Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಲಕ್ಷ್ಮಿ ಬಾರಮ್ಮ' ಚಿನ್ನು (ಕವಿತಾ ಗೌಡ) ಏನಮ್ಮಾ ನಿಮ್ ಪ್ರಾಬ್ಲಮ್ಮು.?
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ 'ಚಿನ್ನು' ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಕವಿತಾ ಗೌಡ ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ರು. 'ಶ್ರೀನಿವಾಸ ಕಲ್ಯಾಣ' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ಕವಿತಾ ಗೌಡ 'ಫಸ್ಟ್ ಲವ್' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
'ಫಸ್ಟ್ ಲವ್' ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. ರಿಲೀಸ್ ಪ್ರಯುಕ್ತ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಹೀಗಿರುವಾಗಲೇ, 'ಚಿನ್ನು' ಕವಿತಾ ಗೌಡ ವಿವಾದದಲ್ಲಿ ಸಿಲುಕಿದ್ದಾರೆ. ಕವಿತಾ ಗೌಡ ರವರ ನಡವಳಿಕೆ ಬಗ್ಗೆ 'ಫಸ್ಟ್ ಲವ್' ಚಿತ್ರತಂಡ ಗರಂ ಆಗಿದೆ. ಅಷ್ಟಕ್ಕೂ ಏನೀ ಕಿರಿಕ್.? ಪೂರ್ತಿ ಮ್ಯಾಟರ್ ಇಲ್ಲಿದೆ ಓದಿರಿ...
ಪ್ರಮೋಷನ್ ಗೆ ಬರುತ್ತಿಲ್ಲ.!
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ 'ಚಿನ್ನು' ಖ್ಯಾತಿಯ ಕವಿತಾ ಗೌಡ ಬಗ್ಗೆ 'ಫಸ್ಟ್ ಲವ್' ಚಿತ್ರತಂಡ ಮಾಡುತ್ತಿರುವ ಕಂಪ್ಲೇಂಟ್ ಒಂದೇ.. ಅದು 'ಫಸ್ಟ್ ಲವ್' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಕವಿತಾ ಗೌಡ ಭಾಗಿಯಾಗುತ್ತಿಲ್ಲ ಅಂತ.!
ತಮಿಳು ಸಿನಿಮಾದಲ್ಲಿ ಕವಿತಾ ಬಿಜಿ ಅಂತೆ.!
'ಫಸ್ಟ್ ಲವ್' ಚಿತ್ರದ ಪ್ರಮೋಷನ್ ನಲ್ಲಿ ಭಾಗವಹಿಸಬೇಕು ಅಂತ ನಿರ್ದೇಶಕ ಆಯುಷ್ಮಾನ್ ಕರೆ ಮಾಡಿದರೆ, 'ತಮಿಳು ಸಿನಿಮಾದಲ್ಲಿ ಬಿಜಿ ಇದ್ದೇನೆ' ಎನ್ನುತ್ತಾರಂತೆ ಕವಿತಾ ಗೌಡ.
ಕನ್ನಡಕ್ಕಿಂತ ತಮಿಳು ಸಿನಿಮಾ ಹೆಚ್ಚಾಗೋಯ್ತಾ.?
ಕವಿತಾ ಗೌಡ ಜನಪ್ರಿಯತೆ ಕಂಡುಕೊಂಡಿದ್ದೇ ಕನ್ನಡ ಕಿರುತೆರೆ ಮೂಲಕ. ಕಿರುತೆರೆಯಿಂದ ಬೆಳ್ಳಿತೆರೆ ಜಿಗಿದದ್ದು ಕನ್ನಡ ಚಿತ್ರರಂಗದ ಮೂಲಕ. ಹೀಗಿದ್ದರೂ, ಕನ್ನಡ ಚಿತ್ರದ ಪ್ರಮೋಷನ್ ಗೆ ಸಹಕರಿಸದೆ, ತಮಿಳು ಸಿನಿಮಾ ನೆಪ ಹೇಳುತ್ತಿರುವ ಕವಿತಾ ಗೌಡ ವಿರುದ್ಧ 'ಫಸ್ಟ್ ಲವ್' ಚಿತ್ರತಂಡ ಅಸಮಾಧಾನಗೊಂಡಿದೆ.
ಫಸ್ಟ್ ಲವ್ ಕುರಿತು...
'ಲವ್ ಗುರು' ಖ್ಯಾತಿಯ ರೇಡಿಯೋ ಜಾಕಿ ರಾಜೇಶ್ ನಾಯಕನಾಗಿ ಅಭಿನಯಿಸಿರುವ ಸಿನಿಮಾ 'ಫಸ್ಟ್ ಲವ್'. ಈ ಚಿತ್ರದಲ್ಲಿ ಕವಿತಾ ಗೌಡ, ಸ್ನೇಹ, ರಾಜು ತಾಳಿಕೋಟೆ, ಅರುಣ್ ಬಾಲರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ವರ್ಷದ ಹಿಂದೆ ಸೆಟ್ಟೇರಿದ್ದ ಈ ಸಿನಿಮಾ ಇದೀಗ ಥಿಯೇಟರ್ ಅಂಗಳಕ್ಕೆ ಬರುತ್ತಿದೆ.