For Quick Alerts
For Daily Alerts
Don't Miss!
- Lifestyle ಕೇರಳದಲ್ಲಿ ಕನ್ನಡತಿಯ ರಾಜಕೀಯ ಎಂಟ್ರಿ..! 7 ಭಾಷೆ ಮಾತನಾಡುವ ಈಕೆ ಯಾರು ಗೊತ್ತಾ?
- Sports Test: ಭಾರತ, ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ವೇಳಾ ಪಟ್ಟಿ ಬಿಡುಗಡೆ; ಒಂದು ಡೇ ಆಂಡ್ ನೈಟ್ ಟೆಸ್ಟ್
- News ವೈಭವದಿಂದ ಜರುಗಿದ ನಾಯಕನಹಟ್ಟಿ ತಿಪ್ಪೇಶನ ರಥೋತ್ಸವ, ಮುಕ್ತಿ ಬಾವುಟ ಯಾರ ಪಾಲಾಯ್ತು ಹಾಗೂ ಎಷ್ಟು ಲಕ್ಷ?
- Technology Lenovo: ಭಾರತದಲ್ಲಿ ಲೆನೊವೊ ಟ್ಯಾಬ್ M11 ಲಾಂಚ್! 8GB RAM ... ಬೆಲೆ ಎಷ್ಟು?
- Automobiles ಸದ್ಯದಲ್ಲೇ ಭಾರತಕ್ಕೆ ಹೋಂಡಾ ಸಿಟಿ ಹ್ಯಾಚ್ಬ್ಯಾಕ್: ಇದು ಹೋಂಡಾದ ಹೊಸ ಅಧ್ಯಾಯ!
- Finance ಇಪಿಎಫ್ಒ ವಿಚಾರದಲ್ಲಿ ಎಲ್ಲ ನೌಕರರಿಗೆ ಶುಭ ಸುದ್ದಿ, ಇಲ್ಲಿದೆ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ನಿಧನ
News
oi-Naveen Ms
By Naveen Ms
|
ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ವಿಧಿವಶರಾಗಿದ್ದಾರೆ. H1N1 ರೋಗದಿಂದ ಬಳಲುತ್ತಿದ್ದ ಅವರು ನಿನ್ನೆ ನಿಧನ ಹೊಂದಿದ್ದಾರೆ.
ಶಂಕರಲಿಂಗ ಸುಗ್ನಳ್ಳಿ ನಿರ್ದೇಶಕ, ನಿರ್ಮಾಪಕ ಅಷ್ಟೇ ಅಲ್ಲದೆ ಕ್ಯಾಮರಾ ಮ್ಯಾನ್ ಕೂಡ ಆಗಿದ್ದರು. ಅದ್ನಾಡಿ ಅಳಿಯ, ಶರಣ ಬಸವ, ವಿಜಯಕಂಕಣ, ಏಳು ಕೋಟಿ ಮಾರ್ತಾಂಡ ಬೈರವ, ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್, ಪ್ರೇಮ ದೇವತೆ ಹೀಗೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ನಟಿ ರಾಗಿಣಿ ದ್ವಿವೇದಿಯಂತಹ ಸ್ಟಾರ್ ಅನ್ನು 'ಹೋಲಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗೆ ಇದೆ.
H1N1 ರೋಗದಿಂದ ಬಳಲುತ್ತಿದ್ದ ಅವರು ಕಳೆದ ಒಂದುವರೆ ತಿಂಗಳಿನಿಂದ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, H1N1 ಸೋಂಕು ಮೈ ತುಂಬ ಹರಡಿ ಶ್ವಾಸಕೋಶ ತಲುಪಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಅವರ ಚಿತ್ರರಂಗ ಮಿತ್ರರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Kannada director Shankaralinga Sugnalli passes away yesterday (November 16th).
Story first published: Friday, November 16, 2018, 9:52 [IST]
Other articles published on Nov 16, 2018