Don't Miss!
- News Lok Sabha election: ಬೆಂಗಳೂರಿನಲ್ಲಿ ಒಂದು ಕೋಟಿ ದಾಟಿದ ಮತದಾರರ ಸಂಖ್ಯೆ
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ನಿವೇದಿತಾ ನಿಗೂಢ ಸಾವಿನ ಸುತ್ತಾ ಎದ್ದಿದ್ದ ಅನುಮಾನದ ಹುತ್ತ
ಸತತ 24 ದಿನಗಳ ಕಾಲ ಬೆಂಗಳೂರಿನ ಮಲ್ಯ ಆಸ್ಪತ್ರೆಯ ಐಸಿಯು ಬೆಡ್ನಲ್ಲಿ ಕೋಮಾದಲ್ಲಿದ್ದ ನಟಿ ನಿವೇದಿತಾ ಜೈನ್ ಅನ್ನು ಜೂನ್ 10 ರಂದು ನಿಧನ ಎಂದು ಘೋಷಿಸಲಾಯಿತು. ಸುಂದರ ಮುಖದ ನಿವೇದಿತ ಸಾಯುವ ವೇಳೆಗೆ ಮುಖ ವಿಕಾರಗೊಂಡು ಕೈ, ಕಾಲುಗಳು ಮುರಿದುಕೊಂಡು ಯಮಯಾತನೆ ಅನುಭವಿಸಿದ್ದರು.
Recommended Video
ವೃತ್ತಿ ಜೀವನದ ಉತ್ತಂಗದಲ್ಲಿದ್ದ ನಟಿ ನಿವೇದಿತ ರಾಜರಾಜೇಶ್ವರಿ ನಗರದಲ್ಲಿ ದೊಡ್ಡ ಮನೆಯೊಂದರಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಮೇ 17, 1998 ರಂದು ಅದೇ ಮನೆಯ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ನಿವೇದಿತಾ ಜೈನ್ ಅನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿವೇದಿತ ಜೈನ್ ಮೃತ ಎಂದು ಘೋಷಿಸುವ ಒಂದು ದಿನ ಹಿಂದಷ್ಟೆ ನಿವೇದಿತಾ ಗುಣಮುಖರಾಗುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದರು, ಮಾಧ್ಯಮಗಳಲ್ಲಿಯೂ ಆ ಬಗ್ಗೆ ವರದಿ ಆಗಿತ್ತು. ಆದರೆ ಅದಾದ ಮಾರನೇ ದಿನವೇ ನಿವೇದಿತ ಮೃತ ಎಂದು ಘೋಷಿಸಲಾಯಿತು. ಆದರೆ ಅವರ ಸಾವಿನ ಸುತ್ತ ಎದ್ದಿದ್ದ ಅನುಮಾನಗಳ ಹುತ್ತ ಇಂದಿಗೂ ಕರಗಿಲ್ಲ.
ಕಡಿಮೆ ವಯಸ್ಸಿನಲ್ಲಿಯೇ ಸಾಕಷ್ಟು ಯಶಸ್ಸು
ನಟಿ ನಿವೇದಿತಾ ಜೈನ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಹಾಗೂ ದೊಡ್ಡ ಮಟ್ಟದ ಭರವಸೆ ಮೂಡಿಸಿದ್ದ ನಟಿ. ಕೇವಲ 17 ವರ್ಷಕ್ಕೆ ನಟನಾ ವೃತ್ತಿಗೆ ಬಂದ ನಿವೇದಿತ ಸಿನಿಮಾ ರಂಗದಲ್ಲಿ ಇದ್ದಿದ್ದು ಎರಡೇ ವರ್ಷವಾದರು ನೆನಪುಳಿವ ಸಿನಿಮಾಗಳಲ್ಲಿ ನಟಿಸಿದರು. ರಮೇಶ್ ಜೊತೆಗೆ 'ಅಮೃತವರ್ಷಿಣಿ', ಶಿವರಾಜ್ ಕುಮಾರ್ ಜೊತೆಗೆ ಸುಂದರ ಸಿನಿಮಾ 'ಪ್ರೇಮರಾಗ ಹಾಡು ಗೆಳತಿ' ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ ನಿವೇದಿತಾ ಜೈನ್ ನಟಿಸಿದ್ದ ಒಂದೆರಡು ಸಿನಿಮಾಗಳಲ್ಲಿ ಸೋಲು ಕಂಡಿದ್ದರು ಸಹ.
