Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಸಿನಿಮಾಗಳಲ್ಲಿ ಕನ್ನಡತನವಿಲ್ಲ: ಸಿಂಗ್
"ಈಗ ಭಾಷೆಯ ಬಳಕೆಯಲ್ಲಿ ಪ್ರೌಢಿಮೆಯಿರುವ ಡಾ. ರಾಜ್ ಕುಮಾರ್ ರಂತಹ ನಟರಿಲ್ಲ. ಪುಟ್ಟಣ್ಣ ಕಣಗಾಲ್ ರಂತಹ ನಿರ್ದೇಶಕರೂ ಇಲ್ಲ. ಐತಿಹಾಸಿಕ ಹಿನ್ನಲೆಯ, ಕಾದಂಬರಿ ಆಧಾರಿತ ಸಿನಿಮಾಗಳು ಬರುತ್ತಿಲ್ಲ. ಜಾಗತಿಕ ನೆಲೆಯಲ್ಲಿ ಕನ್ನಡ ಸಿನಿಮಾ ನೋಡಲು ನಿರಾಶೆಯಾಗುತ್ತಿದೆ" ಎಂದು ಸಿಂಗ್ ವಿಷಾದ ವ್ಯಕ್ತಪಡಿಸಿದರು.
"ಒಂದೆಡೆ ಕನ್ನಡ ಸೊರಗುತ್ತಿದೆ. ಇನ್ನೊಂದೆಡೆ ಹಿಂಸೆ, ಕ್ರೌರ್ಯ, ಸೆಕ್ಸ್ ವಿಜೃಂಭಿಸುತ್ತಿವೆ. ಇಂತಹ ಸಿನಿಮಾ ನೋಡುವ ಅಗತ್ಯವೇನಿದೆ. ಕರ್ನಾಟಕದಲ್ಲಿರುವ ಶೇಕಡ 60ರಷ್ಟು ಕನ್ನಡ ಮಾತನಾಡುವ ಜನರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತಯಾರಾಗಬೇಕು" ಎಂದರು.
ಚಿತ್ರನಗರಿಗೆ 300 ಎಕರೆ: ಹೆಸರುಘಟ್ಟದ ಬಳಿ ಚಿತ್ರನಗರಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, 300 ಎಕರೆ ಜಾಗ ನೀಡಲಾಗುತ್ತದೆ. ಇದು ಕನ್ನಡ ಸಿನಿಮಾ ಬೆಳವಣಿಗೆಗೆ ನೆರವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು ಹೇಳಿದ್ದಾರೆ.
ವಿಚಾರ ಸಂಕೀರಣದಲ್ಲಿ ಚಲಚಚಿತ್ರ ಅಕಾಡೆಮಿ ಅಧ್ಯಕ್ಷ ಟಿ. ಎಸ್. ನಾಗಾಭರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಪತ್ರಕರ್ತ ವಿ. ಎನ್. ಸುಬ್ಬರಾವ್ ಪಾಲ್ಗೊಂಡಿದ್ದರು.