Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳು
'ವರ್ಲ್ಡ್ ಕಪ್' ಫೀವರ್ ಮುಗೀತು. ಈಗ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಈ ವಾರ ಬೆಳ್ಳಿತೆರೆಗೆ ಅಪ್ಪಳಿಸುತ್ತಿರುವ ಚಿತ್ರಗಳು 'ಮೆಲೋಡಿ' ಮತ್ತು 'ಮಳೆ ನಿಲ್ಲುವವರೆಗೆ'. ಒಂದು ಲವ್ ಸ್ಟೋರಿ ಮತ್ತೊಂದು ಹಾರರ್ ಕಮ್ ಥ್ರಿಲ್ಲರ್ ಸಿನಿಮಾ.
ನಟ ಕಮ್ ನಿರ್ದೇಶಕ ಮೋಹನ್ ನಿರ್ಮಾಣದ ಚೊಚ್ಚಲ ಚಿತ್ರ 'ಮಳೆ ನಿಲ್ಲುವವರೆಗೆ'. 1950 ರ ದಶಕದ 'ಡೆಡ್ಲಿ ಗೇಮ್' ನಾಟಕ ಆಧಾರಿತ ಚಿತ್ರ 'ಮಳೆ ನಿಲ್ಲುವವರೆಗೆ'. ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್, ಹ್ಯಾಂಗ್ ಮನ್, ಡಿಫೆನ್ಸ್ ವಕೀಲ ಮತ್ತು ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯ ಸುತ್ತ ನಡೆಯುವ ಕಥೆ ಈ 'ಮಳೆ ನಿಲ್ಲುವವರೆಗೆ'. [ಪತ್ನಿ ಎದುರು ಪೇಚಿಗೆ ಸಿಲುಕಿದ ನಿರ್ದೇಶಕ ಮೋಹನ್.!]
'ಬಿವೇರ್ ಆಫ್ ರೇನ್' ಅನ್ನುವ ಅಡಿಬರಹ ಹೊಂದಿರುವ 'ಮಳೆ ನಿಲ್ಲುವವರೆಗೆ' ಚಿತ್ರದ ಮುಖ್ಯ ಪಾತ್ರಧಾರಿ ಮಳೆ. ತಾರಾಗಣದಲ್ಲಿ ಮೋಹನ್, ಕವಿತಾ ಬೋರಾ, ಭೂಮಿಕಾ, ಸೌಜನ್ಯ, ದತ್ತಣ್ಣ, ಕರಿಸುಬ್ಬು, ಶರತ್ ಲೋಹಿತಾಶ್ವ, ಶ್ರೀನಿವಾಸ್ ಪ್ರಭು ಇದ್ದಾರೆ. [ಪತ್ನಿಗೆ ಸವಾಲು ಹಾಕಿ ಗೆದ್ದ ನಿರ್ದೇಶಕ ಮೋಹನ್.!]
ಎರಡೇ ಹಾಡುಗಳಿರುವ ಈ ಚಿತ್ರದಲ್ಲಿ ಒಂದು ಹಾಡಿಗೆ ಮೋಹನ್ ದನಿಯಾಗಿದ್ದರೆ, ಇನ್ನೊಂದು ಹಾಡಲ್ಲಿ ಮೋಹನ್ ಪತ್ನಿ ಶ್ರೀವಿದ್ಯಾ ಗಾನಸುಧೆ ಹರಿಸಿದ್ದಾರೆ. ಲಯೇಂದ್ರ ಸಂಗೀತ ಸಂಯೋಜಿಸಿದ್ದಾರೆ. 'ಮಳೆ ನಿಲ್ಲುವವರೆಗೆ' ಜೊತೆಗೆ ಈ ವಾರ 'ಮೆಲೋಡಿ' ಚಿತ್ರ ಕೂಡ ತೆರೆಗೆ ಬರುತ್ತಿದೆ.
ಇಂದಿನ ಫೇಸ್ ಬುಕ್ ಯುಗದ ಉಪಯೋಗ-ದುರುಪಯೋಗಗಳನ್ನ ಸಮತೋಲನವಾಗಿ ಸೆರೆ ಹಿಡಿದು ಪ್ರೇಕ್ಷಕನ ಮುಂದೆ 'ಮೆಲೋಡಿ'ಯಾಗಿ ಪ್ರಸ್ತುತ ಪಡಿಸುವ ಪ್ರಯತ್ನ ಈ ಚಿತ್ರ. ಸುಮಧುರ ಸಂಗೀತವೇ ಪ್ರಧಾನವಾಗಿರುವ ಚಿತ್ರಕ್ಕೆ ಎಲ್.ಎನ್.ಶಾಸ್ತ್ರೀ ಸಂಗೀತ ಸಂಯೋಜಿಸಿದ್ದಾರೆ. [ಕ್ರಿಕೆಟ್ ಮುಗಿಯುವವರೆಗೆ ಬರಲ್ವಂತೆ 'ಮಳೆ ನಿಲ್ಲುವವರೆಗೆ']
'ಗಾಳಿಪಟ' ನಂತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ನಾಯಕ ನಟನಾಗಿ ಅಭಿನಯಿಸಿರುವುದು ಈ ಚಿತ್ರದಲ್ಲೇ. ಚೇತನ್ ಗಂಧರ್ವ, ಕಾರ್ತಿಕಾ ಮೆನನ್, ಅಕ್ಷತ ಮೂಲ್ರ, ಮಂಡ್ಯ ರಮೇಶ್, ಸುಧಾಕರ್ ಮತ್ತಿತರರು ತಾರಾಗಣದಲ್ಲಿದ್ದಾರೆ. [ಏಪ್ರಿಲ್ 17ರಿಂದ ಸವಿಯಿರಿ ರಾಜೇಶ್ ಕೃಷ್ಣನ್ 'ಮೆಲೋಡಿ']
ಲವ್ ಸ್ಟೋರಿ-ರೋಮ್ಯಾನ್ಸ್ ಬಯಸೋರಿಗೆ 'ಮೆಲೋಡಿ', ಹಾರರ್ ಮತ್ತು ಥ್ರಿಲ್ಲರ್ ಪ್ರಿಯರಿಗೆ 'ಮಳೆ ನಿಲ್ಲುವವರೆಗೆ'. ಈವೆರಡರಲ್ಲಿ ನಿಮ್ಮ ಆಯ್ಕೆ ಯಾವುದು? ನೀವೇ ನಿರ್ಧರಿಸಿ. (ಫಿಲ್ಮಿಬೀಟ್ ಕನ್ನಡ)