Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಗಭೂಮಿ ಕಲಾವಿದರ ಧೈರ್ಯ ಮತ್ತು ಕಥೆಯೇ 'ಗಿಣಿ'ಯ ಶಕ್ತಿ
'ಗಿಣಿ ಹೇಳಿದ ಕಥೆ' ಸಿನಿಮಾ ಇದೇ ವಾರ ಅಂದ್ರೆ ಜನವರಿ 11 ರಂದು ರಾಜ್ಯಾದ್ಯಂತೆ ತೆರೆಕಾಣುತ್ತಿದೆ. ಯಾವುದೇ ದೊಡ್ಡ ಸ್ಟಾರ್ ನಟ, ನಿರ್ದೇಶಕ, ನಟಿ ಎನ್ನವ ಸೂತ್ರವಿಲ್ಲದೇ ಎಲ್ಲ ಹೊಸ ಕಲಾವಿದರೇ ಸೇರಿ ಮಾಡಿರುವುದು ಚಿತ್ರ ಎನ್ನುವುದೇ ಇದರ ಹೈಲೈಟ್.
ಹೊಸಬರ ಸಿನಿಮಾ ಅಂದಾಕ್ಷಣ ಏನ್ ಸ್ಪೆಷಲ್ ಎಂಬ ಪ್ರಶ್ನೆ ಬರೋದು ಸಹಜ. ಇತರೆ ಸಿನಿಮಾಗಳಿಂತ ಇದು ಡಿಫ್ರೆಂಟ್, ಆಗಿದೆ, ಹೀಗಿದೆ, ಸೂಪರ್, ಅದ್ಭುತ ಎಂಬ ಬಿಲ್ಡಪ್ ಈ ಚಿತ್ರಕ್ಕೆ ಬೇಡ. ಯಾಕಂದ್ರೆ, ಈ ಚಿತ್ರದಲ್ಲೊಂದು ಕಥೆಯಿದೆ. ಈ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಕಥೆಯೇ ಚಿತ್ರದ ಶಕ್ತಿ. ನೋಡುಗರಿಗೆ ಖುಷಿ ಕೊಡುತ್ತೆ ಎಂಬುದೇ ಚಿತ್ರತಂಡದ ಧೈರ್ಯ.
'ಗಿಣಿ ಹೇಳಿದ ಕಥೆ'ಯನ್ನ ನೀವು ಈ ವಾರ ನೋಡಬಹುದು
ಈ ಧೈರ್ಯಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ ನಟ-ನಿರ್ಮಾಪಕ ದೇವ್ ರಂಗಭೂಮಿ. ನಟನೆ, ನಿರ್ಮಾಣದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆ ಕೂಡ ಅವರದ್ದೇ. ನಾಯಕಿ ಮತ್ತು ಇನ್ನೆರಡು ಪಾತ್ರವನ್ನ ಬಿಟ್ಟು ಇಡೀ ಸಿನಿಮಾದಲ್ಲಿ ಶೇಕಡಾ 99 ರಷ್ಟು ಕಲಾವಿದರು ರಂಗಭೂಮಿ ಹಿನ್ನಲೆ ಉಳ್ಳವರು. ಇದು ಈ ಚಿತ್ರದ ವಿಶೇಷತೆಗಳಲ್ಲಿ ಒಂದು ಹಾಗೂ ಅವರ ಧೈರ್ಯವಾಗಿದೆ.
ಬೆಂಗಳೂರಿನಿಂದ ಮಡಿಕೇರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಚಾಲಕ ಮತ್ತು ಪ್ಯಾಸೆಂಜರ್ ನಡುವೆ ನಡೆಯುವ ಕಥೆ. ಈ ಕಥೆಯಲ್ಲಿ ಲವ್ ಇದೆ, ಆಕ್ಷನ್ ಇದೆ, ಸೆಂಟಿ ಮೆಂಟ್ ಇದೆ, ಕಾಮಿಡಿ ಇದೆ, ಭರ್ಜರಿ ಡೈಲಾಗ್ಸ್ ಇದೆ. ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಎಲಿಮೆಂಟ್ಸ್ ಇಟ್ಟು ಗಿಣಿ ಹೇಳಿದ ಕಥೆಯಾಗಿದೆ.
ಗೀತಾಂಜಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶಿಕ್ಷಕಿ ಪಾತ್ರದಲ್ಲಿ ಪಡ್ಡೆ ಹೈಕ್ಳ ದಿಲ್ ಕದಿಯಲು ಸಜ್ಜಾಗಿದ್ದಾರೆ. ಮಾಲತೇಶ್, ನೀತುರಾಯ್, ಹಾವೇರಿ ಶ್ರೀಧರ್, ಮಹಂತೇಶ್, ಮುಂತಾದವರಿದ್ದಾರೆ. ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡಿರೋದು ನಾಗರಾಜ್ ಉಪ್ಪುಂದ. ನಿರ್ದೇಶನದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯೂ ಇವರದ್ದೇ. ಹಿತನ್ ಹಾಸನ್ ಅವರು ಸಂಗೀತ ನೀಡಿದ್ದಾರೆ.