Don't Miss!
- Finance ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ, ದಿನಾಂಕ ವಿವರ
- News ವಿ ಸೋಮಣ್ಣಗೆ ಎದುರಾಯ್ತು ಸಂಕಷ್ಟ: ಕೈ ನಾಯಕರ ಸಂಪರ್ಕದಲ್ಲಿರುವ ಮಾಧುಸ್ವಾಮಿ: ಕಾಂಗ್ರೆಸ್ ಸೇರ್ಪಡೆ?
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಕ್ಕರೆ ಸೇವನೆ ತ್ಯಜಿಸಿದ ನಟಿ ರಮ್ಯಾ.! ಏನಿದರ ಗುಟ್ಟು.?
ಒಂದ್ಕಾಲದಲ್ಲಿ ಸ್ಯಾಂಡಲ್ ವುಡ್ ಗೆ 'ಪದ್ಮಾವತಿ' ಆಗಿ ಮೆರೆದ 'ಲಕ್ಕಿ ಸ್ಟಾರ್' ರಮ್ಯಾ ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. 'ಕೈ' ಪಾಳಯ ಸೇರಿಕೊಂಡ ಮೇಲೆ ನಟಿ ರಮ್ಯಾ ರಾಜಕಾರಣ ಮಾಡುವುದರಲ್ಲಿಯೇ ಬಿಜಿಯಾಗಿದ್ದಾರೆ.
ಎಂ.ಪಿ ಆಗಿದ್ದ ರಮ್ಯಾ ಒಮ್ಮೆ ಪರಾಭವ ಅನುಭವಿಸಿದ ಮೇಲೆ ಚುನಾವಣೆ ಎಂಬ ಅಗ್ನಿಪರೀಕ್ಷೆಯನ್ನ ಮತ್ತೆ ಎದುರಿಸಿಲ್ಲ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಸೆಲ್ ನ ಮುಖ್ಯಸ್ಥೆ ಆಗಿರುವ ರಮ್ಯಾ ತಮ್ಮ ಕೆಲಸವನ್ನ ಇಷ್ಟ ಪಟ್ಟು ಮಾಡುತ್ತಿದ್ದಾರೆ.
ಇಂತಿಪ್ಪ ರಮ್ಯಾ ಇದೀಗ ಸಕ್ಕರೆ ಸೇವನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಅರೇ.. ರಮ್ಯಾಗಿನ್ನೂ 35 ವರ್ಷ ವಯಸ್ಸು. ಇಷ್ಟು ಬೇಗ ಸಕ್ಕರೆಯಿಂದ ರಮ್ಯಾ ದೂರ ಉಳಿದಿರುವುದು ಯಾಕೆ ಅಂತ ನೀವು ಪ್ರಶ್ನಿಸಬಹುದು. ಅದಕ್ಕೆ ಕಾರಣ ಬೇರೆ ಇದೆ. ಅದನ್ನ ನೀವೇ ನೋಡಿ ಫೋಟೋ ಸ್ಲೈಡ್ ಗಳಲ್ಲಿ...
ಸಕ್ಕರೆ ಕಂಡ್ರೆ ರಮ್ಯಾಗೆ ಪಂಚಪ್ರಾಣ
ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನ ಕಂಡ್ರೆ ರಮ್ಯಾಗೆ ಪಂಚಪ್ರಾಣ. ಖುಷಿ ಅಥವಾ ಒತ್ತಡ ಹೆಚ್ಚಾದಾಗೆಲ್ಲ ಸಿಹಿ ಸೇವಿಸುತ್ತಿದ್ದ ರಮ್ಯಾಗೆ ಇದೀಗ ಅದರ ದುಷ್ಪರಿಣಾಮ ಅರಿವಿಗೆ ಬಂದಿದೆ. ಹೀಗಾಗಿ, ಈ ವರ್ಷಾಂತ್ಯದವರೆಗೂ ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನ ಸೇವಿಸದೇ ಇರಲು ರಮ್ಯಾ ದೃಢ ನಿರ್ಧಾರ ಮಾಡಿದ್ದಾರೆ.