ಹೇಳಿಕೆಗಳಲ್ಲಿ ವಿರೋಧಾಭಾಸ
ನಿವೇದಿತಾ ಜೈನ್ ಸಾವಿನ ಬಗ್ಗೆ ಅನುಮಾನ ಏಳಲು ಮುಖ್ಯ ಕಾರಣ ಅವರ ಕುಟುಂಬದವರು ನೀಡಿದ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲದೇ ಇದ್ದದ್ದು. 'ನಿವೇದಿತಾ ನೃತ್ಯಾಭ್ಯಾಸ ಮಾಡುವಾಗ ಮಹಡಿಯಿಂದ ಕೆಳಗೆ ಬಿದ್ದರು' ಎಂದು ಮೊದಲಿಗೆ ಹೇಳಲಾಯಿತು. ಆ ನಂತರ 'ನಿವೇದಿತಾ ಮಿಸ್ ಇಂಡಿಯಾಗೆ ತಯಾರಿ ನಡೆಸುತ್ತಿದ್ದರು. ಕ್ಯಾಟ್ ವಾಕ್ ಅಭ್ಯಾಸ ಮಾಡುವಾಗ ಮಹಡಿಯಿಂದ ಬಿದ್ದರು' ಎನ್ನಲಾಯಿತು. ಇವೆಲ್ಲವೂ ನಿವೇದಿತಾ ಸಾವಿನ ಬಗ್ಗೆ ಅನುಮಾನ ಮೂಡಿಸಿದವು.
ಸಿಎಂ ಹೆಸರೂ ಸಹ ಕೇಳಿಬಂದಿತ್ತು
ಹಲವರು, ನಿವೇದಿತಾ ಜೈನ್ ಆತ್ಮಹತ್ಯೆ ಮಾಡಿಕೊಂಡರು ಎಂದರು, ಆದರೆ ಈ ವಾದವನ್ನು ನಿವೇದಿತಾ ಜೈನ್ ಕುಟುಂಬದವರು ತಳ್ಳಿ ಹಾಕಿದರು. ನಿವೇದಿತಾ ಜೈನ್ ಸಾವಿನ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿಗಳ ಹೆಸರೂ ಸಹ ಕೇಳಿಬಂತು. ನಿವೇದಿತಾ ಜೈನ್ ಮಹಡಿಯಿಂದ ಬಿದ್ದ ದಿನ ಐಶಾರಾಮಿ ಬಿಳಿ ಕಾರೊಂದು ವೇಗವಾಗಿ ನಿವೇದಿತಾ ಮನೆ ಮುಂದಿನಿಂದ ಹೋಯಿತು. ಅದು ಆಗಿನ ಸಿಎಂ ಅವರಿಗೆ ಸೇರಿದ್ದ ಕಾರು ಎಂದು ಗಾಳಿ ಸುದ್ದಿ ಹರಿದಾಡಿತು. ಆದರೆ ಯಾವುದೂ ಸಹ ನಿರೂಪಿತವಾಗಲಿಲ್ಲ ಬದಲಿಗೆ ಗಾಳಿ ಸುದ್ದಿಯಾಗಿಯೇ ಉಳಿಯಿತು.
ಬಹುಬೇಗನೇ ಇಹಲೋಕ ತ್ಯಜಿಸಿದ ನಿವೇದಿತಾ
ಈಗಲೂ ಕನ್ನಡದ ನಟಿಯರ ಅಕಾಲಿಕ ಸಾವಿನ ವಿಷಯಗಳು ಚರ್ಚೆಗೆ ಬಂದಾಗ ನಿವೇದಿತಾ ಸಾವು ಚರ್ಚೆ ಆಗದೇ ಇರುವುದಿಲ್ಲ. ನಿವೇದಿತಾ ಆತ್ಮಹತ್ಯೆ ಮಾಡಿಕೊಂಡರು ಎಂದೇ ಇಂದಿಗೂ ಹಲವಾರು ಮಂದಿ ನಂಬಿದ್ದಾರೆ. ಹಲವು ಪತ್ರಕರ್ತರೂ ಸಹ ಇದನ್ನೇ ಹೇಳುತ್ತಾರೆ. ಆ ಅಪಘಾತ ನಡೆಯುವ ಮುನ್ನ ಪತ್ರಕರ್ತರೊಬ್ಬರು ಧಾರಾವಾಹಿ ವಿಷಯಕ್ಕೆ ಸಂಬಂಧಿಸಿದಂತೆ ನಿವೇದಿತಾ ಅವರನ್ನು ಭೇಟಿ ಆಗಿದ್ದರಂತೆ. ಅವರು ಆಗ ಹೇಳಿದ್ದಂತೆ ನಿವೇದಿತಾ ಬಹಳ ಬೇಸರದಲ್ಲಿದ್ದರು, ಅವರ ಮುಖದಲ್ಲಿ ಕಳೆಯೇ ಹೋಗಿತ್ತು ಎಂದಿದ್ದರು. ಏನೋ ಒಟ್ಟಿನಲ್ಲಿ ನಟಿ ನಿವೇದಿತಾ ಜೈನ್ ಬಹುಬೇಗನೇ ಹೋಗಿಬಿಟ್ಟರು ಎಂಬುದೊಂದೇ ಅಂತಿಮ ಸತ್ಯವಷ್ಟೆ.