Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಜಯಮಾಲಾಗೆ ಒಲಿದ 'ಮಂತ್ರಿ' ಅದೃಷ್ಟ: ಬೆಲ್ಲ ಸವಿದು ಸಂಭ್ರಮ
Recommended Video
'ಗಿರಿ ಕನ್ಯೆ', 'ಶಂಕರ್ ಗುರು' ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಟಿ ಜಯಮಾಲಾ ಮನೆ ಬಾಗಿಲಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ.
ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯೆ ಆಗಿರುವ ನಟಿ ಜಯಮಾಲಾಗೆ ಇದೇ ಮೊದಲ ಬಾರಿಗೆ ಮಂತ್ರಿ ಸ್ಥಾನ ಲಭಿಸಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಯಾಬಿನೆಟ್ ಗೆ ನಟಿ ಜಯಮಾಲಾ ಸೇರ್ಪಡೆ ಆಗಲಿದ್ದಾರೆ.
ನಾಲ್ಕು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯೆ ಆಗಿ ಕಾರ್ಯ ನಿರ್ವಹಿಸಿರುವ ರೀತಿಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷದ ವರಿಷ್ಟರು ಜಯಮಾಲಾ ರವರಿಗೆ ಸಚಿವ ಸ್ಥಾನ ಕೊಡಲು ಮನಸ್ಸು ಮಾಡಿದ್ದಾರೆ.
ಸಂಪುಟ ಸೇರ್ಪಡೆ ಆಗುತ್ತಿರುವುದಕ್ಕೆ ಹರ್ಷಿತರಾದ ಜಯಮಾಲಾ, ಮನೆಯಲ್ಲಿ ಬೆಲ್ಲ ಸವಿದು ಸಂಭ್ರಮಿಸಿದರು. ''ನಾಲ್ಕು ವರ್ಷಗಳಿಂದ ನಾನು ಕೆಲಸ ಮಾಡಿರುವುದನ್ನು ಪಕ್ಷದ ವರಿಷ್ಟರು ನೋಡಿದ್ದಾರೆ. ಮತ್ತೆ ಯೋಗ ಕೂಡ ಇರಬಹುದು. ನಾನು ಅದರಲ್ಲಿಯೂ ನಂಬಿಕೆ ಇಟ್ಟುಕೊಂಡಿದ್ದೇನೆ. ಖಾತೆ ಯಾವುದೇ ಕೊಟ್ಟರೂ, ಅದಕ್ಕೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ'' ಎನ್ನುತ್ತಾರೆ ನಟಿ ಜಯಮಾಲಾ
ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ 8 ಜೆಡಿಎಸ್ ಶಾಸಕರ ಪರಿಚಯ
''ನನ್ನ ಹೃದಯಕ್ಕೆ ಹತ್ತಿರವಾಗಿರುವುದು ಹೆಣ್ಮಕ್ಳು. ಈ ದೇಶದಲ್ಲಿ ಇರುವ ಮಹಿಳೆಯರ ಸ್ಥಿತಿ-ಗತಿ ಬಗ್ಗೆ ಅಧ್ಯಯನ ಮಾಡಿರುವೆ. ರಾಜ್ಯದ ಹೆಣ್ಣಿನ ಸಶಕ್ತಿಕರಣದ ಬಗ್ಗೆ ನನಗೆ ಅತ್ಯಂತ ಕಾಳಜಿ ಇದೆ. ಎಲ್ಲಿ ಕೂತರೂ ನಾನು ಹೆಣ್ಣನ್ನು ಪ್ರತಿನಿಧಿಸುತ್ತಾ ಹೋಗುವೆ. ಹೆಣ್ಣಿಗೆ ಒಳ್ಳೆಯ ಸ್ಥಾನಮಾನ, ರಕ್ಷಣೆ ಸಿಗಬೇಕು ಅನ್ನೋದು ನನ್ನ ಅಂತರಾತ್ಮದ ಆಸೆ. ಆದ್ರೆ, ಪಕ್ಷ ಯಾವುದೇ ಖಾತೆ ಕೊಟ್ಟರೂ, ಅದನ್ನ ಪ್ರಸಾದ ಅಂತ ತಿಳಿದುಕೊಂಡು ನಿಷ್ಟೆಯಿಂದ ಕೆಲಸ ಮಾಡುವೆ'' ಎನ್ನುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಗ್ಗೆ ತಮಗಿರುವ ಆಸಕ್ತಿಯನ್ನು ಜಯಮಾಲಾ ಹೊರಹಾಕಿದರು.
ಸಚಿವ ಸ್ಥಾನ ಗಿಟ್ಟಿಸಿಕೊಂಡವರ ಫೈನಲ್ ಲಿಸ್ಟ್ ಇಲ್ಲಿದೆ ನೋಡಿ
1959 ರಲ್ಲಿ ಜನಿಸಿದ ನಟಿ ಜಯಮಾಲಾ ಕನ್ನಡ, ತೆಲುಗು, ತಮಿಳು, ತುಳು ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ತಾಯಿ ಸಾಹೇಬ' ಚಿತ್ರದ ಮೂಲಕ ನಿರ್ಮಾಪಕಿ ಆದ ಜಯಮಾಲಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ರಾಜಕೀಯ ರಂಗ ಪ್ರವೇಶ ಮಾಡಿದ ಜಯಮಾಲಾ ವಿಧಾನ ಪರಿಷತ್ ಸದಸ್ಯೆ ಆದರು. ಈಗ ಮಂತ್ರಿ ಪಟ್ಟಕ್ಕೇರಿದ್ದಾರೆ.