twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದಿಂದ ದುನಿಯಾ ವಿಜಯ್ ಬಹಿಷ್ಕರಿಸಬೇಕು ಎಂದು ಒತ್ತಾಯ

    |

    ಪರಪ್ಪನ ಅಗ್ರಹಾರದಲ್ಲಿ ಇರುವ ದುನಿಯಾ ವಿಜಯ್ ಗೆ ಸಪ್ಟೆಂಬರ್ 26ರ ವರೆಗೆ ಜೈಲು ವಾಸ ಕಾಯಂ ಆಗಿದೆ. ಇತ್ತ ಚಿತ್ರರಂಗದಿಂದ ಅವರನ್ನು ಬಹಿಷ್ಕಾರ ಮಾಡಬೇಕು ಎಂಬ ಒತ್ತಾಯ ಜಾಸ್ತಿಯಾಗಿದೆ.

    ನಿನ್ನೆ ದುನಿಯಾ ವಿಜಯ್ ಪ್ರಕರಣದ ಬಗ್ಗೆ ಮಾತನಾಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ''ಇದು ದುನಿಯಾ ವಿಜಯ್ ಅವರ ವೈಯಕ್ತಿಯ ವಿಚಾರ ಹೀಗಾಗಿ ಚಿತ್ರರಂಗದಿಂದ ಬಹಿಷ್ಕಾರ ಮಾಡಲು ಸಾಧ್ಯವಿಲ್ಲ ಎಂದಿದ್ದರು.

    ಇನ್ನೂ ಎರಡು ದಿನ ಜೈಲಿನಲ್ಲೇ ಇರಬೇಕು 'ಕರಿಚಿರತೆ' ಇನ್ನೂ ಎರಡು ದಿನ ಜೈಲಿನಲ್ಲೇ ಇರಬೇಕು 'ಕರಿಚಿರತೆ'

    ಆದರೆ, ಇದೀಗ ಕನ್ನಡ ಚಳುವಳಿ ಒಕ್ಕೂಟ ದುನಿಯಾ ವಿಜಯ್ ವಿರುದ್ಧ ಫಿಲ್ಮ್ ಚೆಂಬರ್ ಗೆ ದೂರು ನೀಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಭಾಮಾ ಹರೀಶ್ ಅವರಿಗೆ ಮನವಿ ಪತ್ರ ನೀಡಿದೆ. ಅದರಲ್ಲಿ ದುನಿಯಾ ವಿಜಯ್ ನನ್ನು ಚಿತ್ರರಂಗದಿಂದ ಹೊರಗೆ ಹಾಕಬೇಕು ಎಂದು ಒತ್ತಾಯ ಮಾಡಿದ್ದಾರೆ.

    Kannada Chaluvali Okkuta lodges complaint against DuniyaVijay in KFCC

    ಇದರೊಂದಿಗೆ ಕಿಡ್ಲಾಪ್ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ವಿರುದ್ಧ ನಿನ್ನೆ ಪಾನಿಪುರಿ ಕಿಟ್ಟಿ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದರು.

    ಚಿತ್ರರಂಗದಿಂದ ದುನಿಯಾ ವಿಜಿ ಬಹಿಷ್ಕಾರ ಸಾಧ್ಯವಿಲ್ಲ ಚಿತ್ರರಂಗದಿಂದ ದುನಿಯಾ ವಿಜಿ ಬಹಿಷ್ಕಾರ ಸಾಧ್ಯವಿಲ್ಲ

    ಈ ಬಗ್ಗೆ ಮಾತನಾಡಿರುವ ಚಿನ್ನೇಗೌಡ ''ದುನಿಯಾ ವಿಜಿ ಪ್ರಕರಣ ಕೊರ್ಟ್ ನಲ್ಲಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದು ಅವರ ವೈಯಕ್ತಿಕ ವಿಚಾರ ಆಗಿರುವುದರಿಂದ ಚಿತ್ರರಂಗದಿಂದ ಬಹಿಷ್ಕಾರ ಸಾಧ್ಯವಿಲ್ಲ'' ಎಂದು ತಿಳಿಸಿದ್ದಾರೆ.

    English summary
    Kannada Chaluvali Okkuta lodges complaint against actor Duniya Vijay in Karnataka Film Chamber.
    Tuesday, September 25, 2018, 9:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X