Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜೀರ್ಜಿಂಬೆ..ಜೀರ್ಜಿಂಬೆ' ಎನ್ನುತ್ತಿದ್ದಾರೆ ಬೆಳದಿಂಗಳ ಬಾಲೆ ಸುಮನ್
ಒಂದು ಕಾಲದಲ್ಲಿ 'ಬೆಳದಿಂಗಳ ಬಾಲೆ'ಯಾಗಿ ಎಲ್ಲರ ಮನಗೆದ್ದಿದ್ದ ನಟಿ ಸುಮನ್ ನಗರ್ಕರ್ ಅವರು ಸುಮಾರು ಒಂದು ದಶಕದ ಬಳಿಕ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ 'ರೆ..' ಚಿತ್ರದ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದರು.
'ರೆ...' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸುಮನ್ ಅವರು ಇದೀಗ ಮತ್ತೆ ಮಕ್ಕಳ ಚಿತ್ರವೊಂದರಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ವಾಪಸಾಗಿದ್ದಾರೆ. ಹೌದು 'ಜೀರ್ಜಿಂಬೆ' ಎಂಬ ಮಕ್ಕಳ ಚಿತ್ರದಲ್ಲಿ ಸುಮನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.['ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್]
'ಪುಟ್ಟ ಹುಡುಗಿಯೊಬ್ಬಳು ಸೈಕಲ್ ತುಳಿಯಲು ಕಲಿಯುವ ಹಾಗೂ ಅದಕ್ಕಾಗಿ ಶ್ರಮಿಸುವ ಕಥೆ ಇರುವ ಸಿಂಪಲ್ ಮತ್ತು ಸುಂದರ ಚಿತ್ರವೇ 'ಜೀರ್ಜಿಂಬೆ'. 'ಚಿತ್ರದ ಪಾತ್ರ ಯಾವುದೇ ಇರಲಿ ಅದರಲ್ಲಿ ಒಂದು ಅರ್ಥವಿದ್ದು, ಅದಕ್ಕೆ ಜೀವ ತುಂಬಬಲ್ಲೆ ಅಂತ ಅನಿಸಿದ್ರೆ ಅದೆಷ್ಟೇ ಸಣ್ಣ ಪಾತ್ರವಾದರೂ ಸರಿ. ನಾನು ಆ ಚಿತ್ರದಲ್ಲಿ ಅಭಿನಯಿಸುತ್ತೇನೆ' ಎನ್ನುತ್ತಾರೆ ನಟಿ ಸುಮನ್ ನಗರ್ಕರ್.
ನವ ಪ್ರತಿಭೆ ಕಾರ್ತಿಕ್ ಸರಗೂರು ನಿರ್ದೇಶನ ಮಾಡಿರುವ 'ಜೀರ್ಜಿಂಬೆ' ಚಿತ್ರದಲ್ಲಿ ನಟಿ ಸುಮನ್ ಅವರು ಮಕ್ಕಳ ಜೊತೆ ಚೆನ್ನಾಗಿ ಬೆರೆತು ಶೂಟಿಂಗ್ ನಲ್ಲಿ ಭಾಗವಹಿಸಿ ಎಲ್ಲವನ್ನೂ ಸುಂದರವಾಗಿ ನಡೆಸಿಕೊಟ್ಟಿದ್ದಾರೆ.
ಇನ್ನು ನಟಿ ಸುಮನ್ ಅವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಇಷ್ಟಕಾಮ್ಯ' ಚಿತ್ರದಲ್ಲಿ ಕೂಡ ಒಂದು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಇದೇ ವಾರ ಭರ್ಜರಿಯಾಗಿ ಎಲ್ಲಾ ಕಡೆ ತೆರೆ ಕಾಣಲಿದೆ. 'ಜೀರ್ಜಿಂಬೆ' ಚಿತ್ರದ ಪತ್ರಿಕಾಗೋಷ್ಠಿಯ ಚಿತ್ರಗಳನ್ನು ನೋಡಿ ಕೆಳಗಿನ ಸ್ಲೈಡುಗಳಲ್ಲಿ..