Don't Miss!
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಶಂಕರ್ ಫಿಲಂ ಫ್ಯಾಕ್ಟರಿ ಕಾರ್ಯಾರಂಭ
*ನಿಮ್ಮ 'ದೇವ್ರಾಣೆ' ಚಿತ್ರದ ಬಗ್ಗೆ ಹೇಳಿ...
'ದೇವ್ರಾಣೆ' ಚಿತ್ರದ ಚಿತ್ರೀಕರಣ ಇತ್ತೀಚಿಗಷ್ಟೇ ಮುಗಿದಿದೆ. ಚಿತ್ರದಲ್ಲಿ ಕಥೆಯೇ ಹೀರೋ. ಈ ಚಿತ್ರದಲ್ಲಿ ಒಟ್ಟೂ 20 ಪ್ರಮುಖ ಪಾತ್ರಗಳಿವೆ. ರವಿಶಂಕರ್ ಗೌಡ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ತಬಲಾ ನಾಣಿ ಹಾಗೂ ರಾಜು ತಾಳಿಕೋಟೆ ಸೇರಿದಂತೆ 20 ಮಂದಿ ಪ್ರಮುಖ ಕಲಾವಿದರಾಗಿ ನಟಿಸಿದ್ದಾರೆ. ಸಾಧುಕೋಕಿಲ ಸಹೋದರ 'ಲಯಕೋಕಿಲ' ಸಂಗೀತ ಚಿತ್ರಕ್ಕಿದೆ. ಎಮ್ ಆರ್ ಸೀನು ಕ್ಯಾಮರಾ ಹಾಗೂ ಆರ್ ಡಿ ರವಿ ಸಂಕಲನವಿದೆ. ಚಿತ್ರಕ್ಕೆ ತಬ್ಲಾ ನಾಣಿ ಸಂಭಾಷಣೆ ಬರೆದಿದ್ದಾರೆ.
*ನಿಮ್ಮ 'ದೇವ್ರಾಣೆ' ಚಿತ್ರದಲ್ಲಿ ಋಷಿ ಕುಮಾರ ಸ್ವಾಮಿಜಿ 'ಐಟಂ' ಹಾಡಿನಲ್ಲಿ ಕುಣಿದಿದ್ದಾರಂತೆ!
ಖಂಡಿತ ಇಲ್ಲ, ನಮ್ಮ 'ದೇವ್ರಾಣೆ' ಚಿತ್ರದಲ್ಲಿ ಋಷಿ ಕುಮಾರ ಸ್ವಾಮಿಜಿ ಐಟಂ ಹಾಡಿನಲ್ಲಿ ದೇವ್ರಾಣೆಗೂ ಕುಣಿದಿಲ್ಲ. ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕೆಂದು ಅಂದು ಅವರು ಸ್ಟುಡಿಯೋಗೆ ಬಂದ ಸಮಯದಲ್ಲಿ ಅಲ್ಲೇ ಪಕ್ಕದಲ್ಲಿ ಹಾಕಲಾಗಿದ್ದ ಸೆಟ್ ಒಂದರಲ್ಲಿ 'ಐಟಂ ಸಾಂಗ್' ಚಿತ್ರೀಕರಣ ನಡೆಯುತ್ತಿತ್ತು. ಅದಾದ ಮೇಲೆ ಅವರ ಪಾತ್ರದ ಶೂಟಿಂಗ್ ಇತ್ತಾದ್ದರಿಂದ ಅವರು ಅಲ್ಲೇ ಪಕ್ಕದಲ್ಲಿ ಕುಳಿತಿದ್ದರು. ಅದರಿಂದ ಹಾಗೆ ಸುದ್ದಿಯಾಗಿರಬಹುದು ಅಷ್ಟೇ!.
*'ದೇವ್ರಾಣೆ' ಚಿತ್ರದ ಬಿಡುಗಡೆ ಯಾವಾಗ?
'ದೇವ್ರಾಣೆ' ಚಿತ್ರೀಕರಣ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತದಲ್ಲಿದೆ. ಇನ್ನೇನು ಸದ್ಯದಲ್ಲೇ ಆಡಿಯೋ ಬಿಡುಗಡೆ ನಡೆಯಲಿದ್ದು ಶೀಘ್ರವೇ ಚಿತ್ರ ಸೆನ್ಸಾರ್ ಆಗಲಿದೆ. ದಸರಾಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಅಂದುಕೊಂಡಂತೆ ನಡೆದರೆ 'ದೇವ್ರಾಣೆ' ಚಿತ್ರವನ್ನು ದಸರಾ ಹಬ್ಬದ ವೇಳೆ ಪ್ರೇಕ್ಷಕರ ಮುಂದೆ ತರಲಿದ್ದೇವೆ.
*ಸದ್ಯಕ್ಕೆ ನಿಮ್ಮ ಮುಂದಿರುವ ಪ್ರಾಜೆಕ್ಟ್ ಗಳು?
ಸಾಧುಕೋಕಿಲ ನಿರ್ದೇಶನ ಹಾಗೂ ಶ್ರೀನಗರ ಕಿಟ್ಟಿ ಅಭಿನಯದ 'ಅನಾರ್ಕಲಿ' ಚಿತ್ರಕ್ಕೆ ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಈ ಚಿತ್ರವನ್ನು ನಿರ್ಮಾಪಕ ಹಾಗೂ ವಿತರಕ ಸಮರ್ಥ್ ವೆಂಚರ್ಸ್ ನ ಪ್ರಸಾದ್ ಅವರು ನಿರ್ಮಿಸುತ್ತಿದ್ದಾರೆ. ನನ್ನ ನಿರ್ದೇಶನದಲ್ಲಿ ಮೂಡಿಬರಲಿರುವ ಇನ್ನೊಂದು ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಮುಂದಿನ ಪುಟ ನೋಡಿ...