Don't Miss!
- News Kalaburagi Rain: ಸೂರ್ಯನಗರಿ ಕಲಬುರಗಿಯಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶ್ರೇಷ್ಠ ಹೆಣ್ಣು' ಪಾರ್ವತಮ್ಮ ರನ್ನ ನೆನೆದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ
ಕನ್ನಡ ಚಿತ್ರ ನಿರ್ಮಾಪಕಿ, ವಿತರಕಿ, ವರನಟ ಡಾ.ರಾಜ್ ಕುಮಾರ್ ರವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಇಂದು ಮುಂಜಾನೆ 4.40ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಪಾರ್ವತಮ್ಮ ರಾಜ್ ಕುಮಾರ್ ರವರ ನಿಧನ ವಾರ್ತೆ ಕೇಳಿದ ಕೂಡಲೆ, ಅವರ ಸದಾಶಿವನಗರದ ನಿವಾಸಕ್ಕೆ ಧಾವಿಸಿದ ಹಿರಿಯ ನಟಿ ಲೀಲಾವತಿ ಕಂಬನಿ ಮಿಡಿದರು.[ಡಾ.ರಾಜ್ ಸಮಾಧಿ ಪಕ್ಕದಲ್ಲಿಯೇ ಪತ್ನಿ ಪಾರ್ವತಮ್ಮ ಅಂತ್ಯಕ್ರಿಯೆ]
ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ರವರನ್ನ 'ಶ್ರೇಷ್ಠ ಹೆಣ್ಣು' ಎಂದು ಬಣ್ಣಿಸಿದ ಹಿರಿಯ ನಟಿ ಲೀಲಾವತಿ ಮಾಧ್ಯಮದವರೊಂದಿಗೆ ಮಾತನಾಡಿದ್ದು ಇಷ್ಟು -
ಮೂವತ್ತು ವರ್ಷಗಳ ಹಿಂದೆ ನಡೆದದ್ದು...
''ನನಗೆ ಅವರೊಂದು ಹೂವು ಹಾಗೂ ತೆಂಗಿನ ಕಾಯಿ ಕೊಟ್ಟು, ''ಲೀಲಾವತಿ ನನ್ನ ಮನಸ್ಸು ನೋಯಿಸಿಲ್ಲ. ಅವರಿಗೆ ಈ ಪ್ರಸಾದ ಕೊಡಿ'' ಎಂದಿದ್ದರು ಮೂವತ್ತು ವರ್ಷಗಳ ಹಿಂದೆ. ಅದು ನನ್ನನ್ನ ಇಲ್ಲಿಯವರೆಗೆ ಅವರನ್ನ ನೋಡಲು ಕರೆದುಕೊಂಡು ಬಂದಿದೆ'' ಎಂದು ಹೇಳುತ್ತಾ ಹಿರಿಯ ನಟಿ ಲೀಲಾವತಿ ಕಣ್ಣೀರು ಸುರಿಸಿದರು.[ಆರಿದ 'ದೊಡ್ಮನೆ' ದೀಪ: ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇನ್ನಿಲ್ಲ]
ಪಾರ್ವತಮ್ಮ ಆತ್ಮಕ್ಕೆ ಶಾಂತಿ ಸಿಗಲಿ
''ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರಿಗೆ ಮೋಕ್ಷ ಕೊಡಲಿ ಎಂದು ಪ್ರಾರ್ಥಿಸುತ್ತೇನೆ'' - ಲೀಲಾವತಿ, ಹಿರಿಯ ನಟಿ [ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]
ಸಿಂಗಾಪುರಕ್ಕೆ ಹೋಗಬೇಕಿತ್ತು.!
''ಸರ್ಕಾರದ ಭಂಡಾರದಲ್ಲಿ ಹಣ ಇರಲಿಲ್ಲವೇ.? ಸಿಂಗಾಪುರಕ್ಕೆ ಅವರನ್ನ ಕಳುಹಿಸಬಹುದಾಗಿತ್ತು. ಯಾಕೆ ಹಾಗೆ ಮಾಡಲಿಲ್ಲ ಎಂದು ಕೋಪ ಬರುತ್ತಿದೆ ನನಗೆ. ಅಲ್ಲಿ ಹೋಗಿದ್ದರೆ, ಅವರು ಸರಿ ಹೋಗುತ್ತಿದ್ದರು ಎಂಬ ನಂಬಿಕೆ ನನಗೆ ಇತ್ತು'' - ಲೀಲಾವತಿ, ಹಿರಿಯ ನಟಿ
ಶ್ರೇಷ್ಠ ಹೆಣ್ಣು ಪಾರ್ವತಮ್ಮ
''ಪಾರ್ವತಮ್ಮ ಅವರು ಇದ್ದಿದ್ರೆ, ಕನ್ನಡ ಚಿತ್ರರಂಗವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದರು. ಅವರು ಒಂದು ಶ್ರೇಷ್ಠ ಹೆಣ್ಣು ಮಗಳಾಗಿ ಬಾಳಿದವರು. ಅವರ ಶ್ರೇಷ್ಠತೆ ಎಲ್ಲರಿಗೂ ಬರಲಿ'' - ಲೀಲಾವತಿ, ಹಿರಿಯ ನಟಿ
ಮಕ್ಕಳಿಗೆ ಶಕ್ತಿ ಕೊಡಲಿ
''ಅವರ ಮಕ್ಕಳಿಗೆ ಧೈರ್ಯವಾಗಿ ಬಾಳುವಂತಹ ಶಕ್ತಿ ಕೊಡಲಿ. ಅವರ ಮಕ್ಕಳನ್ನು ನಿಮ್ಮ ಮಕ್ಕಳಂತೆ ಭಾವಿಸಿ, ಪ್ರೀತಿಯಿಂದ ಕಾಣಿರಿ. ಯಾರೂ ದ್ವೇಷ ಕಟ್ಟಿಕೊಳ್ಳಬೇಡಿ'' - ಲೀಲಾವತಿ, ಹಿರಿಯ ನಟಿ