Don't Miss!
- News ಬಿಜೆಪಿಗೆ ಮತ್ತೊಂದು ಆಘಾತ, ಮತ್ತೋರ್ವ ವಿಧಾನ ಪರಿಷತ್ ಸದಸ್ಯ ರಾಜೀನಾಮೆ: ಮಾಜಿ ಸಿಎಂ ಏನಂದ್ರು?
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಹದಾರಿ ಮುಹೂರ್ತ: ಕಮ್ ಬ್ಯಾಕ್ ಮಾಡಿದ 'ಸಿಂಪಲ್ ಹುಡುಗಿ' ಶ್ವೇತಾ
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸಿದವರು ನಿರ್ದೇಶಕ ಸುನಿ, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ಶ್ವೇತಾ ಶ್ರೀವಾತ್ಸವ್.
ನಿರ್ದೇಶಕ ಸುನಿ ಮತ್ತು ನಟ ರಕ್ಷಿತ್ ಶೆಟ್ಟಿಯಂತೂ ಚಂದನವನದಲ್ಲಿ ಸಿಕ್ಕಾಪಟ್ಟೆ ಬಿಜಿಯಿದ್ದಾರೆ. ಇನ್ನೂ 'ಫೇರ್ ಅಂಡ್ ಲವ್ಲಿ', 'ಕಿರಗೂರಿನ ಗಯ್ಯಾಳಿಗಳು' ಚಿತ್ರಗಳಲ್ಲಿ ನಟಿಸಿದ ಬಳಿಕ ನಟಿ ಶ್ವೇತಾ ಶ್ರೀವಾತ್ಸವ್ ಹೆಣ್ಣು ಮಗುವಿನ ತಾಯಿ ಆದರು.
ಮಗುವಿನ ಆರೈಕೆಗಾಗಿ ಮೂರು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾತ್ಸವ್ ಇದೀಗ ಅಧಿಕೃತವಾಗಿ ಕಮ್ ಬ್ಯಾಕ್ ಮಾಡಿದ್ದಾರೆ. 'ರಹದಾರಿ' ಸಿನಿಮಾದ ಮುಖ್ಯ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಳ್ಳಲಿದ್ದಾರೆ.
ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ನ ಹುಡುಕಿಕೊಂಡು ಬಂದಿತ್ತು ಒಂಬತ್ತು ಆಫರ್ಸ್.!
'ರಹದಾರಿ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ನಡೆಯಿತು. 'ರಹದಾರಿ' ಸಿನಿಮಾ ಸೆಟ್ಟೇರಿದ ಖುಷಿಯಲ್ಲಿದ್ದ ಶ್ವೇತಾ ಶ್ರೀವಾತ್ಸವ್, ''ಮೂರು ವರ್ಷಗಳ ನಂತರ ಸಿನಿಮಾ ಮಾಡುತ್ತಿದ್ದೇನೆ. ತುಂಬಾ ಸಂತಸದಲ್ಲಿ ಇದ್ದೇನೆ. ನಿರ್ದೇಶಕ ಗಿರೀಶ್ ಕಥೆ ಹೇಳಿದ ರೀತಿ ನನಗೆ ತುಂಬಾ ಇಷ್ಟ ಆಯಿತು. ನಾನು ಸ್ವಲ್ಪ ಚ್ಯೂಸಿ. ನನಗೆ ಸಿಕ್ಕಿರುವ ಪಾತ್ರವನ್ನು ಹೀರೋ ಕೂಡ ಮಾಡಬಹುದಿತ್ತು. ಆದ್ರೆ, ನನಗೆ ಆ ಪಾತ್ರ ಕೊಟ್ಟಿರುವುದು ಖುಷಿ ತಂದಿದೆ'' ಎಂದರು.
ರಾಬರಿ ಕೇಸ್ ಬೆನ್ನು ಹತ್ತಿ 'ರಹದಾರಿ'ಯಲ್ಲಿ ಬಂದ್ರು ಶ್ವೇತಾ ಶ್ರೀವಾತ್ಸವ್
ರಾಬರಿ-ಥ್ರಿಲ್ಲರ್ ರೆಟ್ರೋ ಥೀಮ್ ಹೊಂದಿರುವ ಸಿನಿಮಾ 'ರಹದಾರಿ'. ಸೂಪರ್ ಕಾಪ್ ಮತ್ತು ರಾಬರಿ ತಂಡದ ನಡೆಯುವ ಹಾವು-ಏಣಿ ಆಟವೇ ಈ ಚಿತ್ರ. ಪೊಲೀಸ್ ಪಾತ್ರದಲ್ಲಿ ಶ್ವೇತಾ ನಟಿಸಿದರೆ, ಅವರೊಂದಿಗೆ ಸುಪ್ರೀತಾ ಕೂಡ ಇರಲಿದ್ದಾರೆ.
'ರಹದಾರಿ' ಮೂಲಕ ಚಿತ್ರರಂಗ ಪ್ರವೇಶಿಸಿದ 'ಸೀತಾ ವಲ್ಲಭ' ನಾಯಕಿ
ಈ ಹಿಂದೆ 'ಒಂದ್ ಕಥೆ ಹೇಳ್ಲಾ' ಚಿತ್ರವನ್ನ ನಿರ್ದೇಶನ ಮಾಡಿದ್ದ ಗಿರೀಶ್ ವೈರಮುಡಿ ಇದೀಗ 'ರಹದಾರಿ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ 'ರಹದಾರಿ' ಚಿತ್ರದ ಶೂಟಿಂಗ್ ಶುರುವಾಗಲಿದೆ.