twitter
    For Quick Alerts
    ALLOW NOTIFICATIONS  
    For Daily Alerts

    ರಾಕಿಂಗ್ ಸ್ಟಾರ್ ಯಶ್ ಹಾಕಿದ ಸವಾಲು ಸ್ವೀಕರಿಸಿದ ನಟ ಚಿಕ್ಕಣ್ಣ

    |

    Recommended Video

    ಸವಾಲು ಸ್ವೀಕರಿಸಿ ಕನ್ನಡದ ಪದ್ಯ ಓದಿದ ನಟ ಚಿಕ್ಕಣ್ಣ | Filmibeat Kannada

    ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸವಾಲನ್ನು ಎಸೆದಿದ್ದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಪದ್ಯ ಅಥವಾ ಕವನ ಓದುವ ಸವಾಲಿನ ಅಭಿಯಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದಾರೆ. ಹಿರಿಯ ಪತ್ರಕರ್ತರೊಬ್ಬರು ಹಾಕಿದ ಸವಾಲ್ ಸ್ವೀಕರಿಸಿ ಯಶ್ ಪದ್ಯ ಓದಿದ್ದಾರೆ. ಯಶ್ ಅವರಿಗೆ ತುಂಬ ಇಷ್ಟವಾದ ಕುವೆಂಪು ಅವರ ಪದ್ಯ ಓದಿ ಇನ್ನು ಮೂವರಿಗೆ ಸವಾಲ್ ಎಸೆದಿದ್ದರು.

    ರಾಷ್ಟ್ರ ಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಸಾರಿರುವ ಅನಿಕೇತನ ಪದ್ಯವನ್ನು ಓದಿ, ಈ ಸವಾಲ್ ಸ್ವೀಕರಿಸುವಂತೆ ಯಶ್ ಗುರುಗಳಾದ ನಾಗಾಭರಣ, ಸಾಹಿತಿಗಳಾದ ಡಾ.ವಿ ನಾಗೇಂದ್ರ ಪ್ರಸಾದ್, ಗೌಸ್ ಪೀಸ್ ಮತ್ತು ಕಾಮಿಡಿ ನಟರಾದ ಚಿಕ್ಕಣ್ಣ ಹಾಗೂ ರವಿಶಂಕರ್ ಗೌಡ ಮತ್ತು ಅರುಮುಗಂ ರವಿಶಂಕರ್ ಅವರಿಗೆ ಪದ್ಯ ಓದುವ ಸವಾಲ್ ನೀಡಿದ್ದಾರೆ.

    ಪದ್ಯ ಓದುವ ಸವಾಲ್ ಎಸೆದ ರಾಕಿಂಗ್ ಸ್ಟಾರ್ ಯಶ್ಪದ್ಯ ಓದುವ ಸವಾಲ್ ಎಸೆದ ರಾಕಿಂಗ್ ಸ್ಟಾರ್ ಯಶ್

    Kannada Comedy Actor Chikkanna Accept Rocking Star Yash Challenge


    ಈಗ ಚಿಕ್ಕಣ್ಣ ಈ ಸವಾಲನ್ನು ಸ್ವೀಕರಿಸಿ 'ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ'..ಪದ್ಯವನ್ನು ಓದಿದ್ದಾರೆ. ಈ ಸವಾಲನ್ನು ಮುಂದುವರೆಸಿ ಚಿಕ್ಕಣ್ಣ ನಿರ್ದೇಶಕ ಮಂಜು ಮಾಂಡವ್ಯ, ನಟರಾದ ಮಂಡ್ಯ ರಮೇಶ್ ಮತ್ತು ಅಚ್ಯುತ್ ಕುಮಾರ್ ಅವರಿಗೆ ಸವಾಲ್ ಎಸೆದಿದ್ದಾರೆ.

    ನವೆಂಬರ್ ತಿಂಗಳು ಕನ್ನಡದ ಹಬ್ಬ. ಕನ್ನಡಿಗರು ಹೆಮ್ಮೆಯಿಂದ ಆಚರಿಸುವ ಹಬ್ಬ. ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಮತ್ತಷ್ಟು ವಿಶಿಷ್ಟವಾಗಿ ಆಚರಿಸಲು ಸ್ಯಾಂಡಲ್ ವುಡ್ ಸ್ಟಾರ್ ಸಿದ್ಧರಾಗಿದ್ದಾರೆ. ಇಷ್ಟವಾದ ಪದ್ಯವನ್ನು ಓದಿ ಇನ್ನೊಬ್ಬರಿಗೆ ಸವಾಲ್ ಎಸೆಯುವ ಅಭಿಯಾನ ಶುರುಮಾಡಿ ಅನೇಕ ನಟರು ಭಾಗಿಯಾಗುತ್ತಿದ್ದಾರೆ. ಕನ್ನಡದ ಈ ಸವಾಲ್ ಎಸೆಯುವ ಅಭಿಯಾನ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎನ್ನುವ ಕುತೂಹಲ ಮೂಡಿಸಿದೆ.

    English summary
    Kannada comedy actor Chikkanna accept Rocking star Yash challenge. Chikkanna challenged to Mandya Ramesh, Manju Mandvya and Achyuth Kumar.
    Wednesday, November 13, 2019, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X