Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ತಿಂಗಳಾಂತ್ಯಕ್ಕೆ 'ವಾಸ್ಕೊಡಿಗಾಮ' ನಿಮ್ಮ ಮುಂದೆ
ಗಾಂಧಿನಗರದಲ್ಲಿ ಚಿತ್ರಮಂದಿರದ ಅಭಾವದಿಂದ 'ವಾಸ್ಕೋಡಿಗಾಮ' ಚಿತ್ರ ಬಿಡುಗಡೆ ಮುಂದಕ್ಕೆ ಹೋಗುತ್ತಲೆ ಇತ್ತು. ಇದೀಗ ಥಿಯೇಟರ್ ಸಮಸ್ಯೆಯನ್ನ ಬಗೆಹರಿಸಿಕೊಂಡಿರುವ 'ವಾಸ್ಕೋಡಿಗಾಮ' ಈ ತಿಂಗಳಾಂತ್ಯಕ್ಕೆ ತೆರೆ ಕಾಣಲಿದೆ.
ಹೌದು, ಅಕ್ಟೋಬರ್ 23 ರಂದು ದಸರಾ ಹಬ್ಬದ ಶುಭ ಸಂದರ್ಭದಲ್ಲಿ ರಾಜ್ಯಾದ್ಯಂತ 'ವಾಸ್ಕೊಡಿಗಾಮ'ನ ಆರ್ಭಟ ಶುರುವಾಗಲಿದೆ. 'ವಾಸ್ಕೋಡಿಗಾಮ' ಚಿತ್ರಕ್ಕೆ ಬೆಂಗಳೂರಿನ ಕೆ.ಜಿ.ರೋಡ್ ನಲ್ಲಿರುವ ತ್ರಿಭುವನ್ ಮೇನ್ ಥಿಯೇಟರ್ ಆಗಿ ಫಿಕ್ಸ್ ಆಗಿದೆ. ['ವಾಸ್ಕೋಡಿಗಾಮ' ಚಿತ್ರಕ್ಕೆ ವಿದ್ಯಾರ್ಥಿಯೇ ಪ್ರೊಡ್ಯೂಸರ್]
ಈಗಾಗಲೇ ರಿಲೀಸ್ ಆಗಿರುವ 'ವಾಸ್ಕೋಡಿಗಾಮ' ಚಿತ್ರದ ಟ್ರೈಲರ್ ಕಾಲೇಜುಗಳ ಅಂಗಳದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಕಾಲೇಜು ಪ್ರೊಫೆಸರ್ ಆಗಿ ವಿವಿಧ ಶೇಡ್ ಗಳಲ್ಲಿ ನಟ ಕಿಶೋರ್ ಕಾಣಿಸಿಕೊಂಡಿದ್ರೆ, ಅವರಿಗೆ ಜೋಡಿಯಾಗಿ ಪಾರ್ವತಿ ನಾಯರ್ ಇದ್ದಾರೆ.[ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ವಾಸ್ಕೋಡಿಗಾಮ' ಯಾರು?]
ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ರಾಗ ಎಳೆಯುವ 'ವಾಸ್ಕೊಡಿಗಾಮ' ಚಿತ್ರಕ್ಕೆ ಮಧುಚಂದ್ರ ಆಕ್ಷನ್ ಕಟ್ ಹೇಳಿದ್ರೆ, ಅಶ್ವಿನ್ ವಿಜಯ್ ಕುಮಾರ್ ಎಂಬ ಎಂ.ಬಿ.ಎ ಸ್ಟುಡೆಂಟ್ ಬಂಡವಾಳ ಹಾಕಿದ್ದಾರೆ.