Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಕಾಸುರ' ಚಿತ್ರ ಪ್ರಚಾರಕ್ಕೆ ಹಿಂಗೂ ಪ್ಲಾನ್ ಮಾಡಿದ್ರಾ.?
'ಬಕಾಸುರ'.... 'ಕರ್ವ' ಸಿನಿಮಾದ ನಂತ್ರ ಅದೇ ಚಿತ್ರತಂಡ ಒಟ್ಟಿಗೆ ಸೇರಿ ಮಾಡುತ್ತಿರುವ ಮತ್ತೊಂದು ಸಿನಿಮಾ. ಆರ್.ಜೆ.ರೋಹಿತ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ.
ಚಿತ್ರೀಕರಣ ಮುಗಿಸಿರುವ ನಿರ್ದೇಶಕ ನವನೀತ್, 'ಬಕಾಸುರ' ಸಿನಿಮಾದ ಪ್ರಚಾರಕ್ಕಾಗಿ ಮಾಡಿರುವ ಸಾಹಸ ನೋಡಿದ್ರೆ ಆಶ್ಚರ್ಯ ಪಡ್ತೀರಾ.! ಅರೆ... ಸಿನಿಮಾದ ಪ್ರಮೋಷನ್ ಗಾಗಿ ಈ ರೀತಿಯೂ ಯೋಚನೆ ಮಾಡ್ತಾರಾ ಅಂತ..!
ಕೂಪನ್ ಪಡೆದರೆ ಕಾಲೇಜ್ ಫೀಸ್ ಫ್ರೀ
'ಬಕಾಸುರ' ಸಿನಿಮಾದ ಪ್ರಚಾರ ಕೆಲಸಗಳನ್ನ ಪ್ರಾರಂಭ ಮಾಡಲಾಗಿದೆ. ಸಿನಿಮಾತಂಡ ಹಾಗೂ ನಟ ಆರ್ ಜೆ ರೋಹಿತ್ ರಾಜ್ಯ ಕೆಲವು ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದಾರೆ. ಕಾಲೇಜಿನ ಮಕ್ಕಳಿಗೆ ಚಿತ್ರದ ಕೂಪನ್ ಕೊಟ್ಟು 'ಬಕಾಸುರ' ಸಿನಿಮಾದ ಸ್ಪರ್ಧೆಯನ್ನ ನಡೆಸಲಾಗ್ತಿದೆ.
ಹೇಗಿದೆ ಹೊಸ ಸ್ಪರ್ಧೆ.?
'ಬಕಾಸುರ' ಚಿತ್ರದ ಕೂಪನ್ ಪಡೆದ ಮಕ್ಕಳಿಗೆ ಡಿಫ್ರೆಂಟ್ ಆಗಿರುವ ಸ್ಪರ್ಧೆಯನ್ನ ನಡೆಸಲಾಗುತ್ತೆ. ಇದರಲ್ಲಿ ಗೆಲುವು ಪಡೆದವರ ಕಾಲೇಜಿನ ಶುಲ್ಕವನ್ನ ಚಿತ್ರತಂಡ ಕಟ್ಟಲು ನಿರ್ಧರಿಸಿದೆ. ಪ್ರತಿ ಕಾಲೇಜಿನಿಂದ ಒಂದು ವಿದ್ಯಾರ್ಥಿಯನ್ನ ಆಯ್ಕೆ ಮಾಡುತ್ತಿದೆ 'ಬಕಾಸುರ' ಚಿತ್ರತಂಡ.
ಪ್ರಚಾರದ ಜೊತೆ ಚಿತ್ರದ ಪ್ರಚಾರ
ಒಬ್ಬ ವಿದ್ಯಾರ್ಥಿಯ ಇಪ್ಪತ್ತು ಸಾವಿರ ಶುಲ್ಕವನ್ನ ಸಿನಿಮಾತಂಡ ಪಾವತಿಸಲು ನಿರ್ಧಾರ ಮಾಡಿದ್ದು ಈ ರೀತಿಯಲ್ಲಿ ವಿಭಿನ್ನವಾದ ಪ್ರಚಾರ ಮಾಡಿ ಸಿನಿಮಾದತ್ತ ಪ್ರೇಕ್ಷಕರನ್ನ ಸೆಳೆಯೋದು ನಟ ಆರ್ ಜೆ ರೋಹಿತ್ ಆಲೋಚನೆ.
ಸಿನಿಮಾ ಯಾವಾಗ ತೆರೆಗೆ
ಸದ್ಯ ರಾಜ್ಯದ ಮೂಲೆ ಮೂಲೆಯಲ್ಲಿ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿರುವ ತಂಡ ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನ ಕಾಲೇಜುಗಳಲ್ಲಿ ಸ್ಪರ್ಧೆ ನಡೆಸಲಿದೆ. ಇದರ ಜೊತೆಗೆ ಕೂಪನ್ ಪಡೆದ ವಿದ್ಯಾರ್ಥಿಗಳು ಉಚಿತವಾಗಿ 'ಬಕಾಸುರ' ಸಿನಿಮಾ ವೀಕ್ಷಿಸಬಹುದು. ಕಾಲೇಜುಗಳಿಂದ ಉತ್ತಮ ರೀತಿ ರೆಸ್ಪಾನ್ಸ್ ಸಿಕ್ಕಿದ್ದು ಸಿನಿಮಾ ತಂಡ ಡಿಸೆಂಬರ್ ಅಂತ್ಯಕ್ಕೆ 'ಬಕಾಸುರ' ಚಿತ್ರವನ್ನ ತೆರೆಗೆ ತರಲು ನಿರ್ಧಾರ ಮಾಡಿದೆ.