Don't Miss!
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಬ್ಬಾ.! ಎಂತಹಾ ಗಟ್ಟಿಗಿತ್ತಿ ಈ ದೀದಿ, ಈ ದಿಗ್ವಿಜಯ ಬಣ್ಣಿಸಲು ಮಾತೇ ಇಲ್ಲ: ಕವಿರಾಜ್
ಭಾರಿ ಕುತೂಹಲ ಮೂಡಿಸಿದ್ದ 5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೆಲುವಿನ ನಗೆ ಬೀರಿದೆ. ಮತ್ತೆ ಅಧಿಕಾರದ ಗದ್ದುಗೆ ಏರಿರುವ ದೀದಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಕರ್ನಾಟಕದ ಸಿನಿಸೆಲೆಬ್ರಿಟಿಗಳು ಸಹ ದೀದಿ ಗೆಲುವಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಕನ್ನಡ ಗೀತರಚನೆಕಾರ ಮತ್ತು ನಿರ್ದೇಶಕ ಕವಿರಾಜ್ ಪ್ರತಿಕ್ರಿಯೆ ನೀಡಿ, ' ಅಬ್ಬಾ. ಎಂತಹಾ ಗಟ್ಟಿಗಿತ್ತಿ ಈ ದೀದಿ. ದೈತ್ಯ ಜೋಡಿಯ ಅಧಿಕಾರದ ಮದ , ದೇಶ ಆಳುವ ಪಕ್ಷದ ಹಣ ಬಲ, ಚುನಾವಣೆ ಗೆಲ್ಲಲು ಎಂತಹಾ ಹಂತಕ್ಕೂ ಇಳಿಯುವ ಮನಸ್ಥಿತಿ.'
'ಧರ್ಮದ ಹೆಸರಲ್ಲಿ ದ್ವೇಷದ ದಾಳ, ತನ್ನ ಸೇನಾನಿಗಳನ್ನೆ ಲಪಟಾಯಿಸಿ ತನ್ನೆದುರೇ ನಿಲ್ಲಿಸಿದ ರಾಜಕೀಯ ಕುತಂತ್ರಗಾರಿಕೆ, ಎಂಟು ಸುತ್ತುಗಳ ಚೈತನ್ಯ ಉಡುಗಿಸುವ ಚುನಾವಣಾ ವೇಳಾಪಟ್ಟಿ, ಕಾಲಿಗೆ ಗಾಯ, ವ್ಹೀಲ್ ಚೇರ್ ಅಲ್ಲೇ ಕುಳಿತು ಪ್ರಚಾರ ನಡೆಸಬೇಕಾದ ಅಸಹಾಯಕತೆ. ಇಷ್ಟೆಲ್ಲಾ ಪ್ರತಿಕೂಲ ವಿಚಾರಗಳ ನಡುವೆಯು ಅಕ್ಷರಶಃ ಏಕಾಂಗಿಯಾಗಿ ಹೋರಾಡಿ ಸಾಧಿಸಿದ ದಿಗ್ವಿಜಯ ಬಣ್ಣಿಸಲು ಮಾತೇ ಇಲ್ಲ. ಶರಣೋ ಶರಣು..'ಎಂದು ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Recommended Video
ಇನ್ನು ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಮಂಸೋರೆ, 'ಪ.ಬಂಗಾಳದ ಗೆಲುವು ಕೇವಲ ಒಂದು ಪಕ್ಷದ ಗೆಲುವಲ್ಲಾ. ಪಕ್ಷ, ಸಿದ್ಧಾಂತಗಳ ಆಚೆಗೆ 'ಪುರುಷ ಮನಸ್ಥಿತಿಯ' ವಿರುದ್ಧದ ಗೆಲುವು. ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ, ಹೆಣ್ಣನ್ನು (ಅದರಲ್ಲೂ ರಾಜ್ಯದ ಮುಖ್ಯಮಂತ್ರಿಯನ್ನು) ಸಾರ್ವಜನಿಕ ವೇದಿಕೆಯಲ್ಲಿ ಲೇವಡಿ ಮಾಡುವಂತಹ 'ಸನಾತನ ಪುರುಷ ಮನಸ್ಥಿತಿ'ಯ ವಿರುದ್ಧದ ಗೆಲುವು ಖಂಡಿತವಾಗಿಯೂ ಚರಿತ್ರೆಯಲ್ಲಿ ದಾಖಲಾಗಬೇಕಾದ ವಿಷಯ. ಬಂಗಾಳದ ರಾಜ್ಯ ದೇವತೆ 'ಕಾಳಿಮಾತೆ' ದೇಶದೆಲ್ಲೆಡೆ ಇರುವ ಪುರುಷರ ಒಳಗಿರುವ 'ತಾನು ಗಂಡಸು ಎಂಬ ಅಹಮ್ಮಿನ' ರಾಕ್ಷಸನನ್ನು ಬಲಿ ತೆಗೆದುಕೊಳ್ಳುವಂತಾಗಲಿ.' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.