Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಟಕ, ಸಿನಿಮಾ ನಂತರ ವೆಬ್ ಸೀರಿಸ್ ಶುರು ಮಾಡಲಿದ್ದಾರೆ ಗಿರಿರಾಜ್
ಕನ್ನಡದಲ್ಲಿ ಈಗ ವೆಬ್ ಸೀರಿಸ್ ಗಳು ಹೆಚ್ಚಾಗುತ್ತಿದೆ. ವೆಬ್ ಸೀರಿಸ್ ಗಳು ಕನ್ನಡಕ್ಕೆ ತೀರಾ ಹೊಸದಾಗಿದ್ದರು ಕೂಡ ಇತ್ತೀಚಿಗೆ ಅದರ ಜನಪ್ರಿಯತೆ ದೊಡ್ಡದಾಗಿತ್ತಿದೆ. ಈಗ ಖ್ಯಾತ ನಿರ್ದೇಶಕ ಗಿರಿರಾಜ್ ಕೂಡ ವೆಬ್ ಸೀರಿಸ್ ಮಾಡಲು ಮುಂದಾಗಿದ್ದಾರೆ.
ಗಿರಿರಾಜ್ 'ರಕ್ತ ಚಂದನ' ಎಂಬ ಹೆಸರಿನಲ್ಲಿ ಹೊಸ ವೆಬ್ ಸೀರಿಸ್ ಶುರು ಮಾಡಲಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ. ವಿಶೇಷ ಅಂದರೆ ತಮ್ಮ ರಂಗಭೂಮಿ ತಂಡವಾದ ನಿರ್ಗುಣ ತಂಡದ ಆದ್ವಿಕಾ ಎಂಬುವವರು ಈ ವೆಬ್ ಸೀರಿಸ್ ನಲ್ಲಿ ಮುಖ್ಯ ಪಾತ್ರ ಮಾಡಲಿದ್ದಾರೆ. ಎಂಟು ಕಂತುಗಳಲ್ಲಿ ಈ ವೆಬ್ ಸೀರಿಸ್ ಬರಲಿದೆ. ಉಳಿದಂತೆ, ಪ್ರದೀಪ್ ರೆಡ್ಡಿ ಛಾಯಾಗ್ರಹಣ, ಅಭಿ ಸಂಗೀತ ನೀಡಲಿದ್ದಾರೆ. ಮೇ ಕೊನೆಯಲ್ಲಿ ಚಿತ್ರೀಕರಣ ಶುರು ಆಗಲಿದೆ.
ನನ್ನ ಮೊದಲ ಸಿನಿಮಾ : 35 ಸಾವಿರದಲ್ಲಿ ಸಿನಿಮಾ ಮಾಡಿ ತೋರಿಸಿದ್ದ ಗಿರಿರಾಜ್
ಅಂದಹಾಗೆ, ಗಿರಿರಾಜ್ 'ಜಟ್ಟ', 'ಮೈತ್ರಿ' 'ಅಮರಾವತಿ' ರೀತಿಯ ಒಳ್ಳೆಯ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇತ್ತೀಚಿಗಷ್ಟೆ ಅವರ 'ಸುಗಂಧದ ಸೀಮೆಯಾಚೆ' ನಾಟಕ ಜನಮನ್ನಣೆ ಪಡೆದಿತ್ತು. ನಾಟಕ ಸಿನಿಮಾದ ನಂತರ ಈಗ ಈ ಡಿಜಿಟಲ್ ಯುಗಕ್ಕೆ ತಕ್ಕಂತೆ ಗಿರಿರಾಜ್ ವೆಬ್ ಸೀರಿಸ್ ಪ್ಲಾನ್ ಮಾಡಿದ್ದಾರೆ.