Don't Miss!
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸಬರ, ಹೊಸತರಹದ ಚಿತ್ರ 'ಕೋಟೆ ಹೈದ'
ಕೋಟೆ ನಾಡು ಎಂದೇ ಪ್ರಸಿದ್ಧವಾದ ಚಿತ್ರದುರ್ಗದಲ್ಲಿ ಬಾಳಿ ಬದುಕಿದ ಅನೇಕ ವೀರ-ಶೂರರ ಕಾಲ್ಪನಿಕ ಹಾಗೂ ನೈಜ ಕಥೆಗಳನ್ನಾಧರಿಸಿ ಈಗಾಗಲೇ ಹಲವಾರು ಚಲನಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಬಂದು ಹೋಗಿವೆ. ಅದೇ ರೀತಿ ಇದೀಗ ಮತ್ತೊಂದು ಸಿನಿಮಾ ಸದ್ದಿಲ್ಲದಂತೆ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತೊಡಗಿಕೊಂಡಿದೆ.
ಹಿರಿಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಕೆ.ಎಸ್.ಸತ್ಯನಾರಾಯಣ, ತಿಪಟೂರು ರಘು, ಎ.ಟಿ.ರಘು ಮೊದಲಾದ ದಿಗ್ಗಜರ ಬಳಿ ಕೆಲಸ ಮಾಡಿದ ಎ.ಎಸ್.ರತ್ನಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು "ಕೋಟೆ ಹೈದ" ಟೈಟಲ್ ಕೇಳಿದರೆ ಇದೊಂದು ಐತಿಹಾಸಿಕ ಚಿತ್ರ ಎನ್ನುವ ಆಲೋಚನೆ ಬರುವುದು ಸಹಜ.
ಕೋಟೆ ಮಾರಮ್ಮ ಮೂವೀ ಮೇಕರ್ಸ್ ಲಾಂಛನದಲ್ಲಿ ಎನ್.ಮಂಜುಳಾ ರಾಮಯ್ಯ, ಸುರೇಶ್ ನಿರ್ಮಲ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಧನಶೀಲ ಸಂಗೀತ, ಎಸ್.ಮಂಜು (ಸೋಮು) ಕಥೆ, ಚಿತ್ರಕಥೆ, ಸಂಭಾಷಣೆ ಕೌರವ ವೆಂಕಟೇಶ್ ಸಾಹಸ, ಅಂಜಿರೆಡ್ಡಿ ಸಂಕಲನ, ಬಿ.ಜಿ.ರವಿ ನಿರ್ಮಾಣ ನಿರ್ವಹಣೆ, ಕೃಷ್ಣೋಜಿರಾವ್ ಸಹ ನಿರ್ದೇಶನವಿದೆ. ಸೂರ್ಯ, ಶಿಲ್ಪಾ, ಸಂದ್ಯಾ, ಪುಷ್ಪ, ರಂಜುಶ್ರೀ, ಹೊನ್ನವಳ್ಳಿಕೃಷ್ಣ, ಬೀರಾದಾರ್, ವೆಂಕಟೇಶ್, ಕುರಿರಂಗ, ಸಿತಾರಾ, ರಮ್ಯ, ಸುಜಾತ, ನಾಗವರ್ಧನ್, ಸತೀಶ್, ರಾಮಣ್ಣ ಇನ್ನು ಮೊದಲಾದ ತಾರಾಗಣವಿದೆ. (ಫಿಲ್ಮಿಬೀಟ್ ಕನ್ನಡ)