'ಮೆಜೆಸ್ಟಿಕ್' ಚಿತ್ರ ಖ್ಯಾತಿಯ ನಿರ್ದೇಶಕ ಪಿ ಎನ್ ಸತ್ಯ ನಿಧನ
ಕನ್ನಡದ ಹೆಸರಾಂತ ನಿರ್ದೇಶಕ ಪಿ ಎನ್ ಸತ್ಯ ಇಂದು ಸಂಜೆ 7;30ಕ್ಕೆ ವಿಧಿವಶರಾಗಿದ್ದಾರೆ. ಸುಮಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಿ ಎನ್ ಸತ್ಯ ಕಳೆದ ಎರಡು ವಾರಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಮನೆಗೆಕರೆದುಕೊಂಡು ಬರಲಾಗಿತ್ತು. ಇಂದು ಸಂಜೆ ಲೋ ಬಿಪಿ ಆದ ಕಾರಣ ಕೊನೆಉಸಿರೆಳೆದಿದ್ದಾರೆ.
ನಟ ದರ್ಶನ್ ತೂಗುದೀಪ ಅವರ ಮೊದಲ ಸಿನಿಮಾ 'ಮೆಜೆಸ್ಟಿಕ್' ಚಿತ್ರವನ್ನು ಪಿ.ಎನ್ ಸತ್ಯ ನಿರ್ದೇಶನ ಮಾಡಿದ್ದರು. ಸುದೀಪ್ ಅವರ 'ಗೂಳಿ', ದುನಿಯಾ ವಿಜಯ್ ಜೊತೆ 'ಶಿವಾಜಿನಗರ', ಶಿವರಾಜ್ ಕುಮಾರ್ ಜೊತೆ 'ಹ್ಯಾಟ್ರಿಕ್ ಹೊಡಿಮಗ' ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. 'ಬೆಂಗಳೂರು ಅಂಡರ್ವಲ್ಡ್' ಮತ್ತು'ಮರಿ ಟೈಗರ್' ಇತ್ತಿಚಿಗೆ ಸತ್ಯ ನಿರ್ದೇಶನ ಮಾಡಿದ್ದ ಸಿನಿಮಾಗಳಾಗಿವೆ.

ಅಂದಹಾಗೆ, ಅನಾರೋಗ್ಯದಿಂದ ನಿಧನರಾದ ಸತ್ಯ ಅವರ ಮೃತದೇಹದ ಅಂತಿಮ ದರ್ಶನ ವ್ಯವಸ್ಥೆಯನ್ನು ಬಸವೇಶ್ವರನಗರದ ಅವರ ಸೋದರಿ ಮನೆಯಲ್ಲಿ ಮಾಡಲಾಗಿದೆ.
More from Filmibeat
English summary
Kannada Director PN Sathya passes away


Click it and Unblock the Notifications











