Don't Miss!
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗದ ಗಣ್ಯರು
Recommended Video
ಕಾಯಕ ಯೋಗಿ, ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 11:44 ಕ್ಕೆ ಕೊನೆಯೂಸಿರೆಳೆದಿದ್ದಾರೆ.
ಸಾವಿರಾರೂ ಸಂಖ್ಯೆಯ ಭಕ್ತರನ್ನು ಬಿಟ್ಟು ಶ್ರೀಗಳು ಶಿವನ ಬಳಿ ಹೋಗಿದ್ದಾರೆ. ಶ್ರೀಗಳ ಅಗಲಿಕೆಗೆ ಅವರ ಇಡೀ ಭಕ್ತ ಸಮೂಹ ಕಣ್ಣೀರು ಹಾಕುತ್ತಿದೆ. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಶ್ರೀಗಳ ನಿಧನದ ಸುದ್ದಿ ಕೇಳಿ ದುಃಖದಲ್ಲಿದ್ದಾರೆ.
'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್
ನಟ ದರ್ಶನ್, ಜಗ್ಗೇಶ್, ಗಣೇಶ್, ಸತೀಶ್ ನೀನಾಸಂ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪವನ್ ಒಡೆಯರ್, ಸೇರಿದಂತೆ ಅನೇಕರು ಶ್ರೀಗಳಿಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನಮನ ಸಲ್ಲಿಸಿದ್ದಾರೆ. ಮುಂದೆ ಓದಿ...
|
ಬಹಳ ನೋವಿನ ಸಂಗತಿ
''ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ.''
|
ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ
''ನಿಮ್ಮ ಆತ್ಮ ಶಿವನಲ್ಲಿ ಲೀನವಾಗಲಿ.. ನಿಮ್ಮ ಆಶೀರ್ವಾದ ಪಡೆದ ನಾವು ಧನ್ಯ.. ಓಂ ನಮಃ ಶಿವಾಯಃ..ಓಂ ಶಾಂತಿ..'' - ಜಗ್ಗೇಶ್, ನಟ
ನಾಳೆ ಮಧ್ಯಾಹ್ನ 3 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ: ಎಚ್ಡಿಕೆ
|
ದರ್ಶನ, ಹಿರಿತನ, ತಾಯ್ತನ
''ದರ್ಶನ, ಹಿರಿತನ, ತಾಯ್ತನ, ನಾಯಕತ್ವ, ತತ್ವನಿಷ್ಠೆ, ಧೀಮಂತಿಕೆ, ಶಿಶು ಮುಗ್ಧತೆ, ದೂರದರ್ಶಿತ್ವ ಎಲ್ಲವೂ ಕೂಡಿ ಪಡೆದವು ಅಮರತ್ವ.'' - ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ
|
ತುಂಬ ದುಃಖದ ಸಂಗತಿ
ಇದು ತುಂಬ ದುಃಖದ ಸಂಗತಿ. ನಾವು ಒಂದು ಗೌರವಾನ್ವಿತ, ಮೃದು ಹೃದಯದ ಆತ್ಮವನ್ನು ಕಳೆದುಕೊಂಡಿರುವುದು ವಿಪರ್ಯಾಸ. ಜಾತಿ, ಧರ್ಮದ ಭೇದವಿಲ್ಲದೆ ಬಡ ಮಕ್ಕಳಿಗೆ ವಿದ್ಯೆ ನೀಡಿದ್ದಾರೆ. ಅವರು ಎಂದೆಂದಿಗೂ ನಮ್ಮ ಹೃದಯಲ್ಲಿ ಇರುತ್ತಾರೆ.
|
ಓಂ ಶಾಂತಿ
ಶ್ರೀ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ
|
ಮಹಾನ್ ವ್ಯಕ್ತಿ ನೀವು
''ಬದುಕಿದರೇ ಹೀಗೆ ಸಾರ್ಥಕವೆನ್ನುವಂತೆ ಬದುಕಬೇಕು, ಬದುಕಿಗೊಂದು ಅರ್ಥ ಬರುವಂತೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಅನ್ನ ನೀಡಿದ ಮಹಾನ್ ವ್ಯಕ್ತಿ ನೀವು. ಹೋಗಿ ಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ...'' - ಸತೀಶ್ ನೀನಾಸಂ, ನಟ
|
ಅವರ ಆತ್ಮವು ನಮ್ಮನ್ನೆಲ್ಲ ಆಶೀರ್ವದಿಸಲಿ
''ನೆಡೆದಾಡುವ ದೇವರು..ಚಿರನಿದ್ರೆಗಿಳಿದರು.. ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾಸೋಹ .. ಪರಿಶುದ್ದತೆ ಕಾಯಕ .. ಅವರನ್ನು ದೇವರನ್ನಾಗಿಸಿತು.. ಲಿಂಗೈಕ್ಯರಾದ ಅವರ ಆತ್ಮವು ನಮ್ಮನ್ನೆಲ್ಲ ಆಶೀರ್ವದಿಸಲಿ..'' ಸುನಿ, ನಿರ್ದೇಶಕ