Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೂವಿಲ್ಯಾಂಡ್ ನಲ್ಲಿ ಸರಸಕೆ ಬಾರೇ ಸರಳ ಕ್ಯಾನ್ಸಲ್
"ಸರಸಕೆ ಬಾರೇ ಸರಳ, ಸನಿಹಕೆ ಬಾರೇ ಸರಳ, ನಿನ್ನ ಬ್ಯೂಟಿ ಅತಿ ವಿರಳ...ಆ ಲುಕ್ಕು ಕಾಡಿತು ಬಹಳ..." ಎಂಬ ಹಾಡನ್ನು ಮನಸ್ಸಿನಲ್ಲೇ ನೆನೆಪಿಸಿಕೊಂಡು 'ಕರೋಡ್ ಪತಿ' ಚಿತ್ರ ನೋಡಲು ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಮೂವಿಲ್ಯಾಂಡ್ ಗೆ ಬಂದ ಪ್ರೇಕ್ಷಕರಿಗೆ ಶುಕ್ರವಾರ (ಮಾ.14) ಬಹಳ ನಿರಾಸೆ ಕಾದಿತ್ತು. ಏಕೆಂದರೆ 10.20 ಆದರೂ ಟಿಕೆಟ್ ಕೊಡಲಿಲ್ಲ.
ಬೆಳಗಿನ ಆಟ 10.30ಕ್ಕೆ ಶುರುವಾಗುತ್ತಿದ್ದರೂ ಇನ್ನೂ ಟಿಕೆಟ್ ಕೊಡುತ್ತಿಲ್ಲವಲ್ಲಾ ಎಂದು ಚಿತ್ರಪ್ರೇಮಿಗಳು ಚಡಪಡಿಸುತ್ತಿದ್ದರು. ಏನಾಗುತ್ತಿದೆ ಎಂದು ವಿಚಾರಿಸಿದರೆ "ಏನೋ ಒಂಚೂರು ಪ್ರಾಬ್ಲಂ ಆಗಿದೆ, ಅರ್ಧಗಂಟೆಯಲ್ಲಿ ಸರಿಹೋಗುತ್ತೆ" ಎಂಬ ಉತ್ತರ ಬಂತು. [ಸಾಫ್ಟ್ ವೇರು ಹಾರ್ಡ್ ವೇರು ನಿದ್ದೆಗೆಡಿಸಿರುವ ಸರಳಾ!]
ಕಡೆಗೆ 11.30 ಆದರೂ ಟಿಕೆಟ್ ಗಳನ್ನು ವಿತರಿಸಲಿಲ್ಲ. ಅಷ್ಟೊತ್ತಿಗೆ ಕನ್ನಡ ಚಿತ್ರರಸಿಕರ ಆಕ್ರೋಶ ಕಟ್ಟೆಯೊಡೆಯಿತು. ಇನ್ನೇನು ಅವರು ರೊಚ್ಚಿಗೇಳುತ್ತಾರೆ ಎಂಬ ಹೊತ್ತಿಗೆ ಥಿಯೇಟರ್ ಆಡಳಿತ ಮಂಡಳಿ ಮಾರ್ನಿಂಗ್ ಶೋ ಕ್ಯಾನ್ಸಲ್ ಎಂದು ಪ್ರಕಟಿಸಿತು. ಇಷ್ಟಕ್ಕೂ ಅಲ್ಲೇನಾಯಿತು?
ಕರೋಡ್ ಪತಿಗೆ ತಾಂತ್ರಿಕ ಸಮಸ್ಯೆ ಶಾಕ್
ಸಾಮಾನ್ಯವಾಗಿ ಮೂವಿಲ್ಯಾಂಡ್ ಥಿಯೇಟರ್ ನಲ್ಲಿ ಹೆಚ್ಚಾಗಿ ತೆರೆಕಾಣುವುದು ತೆಲುಗಿನ ಭಾರಿ ಬಜೆಟ್ ಚಿತ್ರಗಳು. 'ಕರೋಡ್ ಪತಿ'ಯಂತಹ ಮೀಡಿಯಂ ಬಜೆಟ್ ಚಿತ್ರಗಳು ಅಪರೂಪಕ್ಕೆ ತೆರೆಕಾಣುತ್ತವೆ. ಈ ರೀತಿಯ ಘಟನೆಗಳೂ ಅಪರೂಪಕ್ಕೆ ನಡೆಯುತ್ತವೆ.
