Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹೀಗೊಂದು ದಿನ' ಮುಂದೋಗಿದೆ: 'ಬದುಕೇ ಅಚ್ಚರಿ' ಹಾಡು ಮೋಡಿ ಮಾಡಿದೆ.!
ಎಲ್ಲ ಅಂದುಕೊಂಡಂತೆ ಆಗಿದ್ದರೇ ವಿಶ್ವ ಮಹಿಳಾ ದಿನದ ವಿಶೇಷವಾಗಿ 'ಹೀಗೊಂದು ದಿನ' ಸಿನಿಮಾ ಈ ವಾರ ಬಿಡುಗಡೆಯಾಗಬೇಕಿತ್ತು. ಯಾಕಂದ್ರೆ ಇದು ಮಹಿಳಾ ಪ್ರಧಾನ ಸಿನಿಮಾ. ಅದೇ ದಿನ ರಿಲೀಸ್ ಮಾಡಬೇಕೆಂದು ಚಿತ್ರದ ನಿರ್ಮಾಪಕರು ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಸಿನಿಮಾ ತಯಾರಿಸಿದ್ದರು.
ದುರಾದೃಷ್ಟವಶಾತ್ ಮಾರ್ಚ್ 9ಕ್ಕೆ ಈ ಸಿನಿಮಾ ಬರ್ತಿಲ್ಲ. ಹೀಗಾಗಿ, ಪ್ರೇಕ್ಷಕರಂತೆ ಚಿತ್ರತಂಡವೂ ನಿರಾಸೆಯಾಗಿದೆ. ಸದ್ಯಕ್ಕೆ 'ಹೀಗೊಂದು ದಿನ' ಚಿತ್ರದ ಬಿಡುಗಡೆಯ ದಿನಾಂಕವನ್ನ ಮುಂದೂಡಲಾಗಿದೆ. ಸದ್ಯದಲ್ಲೇ ಹೊಸ ಬಿಡುಗಡೆ ದಿನಾಂಕವನ್ನ ಚಿತ್ರತಂಡ ಘೋಷಿಸಲಿದೆ.
ಸಿನಿಮಾ ತೆರೆಕಂಡಿಲ್ಲ ಎಂದು ನಿರಾಸೆಯಾಗಿರುವ ಅಭಿಮಾನಿಗಳಿಗಾಗಿ ಚಿತ್ರದ 'ಬದುಕೇ ಅಚ್ಚರಿ' ಎಂಬ ಹಾಡನ್ನ ಬಿಡುಗಡೆ ಮಾಡಿದೆ. ರಾಮಕೃಷ್ಣ ರಣಗಟ್ಟಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಅಭಿಲಾಷ್ ಗುಪ್ತಾ ಸಂಗೀತ ನೀಡಿ ಸ್ವತಃ ಹಾಡಿದ್ದಾರೆ. ಈ ರೊಮ್ಯಾಂಟಿಕ್ ಹಾಡು ಈಗ ಮೋಡಿ ಮಾಡುತ್ತಿದೆ.
ಸಿನಿಮಾ
ಮುಂದೂಡಲು
ಕಾರಣ
''ಚಲನಚಿತ್ರ
ಮಂಡಳಿಯಿಂದ
9
ರಂದು
ಯಾವುದೇ
ಹೊಸ
ಸಿನಿಮಾಗಳು
ಬಿಡುಗಡೆ
ಮಾಡಬಾರದೆಂದು
ಆಗ್ರಹಿಸಿದೆ.
ಸ್ಯಾಟಲೈಟ್
ಮೂಲಕ
ಸಿನಿಮಾ
ಬಿಡುಗಡೆ
ಮಾಡುವ
ಕಂಪನಿಗಳ
ವಿರುಧ್ದ
ಚಲನಚಿತ್ರ
ಮಂಡಳಿಯು
ಪ್ರತಿಭಟನೆ
ಮಾಡುತ್ತಿದೆ.
ಸ್ಯಾಟಲೈಟ್
ಕಂಪನಿಗಳ
ದುಬಾರಿ
ಶುಲ್ಕದ
ಬಗ್ಗೆ
ನಿರ್ಮಾಪಕರಿಗೆ
ಅನುಕೂಲವಾಗಲು
ಈ
ಪ್ರತಿಭಟನೆ
ಮಾಡಲಾಗುತ್ತಿದೆ.
ಆದ್ದರಿಂದ
ಸಿನಿಮಾ
ಮುಂದೂಡಲಾಗಿದೆ.
ಅದನ್ನ ಹೊರತುಪಡಿಸಿದರೇ, ಚಿತ್ರದ ಮೇಲೆ ಭರವಸೆ ಹೆಚ್ಚಿದೆ. ಇದೊಂದು ಅನ್ಕಟ್ ಮಾದರಿಯ ಚಿತ್ರವಾಗಿದ್ದು, ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ. ಸಿಂಧು ಲೋಕನಾಥ್ ಮುಖ್ಯ ಪಾತ್ರ ನಿರ್ವಹಿಸಿದ್ದರೇ, 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ'ಯ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್, ಮಿತ್ರ, ಗಿರಿ, ಬಾಲಾಜಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಕ್ರಮ್ ಯೋಗಾನಂದ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದು, ವಿಕಾಸ್ ಕಥೆಯನ್ನು ಹೆಣೆದಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಬಂಡವಾಳ ಹೂಡಿದ್ದು, ಅಭಿಲಾಷ್ ಗುಪ್ತಾ ಸಂಗೀತ ಸಂಯೋಜನೆ ಮಾಡಿದ್ದಾರೆ.