಡ ಫೇಸ್ ಬುಕ್ ನಲ್ಲಿ ಕೇಳಿಕೊಂಡಿದ್ದಾರೆ.
ನಟ ಜಗ್ಗೇಶ್ ಕೂಡ ಅಗತ್ಯ ವಸ್ತುಗಳನ್ನೆಲ್ಲಾ ಕೊಡಗಿನ ಜನರಿಗೆ ಕಳುಹಿಸಿಕೊಡುತ್ತಿದ್ದಾರೆ.
ಭಾವನಾತ್ಮಕ ಭಾವನೆ ಸಾಗಿದೆ ನೊಂದ ಕೊಡಗಿನ ಮನಗಳ ಸೇರಿ ಸಾಂತ್ವನ ಹೇಳಲು..
— ನವರಸನಾಯಕ ಜಗ್ಗೇಶ್ (@Jaggesh2) August 19, 2018
ಧನ್ಯವಾದ ರಾಯರಿಗೆ ಈ ಕಾರ್ಯಕ್ಕೆ ನನಗೆ ಶಕ್ತಿ ನೀಡಿದಕ್ಕೆ..
ಸರ್ವೆಜನಃಸುಖಿನೋಭವಂತು.. pic.twitter.com/Q9IXEAHUg2
ಇನ್ನೂ ನಟಿ ಸಂಯುಕ್ತ ಹೊರನಾಡು ಕೂಡ ಟ್ರಕ್ ಗಳ ಮೂಲಕ ಅತ್ಯಗತ್ಯ ವಸ್ತುಗಳನ್ನು ಕೊಡಗಿಗೆ ಕಳುಹಿಸುತ್ತಿದ್ದಾರೆ.
We r sending the relief camp trucks to different areas depending on what and how much is required, basic essentials to hospitals,blankets to schools,
— Samyukta Hornad (@samyuktahornad) August 19, 2018
The first truck has left. Mini trucks will come and collect it from different centres in blore.If u want to donate
call 9980434939 pic.twitter.com/fZRwZ8Lx49
ಒಟ್ನಲ್ಲಿ, ಸ್ಯಾಂಡಲ್ ವುಡ್ ನ ನಟ-ನಟಿಯರು ಕೊಡಗಿನ ಜನತೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆದಷ್ಟು ಬೇಗ ಕೊಡಗು ಜನ ಜೀವನ ಸಹಜ ಸ್ಥಿತಿಗೆ ಮರಳಲಿ ಅನ್ನೋದು ಹಲವರ ಪ್ರಾರ್ಥನೆ.