12 ವರ್ಷಗಳ ಬಳಿಕ ದರ್ಶನ್ ಗೆ ರಮ್ಯಾ ಜೋಡಿ ?
ನೋ ಶುಗರ್ ಚಾಲೆಂಜ್
ಸಕ್ಕರೆ ಹಾಗೂ ಸಿಹಿ ಪದಾರ್ಥಗಳು ತಮ್ಮ ಜೀವನ ಶೈಲಿಯ ಮೇಲೆ ಭಾರಿ ಪರಿಣಾಮ ಬೀರಿರುವ ಕಾರಣ ಡಿಸೆಂಬರ್ 31 ರವರೆಗೂ ನಟಿ ಹಾಗೂ ಮಾಜಿ ಸಂಸದೆ ರಮ್ಯಾ #ನೋಶುಗರ್ ಚಾಲೆಂಜ್ ಸ್ವೀಕರಿಸಿದ್ದಾರೆ.
ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ
ಸಕ್ಕರೆ ಮತ್ತು ನಟಿ ರಮ್ಯಾ
''ಇದು ಸಕ್ಕರೆ ಇಲ್ಲದ ನನ್ನ ಮೊದಲ ದಿನ. ಈ ವರ್ಷಾಂತ್ಯದವರೆಗೂ ಇದನ್ನೇ ಮುಂದುವರೆಸಲು ನಾನು ತೀರ್ಮಾನ ಮಾಡಿದ್ದೇನೆ. ಇಲ್ಲಿಯವರೆಗೂ ಎಲ್ಲವೂ ಸರಾಗವಾಗಿದೆ. ಸಕ್ಕರೆಯನ್ನ ಬಿಟ್ಟು ಇರಬೇಕು ಅಂತ ಹಲವಾರು ಬಾರಿ ನಾನು ಪ್ರಯತ್ನ ಪಟ್ಟಿದ್ದೇನೆ. ಆದ್ರೆ, 2-3 ದಿನಗಳಿಗಿಂತ ಹೆಚ್ಚು ದಿನ ಬಿಟ್ಟಿರಲು ಸಾಧ್ಯ ಆಗಲಿಲ್ಲ. ಎಷ್ಟೋ ಬಾರಿ ಸಕ್ಕರೆ ತ್ಯಜಿಸಲು ನಾನು ಪ್ರತಿಜ್ಞೆ ಮಾಡಿದ್ದೇನೆ ಎನ್ನುವುದನ್ನೇ ನಾನು ಮರೆತುಬಿಡುತ್ತಿದ್ದೆ'' - ನಟಿ ರಮ್ಯಾ
ರಕ್ಷಿತ್ ಗೆ ರಮ್ಯಾ ಕೊಟ್ಟ ಬ್ರೇಕಿಂಗ್: 2019ರಲ್ಲಿ ಸಿನಿಮಾಗೆ ಕಮ್ ಬ್ಯಾಕ್.!
ವರ್ಷಾಂತ್ಯದವರೆಗೂ ಸಕ್ಕರೆ ತಿನ್ನಲ್ಲ
''ಮುಂಚೆ ಇಷ್ಟಪಟ್ಟು ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದೆ. ಆದ್ರೆ ಅದೇ ಅಡಿಕ್ಷನ್ ಆಗ್ಹೋಗಿದೆ. ಒತ್ತಡ ಹೆಚ್ಚಾದಾಗ ಸಿಹಿ ತಿನ್ನಬೇಕು ಎನಿಸುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸಕ್ಕರೆ ಭಾರಿ ಪ್ರಭಾವ ಬೀರಿರುವ ಕಾರಣ ಡಿಸೆಂಬರ್ 31 ರವರೆಗೆ ಸಕ್ಕರೆಗೆ ಗುಡ್ ಬೈ ಹೇಳಲು ನಿರ್ಧಾರ ಮಾಡಿದ್ದೇನೆ'' ಎಂದು ನಟಿ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.