ನಟಿ ಶ್ರುತಿ ಹರಿಹರನ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಗೋಲ್ಡನ್ ಗ್ರೀನ್ ಎಂಟರ್ ಪ್ರೈಸಸ್ ಹಾಗೂ ದಿ ಜ್ಯುವೆಲರಿ ಶೋ ಸಂಸ್ಥೆಯಿಂದ ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನಲ್ ಹಾಲ್ನಲ್ಲಿ ಆಯೋಜಿಸಿದ ಚಿನ್ನಾಭರಣ ಮತ್ತು ವಜ್ರಾಭರಣ ಮೇಳಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಹರಿಹರನ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರುತಿ ಹರಿಹರನ್ ಮಾತನಾಡಿ, ''ಶಿವಮೊಗ್ಗದಲ್ಲಿ ಮೊದಲ ಬಾರಿಗೆ ವರಮಹಾಲಕ್ಷ್ಮಿ ಹಾಗೂ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ. ಚಿನ್ನ ಹಾಗೂ ಚಿನ್ನದ ಆಭರಣಗಳ ಕುರಿತ ಸರಿಯಾದ ಮಾಹಿತಿ, ಬಗೆಬಗೆಯ ವಿನ್ಯಾಸಗಳನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಇಲ್ಲಿ ಸಿಗಲಿದೆ. ಹಾಗಾಗಿ ಶಿವಮೊಗ್ಗದ ಜನತೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ'' ಎಂದು ಮನವಿ ಮಾಡಿದರು.

ನಟಿ ಶ್ರುತಿ ನೋಡಲು ಮುಗಿಬಿದ್ದ ಅಭಿಮಾನಿಗಳು:
ನಟಿ ಶ್ರುತಿ ಹರಿಹರನ್ ಶಿವಮೊಗ್ಗಗೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಜಮಾಯಿಸಿದ್ದರು. ಅವರೊಡನೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹರಸಾಹಸ ಪಟ್ಟರು. ಅಭಿಮಾನಿಗಳಿಗೆ ಬೇಸರ ಮಾಡದ ಶ್ರುತಿ ಹರಿಹರನ್ ಕೂಡ ಎಲ್ಲರೊಂದಿಗೆ ಫೋಟೋಗೆ ಪೋಸ್ ನೀಡಿದರು.



Click it and Unblock the Notifications











