Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹುಭಾಷೆ ಬೆಡಗಿ, ಕನ್ನಡತಿ ಲಕ್ಷ್ಮೀ ರೈ ಹೇಳಿದ್ದೇನು?
ಇದೀಗ ಬಿಡುಗಡೆಗೆ ಸಿದ್ಧವಾಗಿರುವ ಎಎಂಆರ್ ರಮೇಶ್ ನಿರ್ದೇಶನದ 'ಅಟ್ಟಹಾಸ' ಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ್ದಾರೆ ಲಕ್ಷ್ಮಿ ರೈ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಯಾವುದೇ ಒಂದು ಭಾಷೆಗೆ ಫಿಕ್ಸ್ ಆಗದ ಇವರು ಎಲ್ಲಾ ಭಾಷೆಯ ಚಿತ್ರಗಳನ್ನು ಸಮಾನವಾಗಿ ನೋಡುವ ಮಾತನಾಡುತ್ತಾರೆ. ಜೊತೆಗೆ ಬಾಲಿವುಡ್ ಚಿತ್ರಗಳಲ್ಲೂ ಲಕ್ಷ್ಮೀ ರೈ ಕಾಣಿಸಿಕೊಳ್ಳುತ್ತಿದ್ದಾರೆ.
ಇಂತಹ ಬಹುಭಾಷಾ ನಟಿ ಲಕ್ಷ್ಮೀ ರೈ"ನಾನು ಯಾವುದೇ ಒಂದು ನಿರ್ಧಿಷ್ಟ ಭಾಷೆ ಚಿತ್ರಗಳ ಪರವಾಗಿ ನಿಲ್ಲಲಾರೆ. ಒಬ್ಬಳು ನಟಿಯಾಗಿ ನಾನು, ಎಲ್ಲಾ ಭಾಷೆಯ ಚಿತ್ರಗಳನ್ನೂ ಸಮಾನವಾಗಿ ನೋಡುವ ಮನಸ್ಥಿತಿ ಹೊಂದಿದ್ದೇನೆ. ಅದು ನನ್ನ ಕರ್ತವ್ಯ ಕೂಡ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಈ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ನಾನು ನಟಿಸಲು ಇಷ್ಟಪಡುತ್ತೇನೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ತಮಿಳಿನಲ್ಲಿ ವಿಕ್ರಮ್ ನಾಯಕರಾಗಿದ್ದ 'ತಾಂಡವಂ'ನಲ್ಲಿ ಪಾತ್ರವೊಂದನ್ನು ಮಾಡಿರುವ ಲಕ್ಷ್ಮಿ ರೈ, ಈ ಪಾತ್ರದ ಮೂಲಕ ತಮಿಳು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಚಿತ್ರದ ಪಾತ್ರವನ್ನು ಒಪ್ಪೊಕೊಂಡ ಗುಟ್ಟನ್ನು ಬಿಚ್ಚಿಟ್ಟಿರುವ ಲಕ್ಷ್ಮೀ ರೈ, "ನಿರ್ದೇಶಕ ವಿಜಯ್ ನಾನೇ ಬೇಕೆಂದು ರಚ್ಚೆ ಹಿಡಿದರು" ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಅವರ ನಟನೆಯ ಬಹುಭಾಷಾ 'ಕಾಂಚನಾ' ಚಿತ್ರವು '3ಡಿ' ಆಗುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಕನ್ನಡದ ಹುಡಗಿ ಲಕ್ಷ್ಮೀ ರೈ, ಬಹಭಾಷೆ ತಾರೆಯಾಗಿ ಮಿಂಚುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ಎನಿಸಿದೆ. ಅವರೂ ಅಷ್ಟೇ, ಯಾವುದೇ ಒಂದು ಭಾಷೆಯ ಚಿತ್ರಕ್ಕೆ ಫಿಕ್ಸ್ ಆಗದೇ 'ಆಲ್ ಇಂಡಿಯಾ ಲೆವೆಲ್'ನಲ್ಲಿ ಮಿಂಚುವತ್ತಲೇ ತಮ್ಮ ಗಮನ ಕೇಂದ್ರೀಕರಿಸಿರುವುದು ಅವರದೇ ಮಾತುಗಳ ಮೂಲಕ ಗಮನಕ್ಕೆ ಬರುತ್ತಿದೆ. ಕನ್ನಡದಲ್ಲಿ ಅವರು ನಟಿಸಿರುವ ಇನ್ನೊಂದು ಚಿತ್ರ 'ಅಟ್ಟಹಾಸ' ಬಿಡುಗಡೆಗಾಗಿ ಅವರ ಕನ್ನಡದ ಅಭಿಮಾನಿಗಳು ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)