ನ್ಯೂ ಇಯರ್ ಅಂತ ಎಣ್ಣೆ ಏಟಲ್ಲಿ ಗಾಡಿ ಓಡಿಸುವವರಿಗೆ ಯಶ್ ಕೊಟ್ಟ ಸಂದೇಶ ಇದು.!
2019 ಮುಗಿಯುವ ಹಂತಕ್ಕೆ ಬಂದೇ ಬಿಟ್ಟಿದೆ. 2020 ಬರಮಾಡಿಕೊಳ್ಳಲು ಇನ್ನೆರಡೇ ದಿನ ಬಾಕಿ ಉಳಿದಿದೆ. ಎಷ್ಟೋ ಮಂದಿ ನ್ಯೂ ಇಯರ್ ನ ಪಾರ್ಟಿ ಮಾಡುವ ಮೂಲಕ ಬರಮಾಡಿಕೊಳ್ಳುತ್ತಾರೆ. ಪಾರ್ಟಿ ಮಾಡೋದೇನೋ ಓಕೆ. ಆದ್ರೆ, ಪಾರ್ಟಿಯಲ್ಲಿ ಮದ್ಯಪಾನ ಮಾಡಿ ಬಳಿಕ ಮೈಮರೆತು ಗಾಡಿ ಓಡಿಸಿದರೆ.? ಅಪಾಯ ಕಟ್ಟಿಟ್ಟಬುತ್ತಿ.!
ಹೊಸ ವರ್ಷದಂದು ಎಣ್ಣೆ ಏಟಿಂದ ಹೆಚ್ಚು ಅಪಘಾತ ಪ್ರಕರಣಗಳು ಘಟಿಸುವುದರಿಂದ ಬೆಂಗಳೂರು ಪೊಲೀಸರು 'ಬೀ ಸೇಫ್' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಕೈಜೋಡಿಸಿದ್ದಾರೆ. ಹೊಸ ವರ್ಷದಂದು ಮದ್ಯಪಾನ ಮಾಡಿ ಗಾಡಿ ಓಡಿಸಬೇಡಿ, ರಸ್ತೆ ಸುರಕ್ಷತೆ ಬಗ್ಗೆ ಗಮನ ಕೊಡಿ ಎಂದು ಯಶ್ ವಿಡಿಯೋ ಮೂಲಕ ಸಂದೇಶ ಸಾರಿದ್ದಾರೆ.
''ಹೊಸ ವರ್ಷ ಪ್ರತಿ ವರ್ಷ ಬರುತ್ತದೆ. ಅದರ ಜೊತೆಗೆ ಹೊಸ ಆಸೆಗಳು, ಹೊಸ ಕನಸುಗಳು.. ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಲೈಫ್ ನ ರೀಸೆಟ್ ಮಾಡಿ ರೀಸ್ಟಾರ್ಟ್ ಮಾಡುವ ಜೋಶ್ ನಲ್ಲಿರ್ತಾರೆ. ಇದು ಹೊಸತನ ಬರಮಾಡಿಕೊಳ್ಳುವ ಸಮಯ ನಿಜ. ಹಾಗಂತ ಎಚ್ಚರ ತಪ್ಪಿ ಕುಡಿದು ಗಾಡಿ ಓಡಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದು ಹೆಚ್ಚು.

ಒಂದು ದಿನ ಪಾರ್ಟಿ ಮಾಡಿ ಫ್ರೆಂಡ್ಸ್ ಜೊತೆ ಖುಷಿಯಾಗಿರುವ ಜೋಶಲ್ಲಿ ಮೈಮರೆತು ನೀವು ಗಾಡಿ ಓಡಿಸಿದರೆ ಅನಾಹುತ ಆಗುತ್ತೆ. ಅಪಾಯ ಕಾದಿರುತ್ತೆ. ನಿಮಗೆ ಏನಾದರೂ ಹೆಚ್ಚು ಕಮ್ಮಿ ಆದರೆ ನಿಮ್ಮನ್ನ ನಂಬಿರುವ, ನಿಮ್ಮನ್ನ ಪ್ರೀತಿಸುತ್ತಿರುವ ಜೀವಗಳು ಲೈಫ್ ಲಾಂಗ್ ನೋವು ಅನುಭವಿಸಬೇಕಾಗುತ್ತದೆ.
ಇದಕ್ಕೆ ಪರಿಹಾರ ತುಂಬಾನೇ ಸಿಂಪಲ್. ಪಬ್ಲಿಕ್ ಟ್ರ್ಯಾನ್ಸ್ ಪೋರ್ಟ್ ಯೂಸ್ ಮಾಡಿ. ಒಟ್ನಲ್ಲಿ ಸ್ಮಾರ್ಟ್ ಆಗಿ. ಬನ್ನಿ, ರಸ್ತೆ ಸುರಕ್ಷತೆಗಾಗಿ ಬೆಂಗಳೂರು ಸಂಚಾರ ಪೊಲೀಸರ ಜೊತೆಗೆ ಕೈ ಜೋಡಿಸೋಣ. ಹ್ಯಾಪಿ ನ್ಯೂ ಇಯರ್. ಬೀ ಸೇಫ್'' ಎಂದು ವಿಡಿಯೋ ಮೂಲಕ ನಟ ಯಶ್ ಸಂದೇಶ ನೀಡಿದ್ದಾರೆ. ಹಾಗಾದ್ರೆ, ರಸ್ತೆ ಸುರಕ್ಷತೆ ಬಗ್ಗೆ ನೀವು ಗಮನ ಹರಿಸ್ತೀರಾ ಅಲ್ವಾ.?


Click it and Unblock the Notifications











