Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶುಕ್ರದೆಸೆ' ಪೋಸ್ಟರ್ ನೋಡಿ ಮನಸೋತ ಪ್ರೇಕ್ಷಕರು
Recommended Video
ಸ್ಟಾರ್ ನಟರ ರೆಗ್ಯುಲರ್ ಸಿನಿಮಾಗಳನ್ನ ಹೊರತುಪಡಿಸಿ ಬೇರೆ ಏನಾದರೂ ಹೊಸತು ಬೇಕು ಎಂದು ನಿರೀಕ್ಷೆ ಮಾಡುತ್ತಿರುವ ಪ್ರೇಕ್ಷಕರಿಗೆ ಈಗ 'ಶುಕ್ರದೆಸೆ' ಸಿನಿಮಾ ಖುಷಿ ಕೊಡಬಹುದು. ಯಾಕಂದ್ರೆ, ಶುಕ್ರದೆಸೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಕೇವಲ ಪೋಸ್ಟರ್ ಮೂಲಕವೇ ಗಮನ ಸೆಳೆದಿದೆ.
ಜೋಸೆಫ್ ನೀನಾಸಂ ನಿರ್ದೇಶನ ಮಾಡುತ್ತಿರುವ 'ಶುಕ್ರದೆಸೆ' ಸಿನಿಮಾ ಈಗ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ಸಮಾಜದ ವ್ಯವಸ್ಥೆಯ ವಿರುದ್ಧ ಮಾತನಾಡಲು ಸಾಧ್ಯವಾಗದೆ ಷಡ್ಯಂತ್ರಕ್ಕೆ ಬಲಿಯಾಗುವ ಅಮಾಯಕರು ಹಾಗೂ ಅಂತಹ ವ್ಯವಸ್ಥೆಯ ಸುತ್ತ ಕಥೆ ಹೆಣೆಯಲಾಗಿದೆ.
ರಾಜಣ್ಣನನ್ನು ಬಿಟ್ಟು ಶಿವಣ್ಣನ ಮೊರೆ ಹೋದ 'ದಾರಿ ತಪ್ಪಿದ ಮಗ'
ಅನಿಲ್ ಬಿದಹಾಸ್, ಸೌಮ್ಯ ಜಗನ್ ಮೂರ್ತಿ, ಖುಷ್ಬು ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆನಿಶಾ ಬಿದಹಾಸ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ವಿಶೇಷ ಅಂದ್ರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವುದು ಕೂಡ ಅನಿಲ್ ಬಿದಹಾಸ್ ಅವರೇ.
ಅಯ್ಯೋರಾಮ ಎಸ್ ಆರ್ ರಾಮಕೃಷ್ಣ ಅವರ ಸಂಗೀತ, ಅರ್ಜುನ್ ಅಜಿತ್ ಅವರ ಛಾಯಾಗ್ರಹಣ ಹೊಂದಿದೆ.
ನಿರ್ದೇಶಕ ಜೋಸೆಫ್ ಕುರಿತು
ಕೇರಳದ ತಿರುವನಂತಪುರಂ ಮೂಲದವರಾದ ಜೋಸೆಫ್, ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ರೂಢಿಸಿಕೊಂಡರು. ಅಭಿನಯ ರಂಗ ಅಧ್ಯಯನ ಸಂಸ್ಥೆಯಲ್ಲಿ ನಟನಾಗಿ, ತಂತ್ರಜ್ಞನಾಗಿ ರಂಗಭೂಮಿ ಜೊತೆ ನಂಟು ಬೆಳೆಸಿಕೊಂಡರು. ಚಲಚ್ಚಿತ್ರ ಎಂಬ ಫಿಲಂ ಸೊಸೈಟಿಯಲ್ಲಿ ಅಧ್ಯಯನ ಮಾಡಿ ಸಿನಿಮಾ ಬಗ್ಗೆಯೂ ಆಸಕ್ತಿ ಹೆಚ್ಚಿಸಿಕೊಂಡರು.
ಸುದೀಪ್ 'ಕನ್ವರ್ ಲಾಲ್' ಸಿನಿಮಾ ನಿಂತಿದ್ಯಾಕೆ?
ಗಿರೀಶ್ ಕಾಸರವಳ್ಳಿ, ಪಿಎಚ್ ವಿಶ್ವನಾಥ್, ಜೇಕಬ್ ವರ್ಗೀಸ್, ಮಹೇಶ್, ಎಸ್ ಮಹೇಂದರ್ ಅಂತವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದು, ಈಗ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಕೈಹಾಕಿದ್ದಾರೆ.