ಕನ್ನಡದ ಹಿರಿಯ ನಟ-ನಿರ್ದೇಶಕ ಶಾಂತಾರಾಮ್ ನಿಧನ
'ಕಲಿಯುಗದ ಕರ್ಣ' ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿದ್ದ 'ಕರ್ಣನ ಸಂಪತ್ತು' ಎಂಬ ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿದ್ದ 68 ವಯಸ್ಸಿನ ನಟ ಕಮ್ ನಿರ್ದೇಶಕ ಶಾಂತಾರಾಮ್ ಅವರು ಭಾನುವಾರ (ಮೇ 29) ದಂದು ನಿಧನ ಹೊಂದಿದ್ದಾರೆ.
ಕಳೆದ ಐದಾರು ದಿನಗಳಿಂದ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಕಮ್ ನಿರ್ದೇಶಕ ಶಾಂತಾರಾಮ್ ಅವರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮಧ್ಯಾಹ್ನ ಅಸುನೀಗಿದ್ದಾರೆ, ಎಂದು ಶಾಂತಾರಾಮ್ ಅವರ ಸಹೋದರ ಕೆ.ಆರ್ ಮುರಳಿಕೃಷ್ಣ ಅವರು ತಿಳಿಸಿದ್ದಾರೆ.[ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಂಬರೀಶ್ ರವರ ಅಪರೂಪದ ಭಾವಚಿತ್ರಗಳು]

ಕೆ.ಬಾಲಚಂದರ್ ಅವರ 'ತಪ್ಪಿದ ತಾಳ' ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ 'ಮರುತ್ತಕಾಲೈ' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1984ರಲ್ಲಿ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ಮರಳಿ ಗೂಡಿಗೆ' ಸಿನಿಮಾಗೆ ಕೆ.ಆರ್ ಶಾಂತಾರಾಮ್ ಅವರು ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದರು.

'ಬಾಳ ನೌಕೆ', 'ಹೃದಯ ಸಾಮ್ರಾಜ್ಯ' 'ಪ್ರೇಮ ತಪಸ್ವಿ', ಅಂಬರೀಶ್ ಅವರ 'ಕರ್ಣನ ಸಂಪತ್ತು' ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 'ಹೂವು ಹಣ್ಣು' ಮತ್ತು 'ಮಹಾಕ್ಷತ್ರಿಯ' ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದಾರೆ. ಇವರು ಪತ್ನಿ ಶೈಲಾ ಶಾಂತಾರಾಮ್ ಅವರನ್ನು ಅಗಲಿದ್ದಾರೆ.


Click it and Unblock the Notifications











