Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಲ್ಲೂರಿನಲ್ಲಿ ನಟಿ ಶ್ರುತಿಗೆ ಎರಡನೇ ಮದುವೆ
ಮನಮಿಡಿಯುವ ಪಾತ್ರಗಳ ಮೂಲಕ ಹೆಂಗೆಳೆಯರ ಮನಗೆದ್ದಿರುವ ನಟಿ ಶ್ರುತಿ ಅವರು ಗುರುವಾರ(ಜೂ.6) ನೂತನ ದಾಂಪತ್ಯಕ್ಕೆ ಅಡಿಯಿಟ್ಟಿದ್ದಾರೆ. ಖ್ಯಾತ ನಿರ್ದೇಶಕ ಎಸ್ ಮಹೇಂದರ್ ಅವರ ಜೊತೆ ವಿವಾಹ ವಿಚ್ಛೇದನ ಪಡೆದಿರುವ ಶ್ರುತಿ (38) ಎರಡನೇ ಬಾರಿ ಹಸೆಮಣೆ ಏರಿದ್ದಾರೆ.
ಉಡುಪಿ ಜಿಲ್ಲೆ ಕೊಲ್ಲ್ಲೂರು ಕ್ಷೇತ್ರದಲ್ಲಿ ಶ್ರುತಿ ಅವರ ಮದುವೆ ಇಂದು ಬೆಳಗ್ಗೆ 7.45ಕ್ಕೆ ನೆರವೇರಿತು. ಕಳೆದ ಕೆಲ ವರ್ಷಗಳಿಂದ ಶ್ರುತಿ ಅವರು ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಅವರ ಜೊತೆ ಅನ್ಯೋನ್ಯವಾಗಿದ್ದರು. ಈಗ ಮದುವೆ ಮೂಲಕ ಇವರಿಬ್ಬರೂ ಇನ್ನೂ ಹತ್ತಿರವಾಗಿದ್ದಾರೆ.
ಆದರೆ ದೇವಸ್ಥಾನದ ಅನುಮತಿ ಪಡೆಯದೆ ಇದ್ದ ಕಾರಣ ಮದುವೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಅಲ್ಲಿಂದ ಶ್ರುತಿ ಅವರು ತಮ್ಮ ಭಾವಿ ಪತಿ ಜೊತೆ ಕೊಲ್ಲೂರಿಗೆ ತೆರಳಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.
ಬೆಂಗಳೂರಿನ ಪುರೋಹಿತರೊಬ್ಬರ ನೇತೃತ್ವದಲ್ಲಿ ಇವರಿಬ್ಬರ ಮದುವೆ ಧಾರ್ಮಿಕ ವಿಧಿವಿಧಾನಗಳು ನಡೆದಿವೆ. ಕೇವಲ ಬಂಧು ಮಿತ್ರರಷ್ಟೇ ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ಶ್ರುತಿ ಅವರು ಸಾಂಸಾರಿಕ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ನಟಿ ಶ್ರುತಿ ಅವರಿಂದ ವಿಚ್ಛೇದನ ಪಡೆದ ಬಳಿಕ ಎಸ್ ಮಹೇಂದರ್ ಅವರು ಎರಡನೇ ಮದುವೆ ಮಾಡಿಕೊಂಡರು. ತಮ್ಮ ಸಂಬಂಧಿ ಯಶೋಧಾ ಅವರನ್ನು ಮದುವೆಯಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಾಗರಭಾವಿಯ ಮನೆಯಲ್ಲಿ ಮಹೇಂದರ್ ಅವರ ಹೊಸ ಸಂಸಾರ ಹಾಯಾಗಿ ಸಾಗುತ್ತಿದೆ. (ಏಜೆನ್ಸೀಸ್)