ರಾಜ್ಯ ಪ್ರಶಸ್ತಿ 'ಗುರುಕುಲ' ಚಿತ್ರದ ನಿರ್ಮಾಪಕ ಎಚ್ ಕೆ ಶ್ರೀನಿವಾಸ್ ನಿಧನ
ಕನ್ನಡದ ಹಿರಿಯ ನಿರ್ಮಾಪಕ ಎಚ್ ಕೆ ಶ್ರೀನಿವಾಸ್ (ಬೇಕರಿ ಶಿವ) ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 70 ವರ್ಷದ ಶ್ರೀನಿವಾಸ್ ಅವುರ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.
ಶ್ರೀನಿವಾಸ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ನಿರ್ಮಾಪಕನ ನಿಧನಕ್ಕೆ ಚಿತ್ರರಂಗ ಸಂಪಾತ ಸೂಚಿಸಿದೆ.
ಪಟ್ಟಣ್ಣಕ್ಕೆ ಬಂದ ಪುಟ್ಟ, ಗುಂಡನ ಮದುವೆ, ಚಂದನ ಚಿಗುರು, ಮಾಯಾ ಮುಸುಕು, ಕರುನಾಡು, ಅಂತಹ ಚಿತ್ರಗಳನ್ನು ಶ್ರೀನಿವಾಸ್ ಅವರು ನಿರ್ಮಿಸಿದ್ದರು.

ಎಚ್ ಕೆ ಶ್ರೀನಿವಾಸ್ ನಿರ್ಮಿಸಿದ್ದ ಗುರುಕುಲ ಚಿತ್ರಕ್ಕಾಗಿ 'ಅತ್ಯುತ್ತಮ ಮಕ್ಕಳ ಚಿತ್ರ'' ಎಂದು ರಾಜ್ಯ ಪ್ರಶಸ್ತಿ ಸಹ ಲಭಿಸಿತ್ತು.
2020 ದುರಂತ ವರ್ಷ
2020ನೇ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ದುರಂತವಾಗಿದೆ. ಈ ವರ್ಷ ಹಲವು ಹಿರಿಯ ನಿರ್ದೇಶಕ, ನಿರ್ಮಾಪಕ ಹಾಗೂ ತಂತ್ರಜ್ಞರು ಸಾವನ್ನಪ್ಪಿದ್ದಾರೆ. ಹಿರಿಯ ನಟ ರಂಗಭೂಮಿ ಕಲಾವಿದ ಕೃಷ್ಣ ನಾಡಿಗ್ ಅವರು ಅಕ್ಟೋಬರ್ 19 ರಂದು ವಿಧಿವಶರಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ರಾಜನ್ (ರಾಜನ್-ನಾಗೇಂದ್ರ) ಅವರು ಅಕ್ಟೋಬರ್ 11 ರಂದು ನಿಧನರಾಗಿದ್ದರು.


Click it and Unblock the Notifications











