Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರೈತ, ಯೋಧ, ವಿದ್ಯಾರ್ಥಿ'ಯಿಂದ 'ಧೈರ್ಯಂ' ಆಡಿಯೋ ಬಿಡುಗಡೆ
ಕೃಷ್ಣ ಅಜಯ್ ರಾವ್ ನಟನೆಯ 'ಧೈರ್ಯಂ' ಸಿನಿಮಾದ ಆಡಿಯೋ ಇಂದು (ಮೇ 27) ಬಿಡುಗಡೆಯಾಗಿದೆ. ಸಮಾಜದ ಮೂರು ಜನ ವಿಶೇಷ ವ್ಯಕ್ತಿಗಳು ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಿದ್ದು, ತುಂಬಾ ವಿಶೇಷವಾಗಿತ್ತು.[ವಿಧಾನಸೌಧ ಮುಂದೆ 'ಧೈರ್ಯಂ' ಆಡಿಯೋ ಬಿಡುಗಡೆ ಮಾಡುವವರು ಯಾರು.?]
ವಿಧಾನ ಸೌಧ ಮುಂದೆ 'ರೈತ, ಯೋಧ ಹಾಗೂ ವಿದ್ಯಾರ್ಥಿ'ಯಿಂದ 'ಧೈರ್ಯಂ' ಚಿತ್ರದ ಆಡಿಯೋ ಅನಾವರಣ ಆಯಿತು. ಯೋಧ ಗುರುಪ್ರಸಾದ್, ರೈತ ಗೋಪಾಲ್ ಗೌಡ, ವಿದ್ಯಾರ್ಥಿ ಲಿಖಿತ್ ರಾಜ್ ಮೂವರು 'ಧೈರ್ಯಂ' ಆಡಿಯೋವನ್ನ ರಿಲೀಸ್ ಮಾಡಿದರು. ಈ ವೇಳೆ ಚಿತ್ರದ ನಾಯಕಿ ಅಧಿತಿ ಮತ್ತು ನಟ ಅಜಯ್ ರಾವ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.[ವಿಧಾನ ಸೌಧ ಮುಂದೆ ನಾಳೆ 'ಧೈರ್ಯಂ' ಹಾಡುಗಳ ಅದ್ಧೂರಿ ಅನಾವರಣ]
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ''ಜಿಂಕೆಮರಿ' ಖ್ಯಾತಿಯ ಎಮಿಲ್ ಸಂಗೀತ ನೀಡಿದ್ದಾರೆ. ವಿಜಯ ಪ್ರಕಾಶ್ ಒಂದು ಹಾಡನ್ನ ಹಾಡಿರುವುದು ಮತ್ತೊಂದು ವಿಶೇಷ. ಆನಂದ್ ರಾಮ್ ಮತ್ತು ಶಿವತೇಜಸ್ ಸಾಹಿತ್ಯ ಬರೆದಿದ್ದಾರೆ.[ಆಡಿಯೋ ಬಿಡುಗಡೆ ಸಜ್ಜಾದ ಅಜಯ್ ರಾವ್ 'ಧೈರ್ಯಂ']
'ಮಳೆ' ಸಿನಿಮಾವನ್ನ ನಿರ್ದೇಶನ ಮಾಡಿದ್ದ ಶಿವ ತೇಜಸ್ 'ಧೈರ್ಯಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಿ.ಕೆ ರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಫ್ಯಾಮಿಲಿ ಡ್ರಾಮಾದ ಜೊತೆಗೆ ಲವ್, ಆಕ್ಷನ್, ಸೆಂಟಿಮೆಂಟ್ ಹೀಗೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆಯಂತೆ.