Don't Miss!
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಶ್ವೇತಾ ಪಂಡಿತ್ 'ಕೇಸ್'ಗೆ ಮರುಜೀವ
ನಟಿ ಶ್ವೇತಾ ಪಂಡಿತ್ 'ಕೇಸ್'ಗೆ ಮರುಜೀವ ಬಂದಿದೆ. ಕೇಸ್ ಹಳೆಯದಾದರೂ ಅದಕ್ಕಿರುವ ಪ್ರಾಮುಖ್ಯತೆಯ ಕಾರಣ ಅದನ್ನು ಮತ್ತೆ ರೀ ಓಪನ್ ಮಾಡಲಾಗುತ್ತಿದೆ. ಇದ್ಯಾವ ಕೇಸು ಎಂದು ಕಂಗಾಲಾಗಬೇಡಿ. ನಾವು ಮಾತನಾಡುತ್ತಿರುವುದು 'ಕೇಸ್ ನಂ.18/9' ಚಿತ್ರದ ಬಗ್ಗೆ ಕಣಣ್ಣೋ.
ವ್ಯಾಪಾರಿ ಸಿನಿಮಾಗಳಲ್ಲಿ ಮನಸ್ಸು ಹಾಗೂ ಹೃದಯ ತಟ್ಟುವ ಸಿನಿಮಾ 'ಕೇಸ್ ನಂ.18/9' ಈ ಶುಕ್ರವಾರ (ಅ.25) ರಜತಪರದೆ ಮೇಲೆ ಮತ್ತೆ ರಾರಾಜಿಸಲಿದೆ. ಉದ್ಯಮದ ಹಲವಾರು ನುರಿತ ವ್ಯಕ್ತಿಗಳ ಸಲಹೆಯಂತೆ ಹಾಗೂ ಪ್ರೇಕ್ಷಕರಿಗೆ ಮತ್ತೆ ಒಂದು ಸಾಮಾಜಿಕ ಜವಾಬ್ದಾರಿಯ ಕಾರಣ ಸಿನೆಮಾ ವೀಕ್ಷಣೆಗೆ ಅವಕಾಶ ನೀಡುತ್ತಿದ್ದಾರೆ ನಿರ್ಮಾಪಕರು.
ನಾಯಕ ನಿರಂಜನ್ ಈ ಚಿತ್ರಕ್ಕಾಗಿ ಒಂದು ವಾರ ಕಾಲ ಕೊಳಚೆ ಪ್ರದೇಶದಲ್ಲಿ ಇದ್ದು ಅಲ್ಲಿನ ವಾತಾವರಣವನ್ನು ಗಮನಿಸಿ ಈ ಸಿನಿಮಾಕ್ಕೆ ಬೇಕಾದ ರೀತಿಯಲ್ಲಿ ಹಾವಭಾವಗಳನ್ನು ಅಳವಡಿಸಿಕೊಂಡಿದ್ದಾರೆ. ಶ್ವೇತಾ ಪಂಡಿತ್, ಅಭಿ, ಸಿಂಧು ಲೋಕನಾಥ್ ಹಾಗೂ ಕಾರ್ತಿಕ್ ಶರ್ಮ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ನಿರ್ದೇಶಕರು ಮಹೇಶ್ ರಾವ್. ಛಾಯಾಗ್ರಾಹಕ ಸಭಾ ಕುಮಾರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ದೀಪು ಎಸ್ ಕುಮಾರ್ ಅವರ ಸಂಕಲನ, ರಾಜು ಬೆಳೆಗೆರೆ ಅವರ ಸಂಭಾಷಣೆ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)