Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸಬರ, ಹೊಸತರಹದ ಚಿತ್ರ 'ಕೋಟೆ ಹೈದ'
ಕೋಟೆ ನಾಡು ಎಂದೇ ಪ್ರಸಿದ್ಧವಾದ ಚಿತ್ರದುರ್ಗದಲ್ಲಿ ಬಾಳಿ ಬದುಕಿದ ಅನೇಕ ವೀರ-ಶೂರರ ಕಾಲ್ಪನಿಕ ಹಾಗೂ ನೈಜ ಕಥೆಗಳನ್ನಾಧರಿಸಿ ಈಗಾಗಲೇ ಹಲವಾರು ಚಲನಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಬಂದು ಹೋಗಿವೆ. ಅದೇ ರೀತಿ ಇದೀಗ ಮತ್ತೊಂದು ಸಿನಿಮಾ ಸದ್ದಿಲ್ಲದಂತೆ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತೊಡಗಿಕೊಂಡಿದೆ.
ಹಿರಿಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಕೆ.ಎಸ್.ಸತ್ಯನಾರಾಯಣ, ತಿಪಟೂರು ರಘು, ಎ.ಟಿ.ರಘು ಮೊದಲಾದ ದಿಗ್ಗಜರ ಬಳಿ ಕೆಲಸ ಮಾಡಿದ ಎ.ಎಸ್.ರತ್ನಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು "ಕೋಟೆ ಹೈದ" ಟೈಟಲ್ ಕೇಳಿದರೆ ಇದೊಂದು ಐತಿಹಾಸಿಕ ಚಿತ್ರ ಎನ್ನುವ ಆಲೋಚನೆ ಬರುವುದು ಸಹಜ.
ಕೋಟೆ ಮಾರಮ್ಮ ಮೂವೀ ಮೇಕರ್ಸ್ ಲಾಂಛನದಲ್ಲಿ ಎನ್.ಮಂಜುಳಾ ರಾಮಯ್ಯ, ಸುರೇಶ್ ನಿರ್ಮಲ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಧನಶೀಲ ಸಂಗೀತ, ಎಸ್.ಮಂಜು (ಸೋಮು) ಕಥೆ, ಚಿತ್ರಕಥೆ, ಸಂಭಾಷಣೆ ಕೌರವ ವೆಂಕಟೇಶ್ ಸಾಹಸ, ಅಂಜಿರೆಡ್ಡಿ ಸಂಕಲನ, ಬಿ.ಜಿ.ರವಿ ನಿರ್ಮಾಣ ನಿರ್ವಹಣೆ, ಕೃಷ್ಣೋಜಿರಾವ್ ಸಹ ನಿರ್ದೇಶನವಿದೆ. ಸೂರ್ಯ, ಶಿಲ್ಪಾ, ಸಂದ್ಯಾ, ಪುಷ್ಪ, ರಂಜುಶ್ರೀ, ಹೊನ್ನವಳ್ಳಿಕೃಷ್ಣ, ಬೀರಾದಾರ್, ವೆಂಕಟೇಶ್, ಕುರಿರಂಗ, ಸಿತಾರಾ, ರಮ್ಯ, ಸುಜಾತ, ನಾಗವರ್ಧನ್, ಸತೀಶ್, ರಾಮಣ್ಣ ಇನ್ನು ಮೊದಲಾದ ತಾರಾಗಣವಿದೆ. (ಫಿಲ್ಮಿಬೀಟ್ ಕನ್ನಡ)