ತಾಂತ್ರಿಕ ಸಮಸ್ಯೆ ಎಂದ ಆಡಳಿತ ವರ್ಗ
ಇಷ್ಟಕ್ಕೂ ಮಾರ್ನಿಂಗ್ ಶೋ ಕ್ಯಾನ್ಸಲ್ ಆಗಲು ಸೂಕ್ತ ಕಾರಣ ಏನು ಎಂಬುದು ಗೊತ್ತಾಗಲಿಲ್ಲ. ಆದರೂ ಥಿಯೇಟರ್ ಆಡಳಿತ ವರ್ಗ ತಾಂತ್ರಿಕ ದೋಷದಿಂದ ಶೋ ಕ್ಯಾನ್ಸಲ್ ಮಾಡಲಾಗಿದೆ. ಯಾವುದೇ ಥಿಯೇಟರ್ ನಲ್ಲೂ ಮಾರ್ನಿಂಗ್ ಶೋ ಇಲ್ಲ ಎಂಬ ವಿವರಣೆ ನೀಡಿತು.
ಸಹನೆ ಕಳೆದುಕೊಂಡ ಪ್ರೇಕ್ಷಕರು
ಆದರೆ ಟಿಕೆಟ್ ವಿತರಿಸದೆ ಇದ್ದ ಕಾರಣ ಪ್ರೇಕ್ಷಕರು ಕೊಂಚ ಸಮಾಧಾನದಿಂದಲೇ ಇದ್ದರು. ತೆಲುಗು ಚಿತ್ರಗಳನ್ನು ಬಿಡುಗಡೆ ಮಾಡಬೇಕಾದರೆ ಆಗದ ತಾಂತ್ರಿಕ ಸಮಸ್ಯೆ ಕನ್ನಡ ಚಿತ್ರಕ್ಕೆ ಯಾಕಾಯಿತು. ಕನ್ನಡ ಚಿತ್ರಗಳು ಯಾಕೆ ಓಡಲ್ಲ ಎಂದರೆ ಈ ತರಹ ಕೆಲಸ ಮಾಡ್ತೀರಾ ಅದಕ್ಕೆ ಎಂದು ಪ್ರೇಕ್ಷಕರು ತಮ್ಮ ಸಿಟ್ಟನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಟ್ಟ ವಿವರಣೆ
ತೆಲುಗು ಚಿತ್ರ ಆದರೆ ಬೆಳಗ್ಗೆ 6 ಗಂಟೆಗೆ ಶೋ ಶುರು ಮಾಡ್ತೀರಾ. ಕನ್ನಡ ಚಿತ್ರಗಳಿಗೇಕೆ ಈ ರೀತಿ ಅನ್ಯಾಯ ಎಂದು ಕೆಲವರು ಪ್ರಶ್ನಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಾಂತ್ರಿಕ ಸಮಸ್ಯೆಯಿಂದ ಶೋ ಕ್ಯಾನ್ಸಲ್ ಮಾಡಲಾಗಿದೆ. ಮಧ್ಯಾಹ್ನದ ಆಟದಿಂದ ಶೋ ಆರಂಭವಾಗಲಿದೆ. ದಯವಿಟ್ಟು ಎಲ್ಲರೂ ಇಲ್ಲಿಂದ ಜಾಗ ಖಾಲಿ ಮಾಡಿ ಎಂದರು.
ನಿಜಕ್ಕೂ ತಾಂತ್ರಿಕ ದೋಷವೇ ಅಥವಾ ಗಿಮ್ಮಿಕ್ಕಾ
ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಪ್ರೇಕ್ಷಕರು ಅಲ್ಲಿಂದ ಜಾಗ ಖಾಲಿ ಮಾಡಿದರು. ಕೊನೆಗೂ ಕಾಡಿದ ಪ್ರಶ್ನೆ ಎಂದರೆ ಇದು ತಾಂತ್ರಿಕ ಸಮಸ್ಯೆಯ ಕಾರಣ ಹೀಗಾಯಿತಾ ಅಥವಾ ಇದೂ ಒಂದು ಗಿಮ್ಮಿಕ್ಕಾ ಎಂಬ ಡೌಟು ಪ್ರೇಕ್ಷಕರನ್ನು 'ಹೀಗೂ ಉಂಟೇ' ತರಹ ಕಾಡುತ್ತಿತ್ತು.