Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಪ್ರಕರಣ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೈತರ ಪರ ದನಿ ಎತ್ತಿ ಮೆಚ್ಚುಗೆ ಗಳಿಸಿದ 'ರಣಹೇಡಿ'
ರೈತಾಪಿ ವರ್ಗ, ರೈತರ ಸಮಸ್ಯೆ, ಅವರ ಕಷ್ಟ, ನೋವು... ಹೀಗೆ ಹಳ್ಳಿ ಜೀವನ ಕುರಿತು ಹಲವು ಸಿನಿಮಾಗಳು ಬಂದಿದೆ. ಈಗ ರೈತರ ಪರ ದನಿ ಎತ್ತುವ ಮೂಲಕ ರಣಹೇಡಿ ಎಂಬ ಚಿತ್ರ ಗಾಂಧಿನಗರದಲ್ಲಿ ಗಮನ ಸೆಳೆಯುತ್ತಿದೆ.
ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಚಿತ್ರ ರೈತಾಪಿ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸಂಪೂರ್ಣವಾಗಿ ಹಳ್ಳಿ ಸೊಗಡಿನಲ್ಲಿ ತಯಾರಾಗಿದ್ದ ಈ ಚಿತ್ರ ಕಮರ್ಷಿಯಲ್ ಆಗಿ ಕೂಡ ಸದ್ದು ಮಾಡಿತ್ತು. ಹಳ್ಳಿ ಜೀವನ, ಕಷ್ಟ, ದ್ವೇಷ, ಪ್ರೀತಿ, ಅಸೂಯೆ, ಎಲ್ಲದರ ಮೇಲೂ ಬೆಳಕು ಚೆಲ್ಲಿದೆ.
ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು ಎನ್ನುವ ನಿರ್ದೇಶಕರ ಆಸೆ ಈ ಮೂಲಕ ಈಡೇರಿದೆ. ರಣಹೇಡಿ ಎಂದು ಹೆಸರಿಟ್ಟು ರೈತರ ಪರ ಸಿನಿಮಾ ಎಂದರೆ ಹೇಗೆ ಎಂಬ ಸಿನಪ್ರಿಯರಲ್ಲಿ ಕಾಡಬಹುದು. ಆದರೆ, 'ರೈತ ರಣಹೇಡಿಯಲ್ಲ ಅವನು ಯೋಧ' ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಇದು ಸಿನಿಮಾದ ಪ್ರಮುಖ ಶಕ್ತಿ ಮತ್ತು ಆಕರ್ಷಣೆ ಎಂದು ಹೇಳಬಹುದು.
ಹಳ್ಳಿ ಸೊಗಡಿನ 'ರಣಹೇಡಿ' ಸಿನಿಮಾ ಈ ವಾರ ತೆರೆಗೆ
ಅಂದ್ಹಾಗೆ, ಈ ಚಿತ್ರವನ್ನು ಮನು ಕೆ ಶೆಟ್ಟಿಹಳ್ಳಿ ನಿರ್ದೇಶನ ಮಾಡಿದ್ದಾರೆ. ಕರ್ಣ ಕುಮಾರ್ ಸಿನಿಮಾದ ನಾಯಕನಾಗಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಖಳನಾಯಕ, ಪೋಷಕ ಪಾತ್ರದಲ್ಲಿ ನಟಿಸಿದ್ದ ಕರ್ಣ ಕುಮಾರ್ ಇಲ್ಲಿ ಹೀರೋ ಆಗಿದ್ದಾರೆ.
ಕರ್ಣ ಕುಮಾರ್ ಗೆ ಐಶ್ವರ್ಯ ರಾವ್ ಜೋಡಿಯಾಗಿದ್ದಾರೆ. ಈ ಹಿಂದೆ 'ರವಿ ಹಿಸ್ಟರಿ' ಸಿನಿಮಾದಲ್ಲಿ ನಟಿಸಿದ್ದರು. ಇಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚುತ್ ಕುಮಾರ್, ವಿ ಮನೋಹರ್, ಗಿರಿ ಚಿತ್ರದ ಪಾತ್ರಗಳಲ್ಲಿ ನಟಿಸಿದ್ದಾರೆ. ಸುರೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.