Don't Miss!
- News Bank Holidays in April: ಏಪ್ರಿಲ್ನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಪಟ್ಟಿ ಇಲ್ಲಿದೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜೀರ್ಜಿಂಬೆ..ಜೀರ್ಜಿಂಬೆ' ಎನ್ನುತ್ತಿದ್ದಾರೆ ಬೆಳದಿಂಗಳ ಬಾಲೆ ಸುಮನ್
ಒಂದು ಕಾಲದಲ್ಲಿ 'ಬೆಳದಿಂಗಳ ಬಾಲೆ'ಯಾಗಿ ಎಲ್ಲರ ಮನಗೆದ್ದಿದ್ದ ನಟಿ ಸುಮನ್ ನಗರ್ಕರ್ ಅವರು ಸುಮಾರು ಒಂದು ದಶಕದ ಬಳಿಕ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ 'ರೆ..' ಚಿತ್ರದ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದರು.
'ರೆ...' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸುಮನ್ ಅವರು ಇದೀಗ ಮತ್ತೆ ಮಕ್ಕಳ ಚಿತ್ರವೊಂದರಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ವಾಪಸಾಗಿದ್ದಾರೆ. ಹೌದು 'ಜೀರ್ಜಿಂಬೆ' ಎಂಬ ಮಕ್ಕಳ ಚಿತ್ರದಲ್ಲಿ ಸುಮನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.['ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್]
'ಪುಟ್ಟ ಹುಡುಗಿಯೊಬ್ಬಳು ಸೈಕಲ್ ತುಳಿಯಲು ಕಲಿಯುವ ಹಾಗೂ ಅದಕ್ಕಾಗಿ ಶ್ರಮಿಸುವ ಕಥೆ ಇರುವ ಸಿಂಪಲ್ ಮತ್ತು ಸುಂದರ ಚಿತ್ರವೇ 'ಜೀರ್ಜಿಂಬೆ'. 'ಚಿತ್ರದ ಪಾತ್ರ ಯಾವುದೇ ಇರಲಿ ಅದರಲ್ಲಿ ಒಂದು ಅರ್ಥವಿದ್ದು, ಅದಕ್ಕೆ ಜೀವ ತುಂಬಬಲ್ಲೆ ಅಂತ ಅನಿಸಿದ್ರೆ ಅದೆಷ್ಟೇ ಸಣ್ಣ ಪಾತ್ರವಾದರೂ ಸರಿ. ನಾನು ಆ ಚಿತ್ರದಲ್ಲಿ ಅಭಿನಯಿಸುತ್ತೇನೆ' ಎನ್ನುತ್ತಾರೆ ನಟಿ ಸುಮನ್ ನಗರ್ಕರ್.
ನವ ಪ್ರತಿಭೆ ಕಾರ್ತಿಕ್ ಸರಗೂರು ನಿರ್ದೇಶನ ಮಾಡಿರುವ 'ಜೀರ್ಜಿಂಬೆ' ಚಿತ್ರದಲ್ಲಿ ನಟಿ ಸುಮನ್ ಅವರು ಮಕ್ಕಳ ಜೊತೆ ಚೆನ್ನಾಗಿ ಬೆರೆತು ಶೂಟಿಂಗ್ ನಲ್ಲಿ ಭಾಗವಹಿಸಿ ಎಲ್ಲವನ್ನೂ ಸುಂದರವಾಗಿ ನಡೆಸಿಕೊಟ್ಟಿದ್ದಾರೆ.
ಇನ್ನು ನಟಿ ಸುಮನ್ ಅವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಇಷ್ಟಕಾಮ್ಯ' ಚಿತ್ರದಲ್ಲಿ ಕೂಡ ಒಂದು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಇದೇ ವಾರ ಭರ್ಜರಿಯಾಗಿ ಎಲ್ಲಾ ಕಡೆ ತೆರೆ ಕಾಣಲಿದೆ. 'ಜೀರ್ಜಿಂಬೆ' ಚಿತ್ರದ ಪತ್ರಿಕಾಗೋಷ್ಠಿಯ ಚಿತ್ರಗಳನ್ನು ನೋಡಿ ಕೆಳಗಿನ ಸ್ಲೈಡುಗಳಲ್ಲಿ..