Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಸ್ತಕ ಮತ್ತು ಡಿವಿಡಿ ರೂಪದಲ್ಲಿ ಶ್ರೇಷ್ಠ ಚಿತ್ರ ಘಟಶ್ರಾದ್ಧ
ಇದರ ಜೊತೆಗೆ 'ಕುಬಿ ಮತ್ತು ಇಯಾಲ' (1990) ಹಾಗೂ 'ಗುಡ್ಡದ ಭೂತ' (ಜನಪ್ರಿಯ ಧಾರಾವಾಹಿ) ಡಿವಿಡಿಗಳೂ ಲೋಕಾರ್ಪಣೆಯಾಗುತ್ತಿವೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಟೋಟಲ್ ಕನ್ನಡ ಸಂಯುಕ್ತ ಆಶ್ರಯದಲ್ಲಿ ಡಿವಿಡಿಗಳನ್ನು ಹೊರತರಲಾಗಿದೆ.
ಘಟಶ್ರಾದ್ಧ ಕತೆ, ಚಿತ್ರಕತೆ, ಚಿತ್ರ ಲೇಖನ ಇರುವ ಪುಸ್ತಕದ ಬಿಡುಗಡೆ ಕೂಡ ಮಾಡಲಾಗುತ್ತಿದೆ. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಯು.ಆರ್. ಅನಂತಮೂರ್ತಿ ಅವರು ವಹಿಸುತ್ತಿದ್ದಾರೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಿ.ಆರ್. ಸಿಂಹ, ಡಾ.ಕೆ. ಪುಟ್ಟಸ್ವಾಮಿ, ಸದಾನಂದ ಸುವರ್ಣ ಹಾಗೂ ಗಿರೀಶ್ ಕಾಸರವಳ್ಳಿ ಆಗಮಿಸುತ್ತಿದ್ದಾರೆ.
ಘಟಶ್ರಾದ್ಧ ಚಿತ್ರದ ವಿಶೇಷಗಳು: ಚಿತ್ರದ ಬಜೆಟ್ ಒಂದೂಮುಕ್ಕಾಲು ಲಕ್ಷ. ಜಗತ್ತಿನ ಅತ್ಯುತ್ತಮ ನೂರು ಚಿತ್ರಗಳಲ್ಲಿ ಒಂದಾಗಿದೆ. ಭಾರತದ ಅತ್ಯುತ್ತಮ ಇಪ್ಪತ್ತು ಚಿತ್ರಗಳಲ್ಲೊಂದು ಎಂದು ಗುರುತಿಸಿಕೊಂಡಿದೆ. ಯು.ಆರ್. ಅನಂತಮೂರ್ತಿ ಅವರ ಸಣ್ಣಕಥೆ ಆಧಾರಿತ ಚಿತ್ರವಿದು.
ಪುಣೆ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಗಿರೀಶ್ ಕಾಸರವಳ್ಳಿ ಅವರು ಡಿಪ್ಲೊಮಾ ಪಡೆದು ಹೊರಬಂದ ಬಳಿಕ ನಿರ್ದೇಶಿಸಿದ ಮೊದಲ ಚಿತ್ರ ಇದಾಗಿದೆ. 'ಸ್ವರ್ಣಕಮಲ' ಪ್ರಶಸ್ತಿ ಪುರಸ್ಕೃತ ಚಿತ್ರ. ಡಿವಿಡಿ ಬಿಡುಗಡೆ ಸ್ಥಳ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ.
ಕಪ್ಪು ಬಿಳುಪು ಚಿತ್ರವಾದ 'ಘಟಶ್ರಾದ್ಧ' 1977ರಲ್ಲಿ ತೆರೆಕಂಡಿತ್ತು. ಮೀನಾ, ಅಜಿತ್, ನಾರಾಯಣ ಭಟ್, ರಾಮಕೃಷ್ಣ, ಬಿ ಸುರೇಶ್ ಮತ್ತು ಶಾಂತಾ ಅವರು ಚಿತ್ರದಲ್ಲಿ ಅಭಿನಯಿಸಿದ್ದರು. ಬಿ ವಿ ಕಾರಂತರ ಸಂಗೀತ ಸಂಯೋಜನೆ ಮತ್ತು ಎಸ್ ರಾಮಚಂದ್ರ ಅವರ ಛಾಯಾಗ್ರಹಣ ಘಟಶ್ರಾದ್ಧ ಚಿತ್ರಕ್ಕಿದೆ. (ಒನ್ ಇಂಡಿಯಾ ಕನ್ನಡ)