Don't Miss!
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಣದ ಕೈಗಳ ಚೆಲ್ಲಾಟಕ್ಕೆ 'ಮಳೆ' ಹಾಡುಗಳು ಬಲಿ
ಇತ್ತೀಚಿನ ದಿನಗಳಲ್ಲಿ ಚಿತ್ರ ಬಿಡುಗಡೆಗೂ ಮುನ್ನವೇ ಆ ಚಿತ್ರದ ಕೆಲವು ಮುಖ್ಯ ಸನ್ನಿವೇಶಗಳು ಲೀಕ್ ಆಗುತ್ತಿರುವುದು ಸಾಮಾನ್ಯವಾಗಿದೆ. ಈ ಹಿಂದೆ ತೆಲುಗಿನಲ್ಲಿ ಅತ್ತಾರಿಂಟಿಕಿ ದಾರೇದಿ ಚಿತ್ರದ ಮೊದಲರ್ಧ ರಿಲೀಸ್ ಆಗಿ ಟಾಲಿವುಡ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
ಈಗ ಸ್ಯಾಂಡಲ್ ವುಡ್ ನಲ್ಲೂ ಈ ಕಾಯಿಲೆ ಶುರುವಾಗಿದೆ. ಆರ್ ಚಂದ್ರು ನಿರ್ಮಿಸುತ್ತಿರುವ 'ಮಳೆ' ಚಿತ್ರದ ಎಲ್ಲಾ ಹಾಡುಗಳು ಯೂಟ್ಯೂಬ್ ನಲ್ಲಿ ಲೀಕ್ ಆಗಿವೆ. ಇನ್ನೊಂದು ವಾರದಲ್ಲಿ ಹಾಸನದಲ್ಲಿ ಅಧಿಕೃತವಾಗಿ ಆಡಿಯೋ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ಅಷ್ಟರಲ್ಲೇ ಎಡವಟ್ಟಾಗಿದೆ. [ಆರ್ ಚಂದ್ರು ಚಿತ್ರದಲ್ಲಿ ಆರಡಿ ಅಂದಗಾರ]
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಚಂದ್ರು, "ಪ್ರತಿಯೊಂದನ್ನೂ ಪ್ಲಾನ್ ಪ್ರಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆವು. ಚಿತ್ರದ ಹಾಡುಗಳನ್ನು ಕೇಳಿದ ಗೆಳೆಯರು ಸೂಪರ್ ಎಂದಿದ್ದರು. ಈ ಬಗ್ಗೆ ಹೆಮ್ಮೆಯೂ ಆಗಿತ್ತು. ಆದರೆ ಈ ರೀತಿ ಆಗಿರುವುದು ನಿಜಕ್ಕೂ ಬೇಸರವಾಗಿದೆ" ಎಂದಿದ್ದಾರೆ ಚಿತ್ರದ ನಿಮಾಪಕ ಆರ್ ಚಂದ್ರು.
ಮಳೆ ಹಾಡುಗಳು ಅಧಿಕೃತವಾಗಿ ರಿಲೀಸ್ ಆಗುತ್ತಾ?
ಈಗ ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಕಾರಣ ವಿಧಿಯಿಲ್ಲದೆ ಆದಷ್ಟು ಬೇಗ ಆಡಿಯೋ ಬಿಡುಗಡೆ ಮಾಡಲಾಗುತ್ತಿದೆಯಂತೆ. ಈ ಮೂಲಕ ಎಲ್ಲಾ ಮಳಿಗೆಗಳಲ್ಲೂ ಮಳೆ ಆಡಿಯೋ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎನ್ನುತ್ತದೆ ಚಿತ್ರತಂಡ.
ಜೆಸ್ಸಿ ಗಿಫ್ಟ್ ಸಂಗೀತದ ಐದು ಹಾಡುಗಳು
ಸ್ಟೈಲಿಶ್ ಸ್ಟಾರ್ ಪ್ರೇಮ್ ಹಾಗೂ ಅಮೂಲ್ಯಾ ಜೋಡಿಯ ಚಿತ್ರ ಇದಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಜೆಸ್ಸಿ ಗಿಫ್ಟ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿವೆ. ಚಿತ್ರ ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಹೊಣೆಯನ್ನು ಆರ್ ಚಂದ್ರು ಅವರೇ ಹೊತ್ತಿದ್ದಾರೆ.
ಆಡಿಯೋ ಬಿಡುಗಡೆ ಸಮಾರಂಭ ಡೌಟು
ಫೆಬ್ರವರಿಯಲ್ಲಿ ಆಡಿಯೋ ಬಿಡುಗಡೆ ಮಾಡಿ ಆ ಬಳಿಕ ಬೇಸಿಗೆ ಸಮಯಕ್ಕೆ 'ಮಳೆ'ಯನ್ನು ಸುರಿಸುವ ಪ್ಲಾನ್ ಹಾಕಿಕೊಂಡಿದ್ದರು ನಿರ್ಮಾಪಕರು. ಆದರೆ ಈಗ ಆಡಿಯೋ ಬಿಡುಗಡೆ ಸಮಾರಂಭ ನಡೆಯುವುದು ಡೌಟು ಎನ್ನುತ್ತವೆ ಮೂಲಗಳು.
ನವಿರಾದ ಪ್ರೇಮಕಥೆಯ ಚಿತ್ರವಿದು
ಇದೊಂದು ಟ್ರಾವೆಲಿಂಗ್ ಸ್ಟೋರಿ. ನವಿರಾದ ಪ್ರೇಮಕಥೆಯನ್ನು ಒಳಗೊಂಡಿದ್ದು ಚಂದ್ರು ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ತೇಜಸ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ತೇಜಸ್ ಆತ್ಮೀಯ ಗೆಳೆಯನಾಗಿರುವ ಕಾರಣ ಅವರ ಹೆಗಲಿಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ ಚಂದ್ರು.
ಚಿತ್ರತಂಡಕ್ಕೆ ಶಾಕ್ ನೀಡಿದ ಲೀಕೇಜ್
ಈ ಚಿತ್ರದಲ್ಲಿ ಮಳೆ ಸಹ ಪ್ರಮುಖ ಪಾತ್ರವಹಿಸುತ್ತದಂತೆ. ಹಾಗಾಗಿ ಶೀರ್ಷಿಕೆ 'ಮಳೆ' ಎಂದು ಇಡಲಾಗಿದೆ. ಸಾಕಷ್ಟು ಸಾರಿ ಚಿತ್ರೀಕರಣಕ್ಕೂ 'ಮಳೆ' ತೊಂದರೆ ಕೊಟ್ಟಿದೆಯಂತೆ. ಈಗ ಹಾಡುಗಳು ಲೀಕ್ ಆಗಿದ್ದು ಚಿತ್ರಕ್ಕೆ ಇನ್ನೊಂದು ದೊಡ್ಡ ಶಾಕ್ ನೀಡಿದಂತಾಗಿದೆ.