Don't Miss!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- News Bride Kidnap Video: ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವಿನ ಅಪಹರಣಕ್ಕೆ ಯತ್ನ: ವಿಡಿಯೋ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್, ಉಪ್ಪಿ, ಮೇಘನಾ ದೃಷ್ಟಿಯಲ್ಲಿ ವಾಜಪೇಯಿ ಅಂದ್ರೆ ಯಾರು.?
Recommended Video
ಭಾರತ ದೇಶ ಕಂಡ ಅತ್ಯುನ್ನತ ಪ್ರಧಾನಮಂತ್ರಿ, ರಾಷ್ಟ್ರ ರಾಜಕಾರಣ ಕಂಡ ಅದ್ಭುತ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರು ನಿನ್ನೆ (ಆಗಸ್ಟ್ 16) ದೆಹಲಿಯಲ್ಲಿ ವಿಧಿವಶರಾದರು.
ವಾಜಪೇಯಿ ಅವರನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಂಡಿದ್ದಾರೆ. ವಾಜಪೇಯಿ ಅವರ ಆಡಳಿತ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಹಲವು ಹಲವರು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.
ಅತ್ಯಪರೂಪದ ರಾಜಕಾರಣಿ ಅಟಲ್ ಜೀ ಅವರ ಅಪರೂಪದ ಚಿತ್ರಗಳು
ಇದರಲ್ಲಿ ಸಿನಿಮಾ ಕಲಾವಿದರು ಹೊರತಾಗಿಲ್ಲ. ವಾಜಪೇಯಿ ಅವರ ನಿಧನದ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅನೇಕ ನಟ-ನಟಿಯರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಈಗ ಕನ್ನಡದ ಕೆಲವು ಸ್ಟಾರ್ ನಟರು, ಸುದೀಪ್, ಉಪೇಂದ್ರ, ಜಗ್ಗೇಶ್, ನಟಿ ಮೇಘನಾ ರಾಜ್ ಸೇರಿದಂತೆ ಹಲವು ಕಲಾವಿದರು ವಾಜಪೇಯಿ ಅವರನ್ನ ಕಂಡ ಬಗೆಯನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ನೋಡೋಣ ಬನ್ನಿ....ಮುಂದೆ ಓದಿ.....
|
ಪ್ರಧಾನಮಂತ್ರಿ ಅಂತ ಕೇಳಿದ್ದೆ ಇವರಿಂದ
ಕನ್ನಡ ನಟಿ ಮೇಘನಾ ರಾಜ್ ಅವರು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂತಾಪ ಸೂಚಿಸಿದ್ದಾರೆ. ಈ ವೇಳೆ ಅವರನ್ನ ವಿಶೇಷವಾಗಿ ನೆನಪಿಸಿಕೊಂಡಿರುವ ಅವರು '' ಶಾಲೆಯಲ್ಲಿ ಓದುವಾಗ ಈ ಹೆಸರು ಕೇಳಿದ್ದು, ಪ್ರಧಾನಮಂತ್ರಿ ಎಂಬ ಪದ ಮೊದಲ ಸರಿ ಕೇಳಿದ್ದು ಇವರ ಹೆಸರಿನಿಂದ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಟ್ವೀಟ್ ಮಾಡಿದ್ದಾರೆ.
|
ಅಸಾಮಾನ್ಯ ಪ್ರಜಾಕಾರಣಿ
ರಾಜಕಾರಣಕ್ಕೆ ಗೌರವ ತಂದು ಕೊಟ್ಟ ನಾಯಕ ಅಟಲ್ ಬಿಹಾರಿ ವಾಜಪೇಯಿ ಎಂದು ಅನೇಕ ರಾಜಕೀಯ ತಜ್ಞರು ಹೆಮ್ಮೆಯಿಂದ ಹೇಳುತ್ತಾರೆ. ಇಂತಹ ರಾಜಕಾರಣಿಯ ನಟ ಹಾಗೂ ಉಪೇಂದ್ರ ಸಂತಾಪ ಸೂಚಿಸಿದ್ದಾರೆ. ''ರಾಜಕಾರಣದಲ್ಲಿದ್ದ ಅಸಾಮಾನ್ಯ ಪ್ರಜಾಕಾರಣಿ... ಮತ್ತೊಮ್ಮೆ ಹುಟ್ಟಿ ಬನ್ನಿ'' ಎಂದಿದ್ದಾರೆ.
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ
|
ಕಿಚ್ಚ ಸುದೀಪ್ ಸಂತಾಪ
ಅಟಲ್ ಜೀ ಅವರಂತಹ ನಾಯಕರಿಂದ ರಾಜಕಾರಣವು ಗೌರವ ಕಾಪಾಡಿಕೊಂಡಿದೆ ಎಂದು ನಟ ಕಿಚ್ಚ ಸುದೀಪ್ ಅವರ ಟ್ವಿಟ್ಟರ್ ಮೂಲಕ ಅಗಲಿದ ಮಾಜಿ ಪ್ರಧಾನಿಗೆ ಸಂತಾಪ ಸೂಚಿಸಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಅಜಾತಶತ್ರು ಅಟಲ್
|
ದೇಶ ಕಂಡ ಅತ್ಯುತ್ತಮ ಪ್ರಧಾನಿ
"ಅಟಲ್ ಬಿಹಾರಿ ವಾಜಪೇಯಿ" ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲೊಬ್ಬರು..
ರಸ್ತೆ ಅಗಲೀಕರಣ ಮತ್ತು
ಪೋಖ್ರಾನ್ ಪರಮಾಣು ಪರೀಕ್ಷೆ ಇವರ ಪ್ರಮುಖವಾದ ಮುನ್ನೆಡೆಗಳು..
ಅವರ ಆತ್ಮಕ್ಕೆ ಶಾಂತಿ ಸಿಗಲಿ..'' ಎಂದು ನಿರ್ದೇಶಕ ಸುನಿ ಟ್ವೀಟ್ ಮಾಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು
|
ವಾಜಪೇಯಿ ಅವರನ್ನ ನೆನೆದ ಜಗ್ಗೇಶ್
ನಟ ಹಾಗೂ ರಾಜಕಾರಣಿ ಜಗ್ಗೇಶ್ ಅವರು ತಮ್ಮ ಪಕ್ಷದ ಅಗ್ರಗಣ್ಯ ನಾಯಕನ ಅಗಲಿಕೆಗೆ ಟ್ವಿಟ್ಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ.