twitter
    For Quick Alerts
    ALLOW NOTIFICATIONS  
    For Daily Alerts

    ರೈತರ ಪರ ದನಿ ಎತ್ತಿ ಮೆಚ್ಚುಗೆ ಗಳಿಸಿದ 'ರಣಹೇಡಿ'

    |

    ರೈತಾಪಿ ವರ್ಗ, ರೈತರ ಸಮಸ್ಯೆ, ಅವರ ಕಷ್ಟ, ನೋವು... ಹೀಗೆ ಹಳ್ಳಿ ಜೀವನ ಕುರಿತು ಹಲವು ಸಿನಿಮಾಗಳು ಬಂದಿದೆ. ಈಗ ರೈತರ ಪರ ದನಿ ಎತ್ತುವ ಮೂಲಕ ರಣಹೇಡಿ ಎಂಬ ಚಿತ್ರ ಗಾಂಧಿನಗರದಲ್ಲಿ ಗಮನ ಸೆಳೆಯುತ್ತಿದೆ.

    ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಚಿತ್ರ ರೈತಾಪಿ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸಂಪೂರ್ಣವಾಗಿ ಹಳ್ಳಿ ಸೊಗಡಿನಲ್ಲಿ ತಯಾರಾಗಿದ್ದ ಈ ಚಿತ್ರ ಕಮರ್ಷಿಯಲ್ ಆಗಿ ಕೂಡ ಸದ್ದು ಮಾಡಿತ್ತು. ಹಳ್ಳಿ ಜೀವನ, ಕಷ್ಟ, ದ್ವೇಷ, ಪ್ರೀತಿ, ಅಸೂಯೆ, ಎಲ್ಲದರ ಮೇಲೂ ಬೆಳಕು ಚೆಲ್ಲಿದೆ.

    Kannada Movie Ranahedi released

    ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು ಎನ್ನುವ ನಿರ್ದೇಶಕರ ಆಸೆ ಈ ಮೂಲಕ ಈಡೇರಿದೆ. ರಣಹೇಡಿ ಎಂದು ಹೆಸರಿಟ್ಟು ರೈತರ ಪರ ಸಿನಿಮಾ ಎಂದರೆ ಹೇಗೆ ಎಂಬ ಸಿನಪ್ರಿಯರಲ್ಲಿ ಕಾಡಬಹುದು. ಆದರೆ, 'ರೈತ ರಣಹೇಡಿಯಲ್ಲ ಅವನು ಯೋಧ' ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಇದು ಸಿನಿಮಾದ ಪ್ರಮುಖ ಶಕ್ತಿ ಮತ್ತು ಆಕರ್ಷಣೆ ಎಂದು ಹೇಳಬಹುದು.

    ಹಳ್ಳಿ ಸೊಗಡಿನ 'ರಣಹೇಡಿ' ಸಿನಿಮಾ ಈ ವಾರ ತೆರೆಗೆಹಳ್ಳಿ ಸೊಗಡಿನ 'ರಣಹೇಡಿ' ಸಿನಿಮಾ ಈ ವಾರ ತೆರೆಗೆ

    ಅಂದ್ಹಾಗೆ, ಈ ಚಿತ್ರವನ್ನು ಮನು ಕೆ ಶೆಟ್ಟಿಹಳ್ಳಿ ನಿರ್ದೇಶನ ಮಾಡಿದ್ದಾರೆ. ಕರ್ಣ ಕುಮಾರ್ ಸಿನಿಮಾದ ನಾಯಕನಾಗಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಖಳನಾಯಕ, ಪೋಷಕ ಪಾತ್ರದಲ್ಲಿ ನಟಿಸಿದ್ದ ಕರ್ಣ ಕುಮಾರ್ ಇಲ್ಲಿ ಹೀರೋ ಆಗಿದ್ದಾರೆ.

    Kannada Movie Ranahedi released

    ಕರ್ಣ ಕುಮಾರ್ ಗೆ ಐಶ್ವರ್ಯ ರಾವ್ ಜೋಡಿಯಾಗಿದ್ದಾರೆ. ಈ ಹಿಂದೆ 'ರವಿ ಹಿಸ್ಟರಿ' ಸಿನಿಮಾದಲ್ಲಿ ನಟಿಸಿದ್ದರು. ಇಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚುತ್ ಕುಮಾರ್, ವಿ ಮನೋಹರ್, ಗಿರಿ ಚಿತ್ರದ ಪಾತ್ರಗಳಲ್ಲಿ ನಟಿಸಿದ್ದಾರೆ. ಸುರೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

    English summary
    Ranahedi kannada movie running successfully. movie has released on November 29th
    Wednesday, December 4, 2019, 17:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X