Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟ್ರೈಲರ್: ಸ್ಯಾಂಡಲ್ ವುಡ್ ನಲ್ಲಿ ಹಾರಲು ಆರಂಭಿಸಿದ 'ಗರುಡ'
'ಸಿಪಾಯಿ' ನಂತರ ಸಿದ್ಧಾರ್ಥ್ ಮಹೇಶ್ 'ಗರುಡ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಈಗಷ್ಟೇ ಗರುಡ ಟ್ರೈಲರ್ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಸದ್ದು ಆರಂಭಿಸಿದೆ.
ಟೆರರಿಸಂ, ಅಂಡರ್ ವರ್ಲ್ಟ್ ಸುತ್ತ ನಡೆಯುವ ಈ ಕಥೆ ಬಹಳ ರೋಚಕವಾಗಿರಲಿದೆ ಎಂದು ಭರವಸೆ ಟ್ರೈಲರ್ ನೋಡಿದ್ಮೇಲೆ ಹುಟ್ಟಿಕೊಂಡಿದೆ. ಆದರೆ, ಇದಕ್ಕೂ ಮೀರಿ ಚಿತ್ರದಲ್ಲಿ ಬೇರೆ ಏನೋ ಸ್ಪೆಷಲ್ ಅಂಶಗಳು ಇದೆ ಎನ್ನುವುದರಲ್ಲಿ ಕುತೂಹಲವಿದೆ.
ಅದಕ್ಕೆ ತಕ್ಕಂತೆ ಸಿದ್ಧಾರ್ಥ್ ಮತ್ತು ಶ್ರೀನಗರ ಕಿಟ್ಟಿ ಜುಗಲ್ ಬಂಧಿ ಕಾಣುತ್ತಿದೆ. ಹೌದು, ಸಿದ್ಧಾರ್ಥ್ ಜೊತೆಯಲ್ಲಿ ಶ್ರೀನಗರ ಕಿಟ್ಟಿ ಕೂಡ ತೆರೆಹಂಚಿಕೊಂಡಿದ್ದ, ಪೊಲೀಸ್ ಕಾಪ್ ಆಗಿ ಮಿಂಚಿದ್ದಾರೆ.
ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ಗುಪ್ತಚರ ಅಧಿಕಾರಿ
ಸಿದ್ಧಾರ್ಥ್ ಗೆ ಜೊಡಿಯಾಗಿ ಆಶಿಕಾ ರಂಗನಾಥ್ ಮತ್ತು ಐಂದ್ರಿತಾ ರೇ ಇಬ್ಬರು ನಟಿಸಿದ್ದಾರೆ. ನೃತ್ಯ ಸಂಯೋಜಕ ಧನುಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಆರೇಂಜ್ ಫಿಕ್ಸಲ್ ಫಿಲಂ ಫ್ಯಾಕ್ಟರಿ ಬ್ಯಾನರ್ ನಲ್ಲಿ ರಾಜರೆಡ್ಡಿ, ಕಿಶೋರ್ ಎ, ಪ್ರಸಾದ್ ರೆಡ್ಡಿ ನಿರ್ಮಿಸಿದ್ದಾರೆ. ವಿಶೇಷ ಅಂದ್ರೆ ಗರುಡ ಚಿತ್ರಕ್ಕೆ ನಾಯಕನಟ ಸಿದ್ಧಾರ್ಥ್ ಮಹೇಶ್ ಅವರು ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ.
ಇನ್ನುಳಿದಂತೆ ರಾಜೇಶ್ ನಟರಂಗ, ರವಿಶಂಕರ್ ಗೌಡ, ರಘು ದೀಕ್ಷೀತ್, ಆದಿ ಲೋಕೇಶ್, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಬಳಗ ಹೊಂದಿದೆ. ಜೈ ಆನಂದ್ ಅವರ ಛಾಯಾಗ್ರಹಣ, ರಘುದೀಕ್ಷಿತ್ ಅವರ ಸಂಗೀತವಿದೆ. ಸದ್ಯ ಟ್ರೈಲರ್ ಮೂಲಕ ಗಾಂಧಿನಗರದಲ್ಲಿ ಹಾರಾಡುತ್ತಿರುವ ಗರುಡ ಸದ್ಯದಲ್ಲೇ ಚಿತ್ರಮಂದಿರಲ್ಲಿ ಲ್ಯಾಂಡ್ ಆಗಲಿದೆ.