Don't Miss!
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- News ಜಲ ಜೀವನ್ ಮಿಷನ್ ಯೋಜನೆ ವ್ಯರ್ಥ: ಈ ವೃದ್ದೆಗೆ ಕಣ್ಣೀರೇ ಗತಿ
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮಾ ರಾಮ...., ಗೋಧಿ ಬಣ್ಣ..., ಉಪ್ಪಿನ ಕಾಗದ ಚಿತ್ರಗಳಿಗೆ ಪ್ರಶಸ್ತಿ
ಭಾರತೀಯ ಸಿನಿಮಾ ವಿಭಾಗದಲ್ಲಿ ಕನ್ನಡದ 'ಹರಿಕಥಾ ಪ್ರಸಂಗ' ಹಾಗೂ 'ಕಾಡುಕ್ಕೂಕ್ಕನ್ ನೇರಂ' ಚಿತ್ರಗಳು ಅತ್ಯುತ್ತಮ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದವು. ಕಾಡುಕ್ಕೂಕ್ಕನ್ ನೇರಂ ಚಿತ್ರಕ್ಕೆ ಲೇಥ್ ಜೋಷಿ ಪ್ರಶಸ್ತಿ ಲಭಿಸಿದೆ.
ಮೈಸೂರು, ಫೆಬ್ರವರಿ 9: ಕಳೆದೊಂದು ವಾರದಿಂದ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಗುರುವಾರ ವೈಭವದ ತೆರೆಬಿತ್ತು. ಸಮಾರೋಪ ಸಮಾರಂಭದಲ್ಲಿ ಸಿನಿಮೋತ್ಸವದಲ್ಲಿ ವಿವಿಧ ವಿಭಾಗಗಳಿಗೆ ಸ್ಪರ್ಧಿಸಿದ್ದ ದೇಶ, ವಿದೇಶಗಳ ಚಲನಚಿತ್ರಗಳಲ್ಲಿ ಹಲವಾರು ಚಿತ್ರಗಳು ಪ್ರಶಸ್ತಿಗೆ ಭಾಜನವಾದವು.
ಅವುಗಳಲ್ಲಿ
ಕನ್ನಡ
ಚಿತ್ರಗಳ
ವಿಭಾಗದಲ್ಲಿ
'ರಾಮಾ
ರಾಮ
ರೇ'
ಮೊದಲ
ಅತ್ಯುತ್ತಮ
ಚಿತ್ರವಾಗಿ
ಹೊರಹೊಮ್ಮಿದರೆ,
'ಪಲ್ಲಟ'
ಚಿತ್ರ
ದ್ವಿತೀಯ
ಹಾಗೂ
'ಗೋಧಿ
ಬಣ್ಣ
ಸಾಧಾರಣ
ಮೈಕಟ್ಟು'
ಚಿತ್ರ
ತೃತೀಯ
ಅತ್ಯುತ್ತಮ
ಚಿತ್ರವಾಗಿ
ಪ್ರಶಸ್ತಿ
ಪಡೆಯಿತು.
ಇನ್ನು,
ಬಿ.
ಸುರೇಶ್
ನಿರ್ದೇಶನದ
ಉಪ್ಪಿನ
ಕಾಗದ
ಚಿತ್ರವು
ಅಂತಾರಾಷ್ಟ್ರೀಯ
ಜ್ಯೂರಿ
ವಿಭಾಗದ
ಮೆಚ್ಚುಗೆಗೆ
ಪಾತ್ರವಾಯಿತು.
ಇನ್ನು, ಬೆಸ್ಟ್ ಕನ್ನಡ ಪಾಪ್ಯುಲರ್ ಎಂಟರ್ಟೈನ್ ಮೆಂಟ್ ಚಿತ್ರಗಳ ವಿಭಾಗದಲ್ಲಿ, ಸುದೀಪ್ ಅಭಿನಯದ 'ಕೋಟಿಗೊಬ್ಬ-೨' ಮೊದಲ ಸ್ಥಾನ ಪಡೆದರೆ, ಆನಂತರದ ಸ್ಥಾನಗಳನ್ನು ದರ್ಶನ್ ಅಭಿನಯದ 'ಜಗ್ಗುದಾದ', ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರಗಳು ಪಡೆದುಕೊಂಡವು.
ಇನ್ನು, ಭಾರತೀಯ ಸಿನಿಮಾ ವಿಭಾಗದಲ್ಲಿ ಕನ್ನಡದ 'ಹರಿಕಥಾ ಪ್ರಸಂಗ' ಹಾಗೂ 'ಕಾಡುಕ್ಕೂಕ್ಕನ್ ನೇರಂ' ಚಿತ್ರಗಳು ಅತ್ಯುತ್ತಮ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದವು. ಕಾಡುಕ್ಕೂಕ್ಕನ್ ನೇರಂ ಚಿತ್ರಕ್ಕೆ ಲೇಥ್ ಜೋಷಿ ಪ್ರಶಸ್ತಿ ಲಭಿಸಿದೆ.
ವಿಮರ್ಶಕರ ಮೆಚ್ಚುಗೆಗೆ ಮಣಿಪುರದ 'ಲೇಡಿ ಆಫ್ ಲೇಕ್' ಚಿತ್ರ ಆಯ್ಕೆಯಾಯಿತು. ವಿಶೇಷ ಜ್ಯೂರಿ ಪ್ರಶಸ್ತಿಯು ಲತೆ ಜೋಷಿ ಚಿತ್ರದ ಪಾಲಾಯಿತು.
ಏಷ್ಯಾ ವಿಭಾಗದಲ್ಲಿ ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ಕಿರ್ಗಿಸ್ತಾನದ 'ಎ ಫಾದರ್ಸ್ ವಿಲ್' ಎಂಬ ಚಿತ್ರ ಪಡೆದುಕೊಂಡಿತು.
ರಾಜ್ಯಪಾಲ ವಜುಭಾಯಿವಾಲ ಪ್ರಶಸ್ತಿ ವಿತರಿಸಿದರು. ಸಚಿವ ಮಹದೇವಪ್ಪ , ಮಹಾಪೌರರಾದ ರವಿಕುಮಾರ್ ಶಾಸಕಾಂಗದ ಸೋಮಶೇಖರ್ ಮತ್ತಿತರ ಗಣ್ಯರು ಭಾಗಿಯಾಗಿದ್ದರು.