Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊನೆಗೂ ಬಾಡಿಗೆ ಮನೆ ವಿವಾದಕ್ಕೆ ತೆರೆ ಎಳೆದ ನಟ ಯಶ್
Recommended Video
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅನೇಕ ವರ್ಷಗಳಿಂದ ಬಾಡಿಗೆ ಮನೆ ವಿವಾದದಲ್ಲಿ ಸಿಲುಕಿಕೊಂಡಿದ್ರು. ಯಶ್ ಬಾಡಿಗೆ ಕಟ್ಟುತ್ತಿಲ್ಲ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದ್ರೀಗ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ ರಾಕಿ ಭಾಯ್.
ರಾಕಿಂಗ್ ಯಶ್ ಕುಟುಂಬ ಮೊದಲು ಕತ್ರಗುಪ್ಪೆ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಆ ಮನೆಯನ್ನು ಇಂದು(ಜೂನ್ 7) ಖಾಲಿ ಮಾಡಿದ್ದಾರಂತೆ. ಮನೆಯ ಕೀ ಅನ್ನು ಮಾಲಿಕರಿಗೆ ಒಪ್ಪಿಸಿದ್ದಾರಂತೆ. ಅಲ್ಲದೆ ಎರಡು ತಿಂಗಳ ಬಾಡಿಗೆ 80 ಸಾವಿರ ಡಿಡಿಯನ್ನು ಯಶ್ ಪರ ವಕೀಲರ ಮೂಲಕ ಹಸ್ತಾಂತರಿಸಿದ್ದಾರಂತೆ.
ಹೊಸ ಅವತಾರದಲ್ಲಿ ರಾಕಿ ಭಾಯ್ ಮಿಂಚಿಂಗ್
ಈ ಮೂಲಕ ಅನೇಕ ವರ್ಷಗಳಿಂದಿದ್ದ ವಿವಾದಕ್ಕೆ ಮಂಗಳ ಹಾಡಿದ್ದಾರೆ. ಎರಡು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಯಶ್ ಕುಟುಂಬಕ್ಕೆ ಹೈ ಕೋರ್ಟ್ ಆದೇಶ ಮಾಡಿತ್ತು. ಆದ್ರೆ ಯಶ್ ತಾಯಿ ಪುಷ್ಪ ಹಾಸನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಗೆ ಶಿಫ್ಟ್ ಆಗುವ ವರೆಗೂ ಕಾಲಾವಕಾಶ ಕೊಡುವಂತೆ ಕೇಳಿಕೊಂಡಿದ್ದರು. ಕೋರ್ಟ್ ಎರಡು ತಿಂಗಳು ಕಾಲಾವಾಕಾಶ ನೀಡಿತ್ತು.
ಕೋರ್ಟ್ ನೀಡಿದ್ದ ಗಡವು ಮುಕ್ತಾಯವಾಗುತ್ತಂತೆ. ಮನೆಯ ಮಾಲಿಕ ಮುನಿ ಪ್ರಸಾದ್ ಮತ್ತೆ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ರಂತೆ. ಆದ್ರೆ ಅಷ್ಟರಲ್ಲೆ ಯಶ್ ಮನೆಯನ್ನು ಒಪ್ಪಿಸುವ ಮೂಲಕ ವಿವಾದಕ್ಕೆ ಅಂತ್ಯಹಾಡಿದ್ದಾರೆ.
ವಿವಾದದ ಹಿನ್ನಲೆ
2010 ರಲ್ಲಿ ಯಶ್ ಕುಟುಂಬ ಕತ್ರಿಗುಪ್ಪೆಯ ಮುನಿಪ್ರಸಾದ್ ಮನೆಯಲ್ಲಿ ಬಾಡಿಗೆ ಇದ್ದರು. ಆದ್ರೆ ಯಶ್ ಲಕ್ಕಿ ಮನೆ ಎನ್ನುವ ಕಾರಣಕ್ಕೆ ಮನೆಯನ್ನು ಬಿಟ್ಟುಕೊಟ್ಟಿರಲಿಲ್ಲ ಎಂದುಹೇಳಲಾಗುತ್ತಿದೆ. ಅಲ್ಲದೆ ಬಾಡಿಯನ್ನು ನೀಡುತ್ತಿರಲಿಲ್ಲ ಎನ್ನುವುದು ಮನೆ ಮಾಲಿಕರ ಆರೋಪವಾಗಿತ್ತು. 2015ರಲ್ಲಿ ಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನಿನ ಹೋರಾಟ ಪ್ರಾರಂಭವಾಗಿತ್ತು. ಇದುವರೆಗೂ ಮನೆಗಾಗಿ ಹೋರಾಟ ಮಾಡುತ್ತಲೆ ಬಂದಿದ್ದ, ಮಾಲಿಕ ಮುನಿಪ್ರಸಾದ್ ಗೆ ಕೊನೆಗೂ ಅವರ ಮನೆ ಸಿಕ್ಕಿದೆ.